Tuesday, February 25, 2025
Tuesday, February 25, 2025

ಪೂರ್ವಜರು ಮರಗಳನ್ನು ನೆಟ್ಟ ಕಾರಣ ನಾವು ಅಸ್ತಿತ್ವದಲ್ಲಿದ್ದೇವೆ: ಡಾ. ಬಾಲಕೃಷ್ಣ ಮದ್ದೋಡಿ

ಪೂರ್ವಜರು ಮರಗಳನ್ನು ನೆಟ್ಟ ಕಾರಣ ನಾವು ಅಸ್ತಿತ್ವದಲ್ಲಿದ್ದೇವೆ: ಡಾ. ಬಾಲಕೃಷ್ಣ ಮದ್ದೋಡಿ

Date:

ಉಡುಪಿ: ಪ್ರಕೃತಿಯಲ್ಲಿ ನಾವು ಕಾಣುವ ಜೀವನ ಚಕ್ರವನ್ನು ನಮ್ಮ ಪೂರ್ವಜರು ಉಳಿಸಿ ಬೆಳೆಸಿದ್ದಾರೆ ಆದ್ದರಿಂದ ಅದನ್ನು ಮತ್ತಷ್ಟು ಕೊಂಡೊಯ್ಯುವುದು ನಮ್ಮ ಜವಾಬ್ದಾರಿ ಎಂದು ಪರಿಸರವಾದಿ ಮತ್ತು ರೋಟರಿ ಕ್ಲಬ್ ಉಡುಪಿ ರಾಯಲ್ ಅಧ್ಯಕ್ಷ ಡಾ. ಬಾಲಕೃಷ್ಣ ಮದ್ದೋಡಿ ಹೇಳಿದರು.

ಜೆಸಿಐ ಕಲ್ಯಾಣಪುರ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ​​ಉಡುಪಿ ವಲಯ ಮತ್ತು ರೋಟರಿ ಕ್ಲಬ್ ಉಡುಪಿ ರಾಯಲ್ ಸಂಯುಕ್ತವಾಗಿ ನಿಟ್ಟೂರು ಶಾಲಾ ಆವರಣದಲ್ಲಿ ವನಮೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜೆಸಿಐ ಅಧ್ಯಕ್ಷೆ ಜಯಶ್ರೀ ಮಿತ್ರ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ತಮ್ಮ ಜಿಲ್ಲಾ ಯೋಜನೆಯಾದ ನಾಟಿಯ ಮಹತ್ವದ ಕುರಿತು ಉಲ್ಲೇಖಿಸಿದರು. ಉಡುಪಿ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಸಾಕಷ್ಟು ಪರಿಸರ ಸಂಬಂಧಿ ಯೋಜನೆಗಳನ್ನು ಮಾಡಿದ ಮತ್ತು ಕಾರ್ಯಕ್ರಮವನ್ನು ಸಂರಕ್ಷಿಸಲು ಪ್ರೇರೇಪಿಸಿದ ಬದ್ಧ ಪರಿಸರವಾದಿ ನಿತ್ಯಾನಂದರನ್ನು ಸನ್ಮಾನಿಸಲಾಯಿತು.

ವಲಯ ಸಂಯೋಜಕರಾದ ಪೂರ್ಣಿಮಾ ಕೊಡವೂರು, ಲಕ್ಷ್ಮಿ ಶೆಟ್ಟಿ, ಜೆಸಿಐ ಕಲ್ಯಾಣಪುರದ ಸ್ಥಾಪಕಾಧ್ಯಕ್ಷ ಜೆಸಿ ಜಗದೀಶ್ ಕೆಮ್ಮಣ್ಣು, ಪೂರ್ವಾಧ್ಯಕ್ಷ ಅರುಣ್ ಕುಮಾರ್, ಕಾರ್ಯದರ್ಶಿ ಅನುಸೂಯ, ಪದ್ಮನಾಭ, ಗುಣವರ್ಮ, ಗಣಪತಿ, ಛಾಯಾಗ್ರಾಹಕರಾದ ಪ್ರವೀಣ್ ಕೊರೆಯ, ಸುರಭಿ ಸುಧೀರ್ ಶೆಟ್ಟಿ, ದಿವಾಕರ್ ಹಿರಿಯಡ್ಕ, ಮಿತ್ರ ಕುಮಾರ್, ಪ್ರವೀಣ್ ಹೂಡೆ, ನಾರಾಯಣ್ ಜತ್ತನ್, ಸಂತೋಷ್ ಕೊರಂಗ್ರಪಾಡಿ, ಪ್ರಕಾಶ್ ಕೊಡಂಕೂರು, ಸುಕೇಶ್ ಅಮೀನ್, ಸಂದೀಪ್ ಕಾಮತ್, ಎಂ .ಎಸ್. ಮಂಜು, ಸತೀಶ್ ಶೇರಿಗಾರ್, ಸುಶಾಂತ್ ಕೆರೆಮಠ, ವಸಂತ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

ಸಹ ಶಿಕ್ಷಕ ಸೀಮಾ ಕಾರ್ಯಕ್ರಮ ಸಂಯೋಜಿಸಿದರು. ಸೌತ್ ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ ​​ಉಡುಪಿ ವಲಯಾಧ್ಯಕ್ಷ ಜನಾರ್ದನ್ ಕೊಡವೂರು ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಕ್ಕೆಹಳ್ಳಿ: ಕಲಿಕಾ ಹಬ್ಬ

ಬ್ರಹ್ಮಾವರ, ಫೆ.25: ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ,...

ಅಧ್ಯಾತ್ಮ ವಿದ್ಯೆಯ ಅಧ್ಯಯನದಿಂದ ನಮ್ಮ ವಿಕಾಸ: ಪುತ್ತಿಗೆ ಶ್ರೀಪಾದರು

ಉಡುಪಿ, ಫೆ.25: ಲೌಕಿಕ ಶಿಕ್ಷಣದಿಂದ ವೃತ್ತಿಯ ಸಂಪಾದನೆಯಾಗುತ್ತದೆ. ಅಧ್ಯಾತ್ಮ ಶಿಕ್ಷಣದಿಂದ ಜೀವನ...

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...
error: Content is protected !!