Monday, February 24, 2025
Monday, February 24, 2025

ಗುಣಮಟ್ಟದ ಆಹಾರ ನೀಡುವವನೇ ನಿಜವಾದ ಹೋಟೆಲ್ ಉದ್ಯಮಿ: ಸತೀಶ್ ಕೋಟ್ಯಾನ್

ಗುಣಮಟ್ಟದ ಆಹಾರ ನೀಡುವವನೇ ನಿಜವಾದ ಹೋಟೆಲ್ ಉದ್ಯಮಿ: ಸತೀಶ್ ಕೋಟ್ಯಾನ್

Date:

ಉಡುಪಿ: ತನ್ನ ಲಾಭದ ಲೋಭಕ್ಕಿಂತ ಗ್ರಾಹಕರ ಆರೋಗ್ಯದತ್ತ ಕಾಳಜಿ ವಹಿಸಿ ಉತ್ತಮ ಆಹಾರ ನೀಡುವವನೇ ನಿಜವಾದ ಹೋಟೆಲ್ ಉದ್ಯಮಿ ಎಂದು ಶ್ರೀ ಭೈರವನಾಥೇಶ್ವರ ಸೇವಾ ಸಮಿತಿ ಅಧ್ಯಕ್ಷರು, ಉದ್ಯಮಿ ಸತೀಶ್ ಕೋಟ್ಯಾನ್ ಅವರು ಹೇಳಿದರು.

ಉಡುಪಿ ಸಿಟಿ ಬಸ್ ಸ್ಟ್ಯಾಂಡ್ ಬಳಿಯ ದುರ್ಗಾ ಇಂಟರ್ನ್ಯಾಷನಲ್ ಕಟ್ಟಡದಲ್ಲಿ ನ್ಯೂ ಐಡಿಯಲ್ ಸಸ್ಯಹಾರಿ ಮತ್ತು ಮಾಂಸಹಾರಿ ಹೋಟೆಲನ್ನು ದೀಪ ಪ್ರಜ್ವಲನೆ ಮೂಲಕ ಉದ್ಘಾಟನೆ ಮಾಡಿ ಅವರು ಮಾತನಾಡುತ್ತಿದ್ದರು.

ಉತ್ತಮ ಗುಣಮಟ್ಟದ ಆಹಾರ ನೀಡಿ ಹಸಿದು ಬಂದ ಗ್ರಾಹಕರನ್ನು ತೃಪ್ತಿಪಡಿಸಿದಲ್ಲಿ ಅದು ದೇವರಿಗೂ ತೃಪ್ತಿ ನೀಡುತ್ತದೆ. ಹಾಗಾಗಿ ಸ್ವಾರ್ಥಕ್ಕಾಗಿ ಉದ್ಯಮ ಎಂಬ ಮನೋಭಾವ ತೊರೆದು ಗ್ರಾಹಕರ ತೃಪ್ತಿಗೆ ಮಹತ್ವ ನೀಡಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಅಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಉದ್ಯಮಿ ದಿವಾಕರ್ ಎಸ್ ಸನಿಲ್, ರವೀಂದ್ರ ನಾಡಿಗ್, ಎಸ್. ಬಿ. ಐ. ಶಾಖಾ ಪ್ರಬಂಧಕ ನಾಗೇಶ್ ವರ್ಣೇಕರ್, ಹೋಟೆಲ್ ಉದ್ಯಮಿ ಸಂಜೀವ ಶೆಟ್ಟಿ ಬೈಂದೂರು,
ಜಗದೀಶ್ ಶೆಟ್ಟಿ, ಹೋಟೆಲ್ ಮಾಲಕರಾದ ಪ್ರಕಾಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ- ಶ್ರೀಕೃಷ್ಣ ಮಠದ ವತಿಯಿಂದ ಹೊರೆಕಾಣಿಕೆ

ಉಡುಪಿ, ಫೆ.23: ಕಾಪು ಹೊಸ ಮಾರಿಗುಡಿ ದೇವಸ್ಥಾನದ ಕಾಪು ಅಮ್ಮನ ಪ್ರತಿಷ್ಠಾ...

ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನಕ್ಕೆ ಲ್ಯಾಪ್ ಟಾಪ್ ಪ್ರೊಜೆಕ್ಟರ್ ಕೊಡುಗೆ

ಕುಕ್ಕಿಕಟ್ಟೆ, ಫೆ.23: ಮಣಿಪಾಲದ ಟಾಪ್ಮಿಅಲ್ಯುಮ್ನಿ ಅಸೋಸಿಯೇಷನ್ ನಿಂದ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ...

ಕೊಹ್ಲಿ ಶತಕ; ಪಾಕಿಸ್ತಾನ ವಿರುದ್ಧ ಭಾರತ ದಿಗ್ವಿಜಯ

ಯು.ಬಿ.ಎನ್.ಡಿ., ಫೆ.23: ಭಾನುವಾರ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹೈ...

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....
error: Content is protected !!