Friday, February 21, 2025
Friday, February 21, 2025

ಮಹಾಕುಂಭ ಮೇಳದಲ್ಲಿ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ದೇವಿಗೆ ಜಲಾಭಿಷೇಕ

ಮಹಾಕುಂಭ ಮೇಳದಲ್ಲಿ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ದೇವಿಗೆ ಜಲಾಭಿಷೇಕ

Date:

ತುಮಕೂರು, ಫೆ.19: ಕಲ್ಪತರು ನಾಡು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ಪಟ್ಟಣದ ಶಕ್ತಿ ಮಾತೆ ಶ್ರೀ ಮಹಾಲಕ್ಷ್ಮೀ ಮದ್ದರಲಕ್ಕಮ್ಮ ಅಮ್ಮನವರಿಗೆ ಉತ್ತರಪ್ರದೇಶದ ಪ್ರಯಾಗರಾಜ್ ನಲ್ಲಿ ನೆಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕ್ಷೀರ, ಅರಿಶಿನ, ಕುಂಕುಮ, ಗಂಧ, ಭಸ್ಮ, ತುಪ್ಪ, ಪವಿತ್ರ ಇತರೆ ಸುಗಂಧದ ಅಭಿಷೇಕ ಜರುಗಿತು. ಈ ಸಂದರ್ಭದಲ್ಲಿ ತ್ರಿವೇಣಿ ಸಂಗಮದಲ್ಲಿ ಅಮ್ಮನವರ ಭಕ್ತರು ತೀರ್ಥ ಸ್ನಾನ ಮಾಡಿದರು ಹಾಗೂ ಗಂಗಾ, ಯಮುನಾ, ಸರಸ್ವತಿ, ಪವಿತ್ರ ನದಿಗಳಿಗೆ ಪೂಜೆ ಸಲ್ಲಿಸಿ ಬಾಗಿನ ಸಮರ್ಪಿಸಿ, ನಾಡಿನ ಒಳಿತಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಪೂಜಾ ನೇತೃತ್ವವನ್ನು ಶ್ರೀ ಕುಮಾರಸ್ವಾಮಿ ಸ್ವಾಮೀಜಿ ಮಾಗಡಿ, ಹಾಗೂ ಪಂಡಿತ್ ನಾರಾಯಣ ಆಚಾರ್ಯ ವಹಿಸಿಕೊಂಡಿದ್ದರು ತ್ರಿವೇಣಿ ಸಂಗಮದ ತೀರ್ಥದಿಂದ ಆಸಕ್ತಿಯುಳ್ಳ ಭಕ್ತರಿಗೆ ತೀರ್ಥ ಸ್ನಾನವನ್ನು ಸಹ ದೇವಾಲಯದಲ್ಲಿ ಜರುಗಿಸಲಾಗುವುದು ಎಂದು ಧರ್ಮದರ್ಶಿ ರಂಗಸ್ವಾಮಿ ಸಿ ಎನ್ ತಿಳಿಸಿದರು. ನಾಗರತ್ನ, ಅಕ್ಷತ, ಮನೋಜ್, ಬ್ರಿತಿ, ಆಡಳಿತ ಮುಖ್ಯಸ್ಥರು ಲಕ್ಷ್ಮೀಶ ಭಾಗವಹಿಸಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಫೆ.23: ವಿಶ್ವಪ್ರಭಾ ಪುರಸ್ಕಾರ -2025 ಹಾಗೂ ನಾಟಕ

ಉಡುಪಿ, ಫೆ.20: ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ), ಉಡುಪಿ ಇದರಿಂದ ಪ್ರತಿಷ್ಠಿತ...

ಹೃದಯಜ್ಯೋತಿ ಯೋಜನೆ ಎಲ್ಲಾ ತಾಲೂಕುಗಳಿಗೆ ವಿಸ್ತರಣೆ: ದಿನೇಶ್‌ ಗುಂಡೂರಾವ್‌

ಬೆಂಗಳೂರು, ಫೆ‌.20: ಹಠಾತ್ ಹೃದಯಾಘಾತದ ಸಂದರ್ಭದಲ್ಲಿ ಜೀವರಕ್ಷಕವಾಗಿರುವ ಡಾ.ಪುನೀತ್ ರಾಜ್‌ಕುಮಾರ್ ಹೃದಯಜ್ಯೋತಿ...

ರಸ್ತೆ ಅಪಘಾತಗೊಂಡು, ಮೆದುಳು ನಿಷ್ಕ್ರೀಯಗೊಂಡ ನಂತರ ಅಂಗದಾನದ ಮೂಲಕ ಇತರರಿಗೆ ಜೀವದ ಸಾರ್ಥಕತೆ

ಮಣಿಪಾಲ, ಫೆ.20: ಉಡುಪಿ ಜಿಲ್ಲೆಯ ಕುಂದಾಪುರ ನಿವಾಸಿ 35 ವರ್ಷದ ರಾಘವೇಂದ್ರ...

ರಾಜ್ಯ ಬಜೆಟ್- ಉಡುಪಿ ಕ್ಷೇತ್ರದ ಯೋಜನೆಗಳಿಗೆ ವಿಶೇಷ ಅನುದಾನಕ್ಕೆ ಸಿಎಂಗೆ ಶಾಸಕ ಯಶ್ಪಾಲ್ ಸುವರ್ಣ ಮನವಿ

ಬೆಂಗಳೂರು, ಫೆ.20: ಮುಂಬರುವ ರಾಜ್ಯ ಬಜೆಟ್ ನಲ್ಲಿ ಉಡುಪಿ ಕ್ಷೇತ್ರದ ಅಭಿವದ್ಧಿ...
error: Content is protected !!