Thursday, October 10, 2024
Thursday, October 10, 2024

ದೀಪಾವಳಿ ತುಡರ್ ಆಚರಣೆ

ದೀಪಾವಳಿ ತುಡರ್ ಆಚರಣೆ

Date:

ಉಡುಪಿ: ಸಾಮಾಜಿಕ ಸಾಮರಸ್ಯ ಉಡುಪಿ ಮತ್ತು ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ನಡೆದ ‘ತುಡರ್’ ಕಾರ್ಯಕ್ರಮ ಇಂದು ರಾಜಾಂಗಣದಲ್ಲಿ ನಡೆಯಿತು. ಸಾಮಾಜಿಕವಾಗಿ ಹಿಂದುಳಿದ ಸುಮಾರು 50 ಮನೆಗಳ ಸದಸ್ಯರೊಂದಿಗೆ ಸಹಭೋಜನ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಪರ್ಯಾಯ ಮಠದ ಕಡೆಯಿಂದ ಮನೆಗಳಿಗೆ ಶ್ರೀ ಕೃಷ್ಣನ ಭಾವಚಿತ್ರ, ದೀಪಾವಳಿ ಆಚರಣೆಗೆ ಹಣತೆ, ತುಳಸಿಮಾಲೆ ಮತ್ತು ಕೃಷ್ಣ ಪ್ರಸಾದವನ್ನು ವಿತರಿಸಲಾಯಿತು.

ಡಾ. ವಾದಿರಾಜ್ ಮಣಿಪಾಲ ಪ್ರಸ್ತಾವನೆಗೈದರು, ಸಾಮರಸ್ಯ ಗತಿವಿಧಿಯ ಸಂಯೋಜಕರಾದ ರವಿ ಅಲೆವೂರು ಕಾರ್ಯಕ್ರಮವನ್ನು ನಿರ್ವಹಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಉಡುಪಿ ಜಿಲ್ಲಾ ಸಂಘ ಚಾಲಕರಾದ ಡಾ. ನಾರಾಯಣ್ ಶೆಣೈ, ನಗರ ಸಂಘ ಚಾಲಕರಾದ ರಾಮಚಂದ್ರ ಸನಿಲ್, ಹಿರಿಯ ಪ್ರಚಾರಕರಾದ ದಾ. ಮ. ರವೀಂದ್ರ, ಮಠದ ವ್ಯವಸ್ಥಾಪಕ ಗೋವಿಂದರಾಜ್ ಮುಂತಾದವರು ಉಪಸ್ಥಿತರಿದ್ದರು.

ಸಾಮಾಜಿಕ ಸಾಮರಸ್ಯ ಉಡುಪಿ ಜಿಲ್ಲೆಯ ಆಶ್ರಯದಲ್ಲಿ ಬೀಡಿನಗುಡ್ಡೆಯಲ್ಲಿ ನಡೆದ ‘ತುಡರ್’ ಕಾರ್ಯಕ್ರಮದಲ್ಲಿ ಶ್ರೀ ಪೇಜಾವರ ಮಠಾಧೀಶರು ಆಗಮಿಸಿ ಆಶೀರ್ವಚನ ನೀಡಿದರು. ದೀಪಾವಳಿಯ ಪ್ರಯುಕ್ತ ಕೆಲವು ಮನೆಗಳಿಗೆ ಭೇಟಿ ನೀಡಿ ದೀಪ ಬೆಳಗಿಸಿ ಆಚರಣೆಗೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಸಾಮರಸ್ಯ ಗತಿವಿಧಿಯ ಪ್ರಮುಖರಾದ ರವಿ ಅಲೆವೂರು, ನಗರಸಭಾ ಸದಸ್ಯರಾದ ಗೀತಾ ಶೇಟ್, ನವೀನ್, ಅಜಿತ್ ಪೈ, ಸಂಧ್ಯಾ ರಮೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಬಾರಕೂರಿನ ಭಂಡಾರಕೇರಿ ಮಠ: ವಿಜಯನಗರ ತುಳುವ ಮನೆತನದ ಶಾಸನಗಳ ಅಧ್ಯಯನ

ಬ್ರಹ್ಮಾವರ, ಅ.10: ಬ್ರಹ್ಮಾವರ ತಾಲೂಕಿನ ಬಾರಕೂರಿನ ಭಂಡಾರಕೇರಿ ಮಠದಲ್ಲಿರುವ ವಿಜಯನಗರ-ತುಳುವ ಮನೆತನಕ್ಕೆ...

ರತನ್ ಟಾಟಾ ವಿಧಿವಶ

ಮುಂಬಯಿ, ಅ.10: ಟಾಟಾ ಸನ್ಸ್‌ನ ರತನ್ ಟಾಟಾ ಬುಧವಾರ ನಿಧನರಾದರು. ಅವರಿಗೆ...

ಅ.11: ಉಡುಪಿ ನಗರದಲ್ಲಿ ಕಸ ಸಂಗ್ರಹಣೆ ಇಲ್ಲ

ಉಡುಪಿ, ಅ.9: ಆಯುಧ ಪೂಜೆಯ ಪ್ರಯುಕ್ತ ಅಕ್ಟೋಬರ್ 11 ರಂದು ನಗರ...

ಯುವಜನರು ಸ್ವಯಂ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು: ವಾರ್ತಾಧಿಕಾರಿ ಮಂಜುನಾಥ್ ಬಿ

ಉಡುಪಿ, ಅ.9: ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿಯೇ ಎನ್.ಎಸ್.ಎಸ್ ನಂತಹ ಕಾರ್ಯಚಟುವಟಿಕೆಗಳಲ್ಲಿ...
error: Content is protected !!