Saturday, October 12, 2024
Saturday, October 12, 2024

ಅತೀ ಸಾಮಾನ್ಯನಾಗುವ ಛಲದಿಂದ ಗಾಂಧೀಜಿ ಮಹಾತ್ಮರಾಗಿದ್ದಾರೆ: ಡಾ. ಪ್ರಸಾದ್ ರಾವ್

ಅತೀ ಸಾಮಾನ್ಯನಾಗುವ ಛಲದಿಂದ ಗಾಂಧೀಜಿ ಮಹಾತ್ಮರಾಗಿದ್ದಾರೆ: ಡಾ. ಪ್ರಸಾದ್ ರಾವ್

Date:

ಮಲ್ಪೆ: ಗಾಂಧಿ ಚಿಂತನೆಗಳು ಇಂದು ಮಹತ್ವವನ್ನು ಪಡೆಯುತ್ತಿರುವುದು ಮಹತ್ವದ ವಿಚಾರವಾಗಿದೆ. ಕೊರೊನಾ ನಮಗೆ ಕಲಿಸಿದ ಪಾಠಗಳಲ್ಲಿ ಗಾಂಧಿ ಚಿಂತನೆ ಪ್ರಸ್ತುತತೆಯ ಗ್ರಾಮೀಣ ಅಭಿವೃದ್ದಿ, ನೈರ್ಮಲ್ಯ, ವೈಯುಕ್ತಿಕ ಶಿಸ್ತು,
ಆರೋಗ್ಯದ ಕುರಿತಾದ ಕಾಳಜಿಗಳ ಬಗ್ಗೆ ಗಾಂಧೀಜಿಯವರ ಚಿಂತನೆಗಳು ಎಂದೂ ಸಕಾಲಿಕ ಎಂದು ಖ್ಯಾತ ಚಿಂತಕ ಮತ್ತು ಗಾಂಧಿ ಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿಗಳಾದ ಇಂದಿರಾ ಕೃಷ್ಣಪ್ಪ ಹೇಳಿದರು.

ಅವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ರಾಜ್ಯಶಾಸ್ತ್ರ ವಿಭಾಗ ಮತ್ತು ಐ.ಕ್ಯೂ.ಎ.ಸಿ. ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಬೆಂಗಳೂರು ಸಹಯೋಗದಲ್ಲಿ ನಡೆದ ಗಾಂಧಿ ಚಿಂತನೆಯ ಪ್ರಸ್ತುತತೆ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಗಾಂಧಿ ಚಿಂತನೆಯ ಬಗ್ಗೆ ಉಪನ್ಯಾಸ ನೀಡಿದ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಹೆಬ್ರಿ ಇಲ್ಲಿನ ಪ್ರಾಂಶುಪಾಲರಾದ ಡಾ. ಪ್ರಸಾದ್ ರಾವ್ ಎಂ. ಅವರು, ಹಿಂಸಾತ್ಮಕ ಹೋರಾಟದಿಂದ ಗಳಿಸಿದ ವಿಜಯ ಕ್ಷಣಿಕ. ಹಿಂಸೆಯಿಂದ ಪ್ರತಿಹಿಂಸೆ ಮಾತ್ರ ಹುಟ್ಟುತ್ತದೆ ಎನ್ನುವ ಗಾಂಧಿಯ ಮಾತು ಎಲ್ಲಾ ಕಾಲಕ್ಕೂ ಪ್ರಸ್ತುತ.

ಶಾಂತಿಗಾಗಿ ಹೋರಾಟ ಎಂದರೆ ಅದು ನೈತಿಕವಾಗಿಯೂ ಮತ್ತು ಅಹಿಂಸಾತ್ಮಕವಾಗಿಯೂ ಇರಲೇಬೇಕಾಗುತ್ತದೆ. ಈ ಕಾರಣದಿಂದ ನೈತಿಕ ವ್ಯಕ್ತಿತ್ವ ಬೆಳೆಸಿಕೊಂಡಾಗ ಮಾತ್ರ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ. ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಿದ್ದರು.

ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಮಂಜುನಾಥ ಸ್ವಾಗತಿಸಿ, ಉಪನ್ಯಾಸಕಿ ಪ್ರತಿಮಾ ವಂದಿಸಿದರು. ಉಪನ್ಯಾಸಕ ದಯಾನಂದ ಕುಮಾರ್ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಟಾಟಾ ಟ್ರಸ್ಟ್‌ನ ಅಧ್ಯಕ್ಷರಾಗಿ ನೋಯೆಲ್ ಟಾಟಾ ನೇಮಕ

ಮುಂಬಯಿ, ಅ.11: ಟಾಟಾ ಗ್ರೂಪ್‌ನ ಅಂಗವಾದ ಟಾಟಾ ಟ್ರಸ್ಟ್‌ನ ಅಧ್ಯಕ್ಷರಾಗಿ ನೋಯೆಲ್...

ಏರ್ ಇಂಡಿಯಾ ಎಕ್ಸ್‌ಪ್ರೆಸ್ ನಲ್ಲಿ ತಾಂತ್ರಿಕ ಸಮಸ್ಯೆ; ತುರ್ತು ಲ್ಯಾಂಡಿಂಗ್

ತಿರುಚಿರಾಪಳ್ಳಿ, ಅ.11: ತಿರುಚಿರಾಪಳ್ಳಿಯಿಂದ ಶಾರ್ಜಾಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ...

ಗೂಡ್ಸ್ ರೈಲಿಗೆ ಮೈಸೂರು-ದರ್ಭಾಂಗ ಎಕ್ಸ್‌ಪ್ರೆಸ್ ಡಿಕ್ಕಿ

ಯು.ಬಿ.ಎನ್.ಡಿ., ಅ.11: ಶುಕ್ರವಾರ ರಾತ್ರಿ 8.50ರ ಸುಮಾರಿಗೆ ಚೆನ್ನೈ ವಿಭಾಗದ ಗುಮ್ಮಿಡಿಪೂಂಡಿ...

ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ: ದ.ಕ. ಜಿಲ್ಲಾ ಸಮಿತಿಗಳ ಉದ್ಘಾಟನೆ

ಮಂಗಳೂರು, ಅ.11: ಸಂಪೂರ್ಣ ಶಿಲಾಮಯವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ...
error: Content is protected !!