Friday, September 20, 2024
Friday, September 20, 2024

ಅಗರಬತ್ತಿ ಉದ್ಯಮಕ್ಕೆ ಬಹುದೊಡ್ಡ ರಿಲೀಫ್

ಅಗರಬತ್ತಿ ಉದ್ಯಮಕ್ಕೆ ಬಹುದೊಡ್ಡ ರಿಲೀಫ್

Date:

ನವದೆಹಲಿ: ಕಾರ್ಮಿಕ ಆಧಾರಿತ ಉದ್ಯಮವಾದ ಅಗರಬತ್ತಿ ನಿರ್ಮಾಣಕ್ಕೆ ಅಗತ್ಯದ ಕಚ್ಚಾ ವಸ್ತುವಾದ ಬಿದಿರು ಕಡ್ಡಿ ಹೊರದೇಶದಿಂದ ಅಮದುಗೊಳ್ಳುತ್ತಿತು. ಕೇಂದ್ರ ಸರಕಾರದ ಆಮದು ನಿಯಮಗಳ ಪ್ರಕಾರ ಈ ಬಿದಿರು ಕಡ್ಡಿಗಳು ‘ಪ್ಲಾಂಟ್ ಕ್ವಾರಂಟೇನ್’ ಪರೀಕ್ಷೆಗೆ ಒಳಪಡಬೇಕಾದ ಅನಿವಾರ್ಯತೆಯಿಂದ ಅಗರಬತ್ತಿ ಉದ್ಯಮಕ್ಕೆ ಅಗತ್ಯವಾದ ಬಿದಿರು ಕಡ್ಡಿಗಳು ತಕ್ಕ ಸಮಯಕ್ಕೆ ಕಾರ್ಖಾನೆ/ಕಂಪನಿಗಳಿಗೆ ತಲುಪುತ್ತಿರಲಿಲ್ಲ.

ಈ ಕಾರಣದಿಂದ 10.00 ಲಕ್ಷಕ್ಕೂ ಹೆಚ್ಚಿನ ಜನರು ಅವಲಂಬಿತವಾಗಿರುವ ಅಗರಬತ್ತಿ ಉದ್ಯಮವು ಕಚ್ಚಾವಸ್ತುವಿನ ಕೊರತೆಯನ್ನು ಅನುಭವಿಸಿತ್ತು. ಈ ಸಂದರ್ಭದಲ್ಲಿ ಅಖಿಲ ಭಾರತೀಯ ಅಗರಬತ್ತಿ ಉತ್ಪಾದಕರ ಸಂಘ ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆಯವರನ್ನು ಭೇಟಿಯಾಗಿ ಉದ್ಯಮದ ಸಮಸ್ಯೆಯನ್ನು ತೋಡಿಕೊಂಡಿದ್ದರು.

ಅಗರಬತ್ತಿ ಉದ್ಯಮದ ಸಮಸ್ಯೆಯನ್ನು ಮನಗಂಡ ಕೇಂದ್ರ ಸಚಿವೆ, ಕೇಂದ್ರ ಕೃಷಿ ಇಲಾಖೆಯ ಪ್ಲಾಂಟ್ ಕ್ವಾರಂಟೈನ್ ವಿಭಾಗಕ್ಕೆ ಸೂಚನೆ ನೀಡಿ, ಅಗರಬತ್ತಿ ಉದ್ಯಮಕ್ಕೆ ಅಗತ್ಯದ ವಿನಾಯಿತಿಯನ್ನು ನೀಡುವಂತೆ ಆದೇಶಿಸಿದರು. ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆಯವರ ಸೂಚನೆಯಂತೆ ಕೃಷಿ ಇಲಾಖೆಯು 6.00ಎಂಎಂ ಕೆಳಗಿನ ಬಿದಿರು ಕಡ್ಡಿಗಳಿಗೆ ಪ್ಲಾಂಟ್ ಕ್ವಾರಂಟೈನ್ ಪ್ರಕ್ರಿಯೆಯಿಂದ ವಿನಾಯಿತಿಯನ್ನು ನೀಡಿ ಆದೇಶ ನೀಡಿದೆ.

ತನ್ಮೂಲಕ 10 ಲಕ್ಷಕ್ಕೂ ಹೆಚ್ಚಿನ ಜನರ ಜೀವನಾಧಾರವಾಗಿದ್ದ ಅಗರಬತ್ತಿ ಉದ್ಯಮಕ್ಕೆ ಬಹು ದೊಡ್ಡ ಸಹಾಯವಾಗಿದ್ದು, ಅಖಿಲ ಭಾರತೀಯ ಅಗರಬತ್ತಿ ಉದ್ಯಮಿಗಳ ಸಂಘಟನೆ ಸಮಸ್ತ ಉದ್ಯೋಗಿಗಳ ಪರವಾಗಿ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆಯವರಿಗೆ ಕೃತಜ್ಞತೆ ಸಲ್ಲಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪುರ: ರಸ್ತೆ ಕಾಮಗಾರಿ ಪೂರ್ಣ

ಮಣಿಪುರ, ಸೆ.19: ಕಾಪು ವಿಧಾನಸಭಾ ಕ್ಷೇತ್ರದ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ...

ಎಲ್ಲೋರದ ವಿಶ್ವಕರ್ಮ ಗುಹೆ

ಭಾರತವನ್ನು ಕಲೆ-ವಾಸ್ತುಶಿಲ್ಪ ಕ್ಷೇತ್ರದಲ್ಲಿ "ವಿಸ್ಮಯಗಳ ಬೀಡು" ಮತ್ತು ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ, ಕಲಾಶೈಲಿಯಲ್ಲಿ...

ಬಾಂಗ್ಲಾ ಟೆಸ್ಟ್ ಸರಣಿ: ಅಶ್ವಿನ್ ಅಜೇಯ ಶತಕ

ಚೆನ್ನೈ, ಸೆ.19: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಭಾರತ...

ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ: ಅರ್ಜಿ ಆಹ್ವಾನ

ಉಡುಪಿ, ಸೆ.19: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ...
error: Content is protected !!