Friday, September 20, 2024
Friday, September 20, 2024

ಕುಂದಾಪ್ರ ಕನ್ನಡ ನಮ್ಮ ಬದುಕಿನ ಭಾವನಾತ್ಮಕ ಕೊಂಡಿ: ಪ್ರಶಾಂತ್ ಶೆಟ್ಟಿ ಕೋಟ

ಕುಂದಾಪ್ರ ಕನ್ನಡ ನಮ್ಮ ಬದುಕಿನ ಭಾವನಾತ್ಮಕ ಕೊಂಡಿ: ಪ್ರಶಾಂತ್ ಶೆಟ್ಟಿ ಕೋಟ

Date:

ಕೋಟ: ನಾವು ದಿನನಿತ್ಯ ಆಡುವ ಭಾಷೆಯ ಬಗ್ಗೆ ಕೀಳರಿಮೆ ತೋರದೆ, ಅವಕಾಶವಿದ್ದಾಗ ಹೆಚ್ಚಾಗಿ ಅದನ್ನೇ ಬಳಸಿದಾಗ ಆ ಭಾಷೆ ಬೆಳೆಯಲು ಸಾಧ್ಯ. ಕುಂದಾಪ್ರ ಕನ್ನಡ ನಮ್ಮ ಬದುಕಿನ ಭಾವನಾತ್ಮಕ ಕೊಂಡಿ ಅದನ್ನು ಇನ್ನಷ್ಟು ಪಸರಿಸುವ ಹೊಣಿಗಾರಿಕೆ ನಮ್ಮ ಮೇಲಿದೆ. ಮುಂದಿನ ದಿನಗಳ್ಲಿ ಕುಂದಾಪ್ರ ಕನ್ನಡಲ್ಲೂ ಹೆಚ್ಚೆಚ್ಚು ನಾಟಕಗಳು ಮೂಡಿಬರುವಂತಾಗಲಿ ಎಂದು ರಂಗಕರ್ಮಿ ಪ್ರಶಾಂತ್ ಶೆಟ್ಟಿ ಕೋಟ ಅವರು ಹೇಳಿದರು.

ಅವರು ಕೋಟದ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆದ ಕುಂದ ಕನ್ನಡ ಹರಿಕಾರ ದಿ. ತೆಕ್ಕಟ್ಟೆ ಸುರೇಂದ್ರ ಶೆಟ್ಟಿ ದತ್ತಿ ಪುರಸ್ಕಾರ, ಯಕ್ಷ ನೃತ್ಯ ತರಬೇತಿ ಕಾರ್ಯಾಗಾರ ಸಮಾರೋಪ, ಕುಂದಾಪ್ರ ಕನ್ನಡ ಹರಟೆ ಸರಣಿ ಉದ್ಘಾಟನೆ, ನನ್ನ ಕಥೆ ನಿಮ್ಮ ಜೊತೆ ತಿಂಗಳ ಸುದಿನ ತಧಿಗಿಣ-2022 (ಸಂಗಮದ ಸರಿಗಮ) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಚೇತನ್ ನೈಲಾಡಿ ಅವರು ದಿ. ತೆಕ್ಕಟ್ಟೆ ಸುರೇಂದ್ರ ಶೆಟ್ಟಿ ಅವರು ಕುಂದಾಪ್ರ ಭಾಷೆಯ ಬಗ್ಗೆ ಅಪಾರ ಆಭಿಮಾನ ಹೊಂದಿ ಅದನ್ನು ಬೆಳೆಸುವಲ್ಲಿ ಬಹಳಷ್ಟು ಶ್ರಮ ವಹಿಸಿದವರು. ಅವರ ಹಾದಿಯಲ್ಲೆ ಕುಂದಾಪ್ರ ಕನ್ನಡ ಇನ್ನಷ್ಟೂ ಸಮೃದ್ಧಿಯಾಗಿ ಬೆಳೆಸುವಲ್ಲಿ ಹೆಜ್ಜೆ ಇಡೋಣ ಎಂದರು.

ಈ ಸಂದರ್ಭದಲ್ಲಿ ಪಶು ವೈದ್ಯ, ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತ ಡಾ. ಅರುಣ್ ಕುಮಾರ್ ಶೆಟ್ಟಿ, ಹಾಗೂ ಯಕ್ಷ ನೃತ್ಯ ತರಬೇತಿದಾರರಾದ ಕುಮಾರಿ ಸಂಗೀತ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಕ.ಸಾ.ಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಬ್ರಹ್ಮಾವರ ತಾಲ್ಲೂಕು ಕ.ಸಾ.ಪ ಅಧ್ಯಕ್ಷ ರಾಮಚಂದ್ರ ಐತಾಳ್, ಪಂಚಾಯತ್ ಉಪಾಧ್ಯಕ್ಷ ವಾಸು ಪೂಜಾರಿ, ಸ.ಹಿ.ಪ್ರಾ.ಶಾಲೆ ಸಾಯ್ಬ್ರಕಟ್ಟೆ ಶಿಕ್ಷಕ ಸುರೇಂದ್ರ ಕೋಟ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಸ್ವಾಗತಿಸಿ, ಪ್ರಸ್ತಾಪಿಸಿದರು. ಶಿಕ್ಷಕ ಸತೀಶ್ ವಡ್ಡರ್ಸೆ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...
error: Content is protected !!