Sunday, February 23, 2025
Sunday, February 23, 2025

ಇಂದ್ರಾಳಿ ರುದ್ರಭೂಮಿಗೆ ಅಂತ್ಯಸಂಸ್ಕಾರ ಧಾಮ

ಇಂದ್ರಾಳಿ ರುದ್ರಭೂಮಿಗೆ ಅಂತ್ಯಸಂಸ್ಕಾರ ಧಾಮ

Date:

ಉಡುಪಿ, ಡಿ.12: ಮಣಿಪಾಲ್ ಟೌನ್ ರೋಟರಿ ಕ್ಲಬ್ ನ ದಶಮಾನೋತ್ಸವ ಸಂದರ್ಭದಲ್ಲಿ ಸಂಸ್ಥೆಯ ಮಾಜಿ ಅಧ್ಯಕ್ಷ ಬೆಲ್ಪತ್ರೆ ಗಣೇಶ ನಾಯಕ್ ಮತ್ತು ಶೈಲಾ ಜಿ. ನಾಯಕ್ ಅವರ ವೈವಾಹಿಕ ಜೀವನದ 50 ವರ್ಷಾಚರಣೆಯ ಸಂದರ್ಭದಲ್ಲಿ‌ ಇಂದ್ರಾಳಿ ರುದ್ರಭೂಮಿಗೆ ರೂ. 15 ಲಕ್ಷ ವೆಚ್ಚದಲ್ಲಿ ಅಂತ್ಯ ಸಂಸ್ಕಾರ ಧಾಮ ಕಟ್ಟಿಸಿ ಕೊಟ್ಟಿರುವುದು ಅತ್ಯಂತ ಪ್ರಶಂಸನೀಯ ಸಮಾಜಸೇವೆಯಂದು ಮಾಹೆ ಸಹ ಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್‌ ಹೇಳಿದರು.

ಸರಕಾರವೇ ಎಲ್ಲವನ್ನು ನೀಡುತ್ತದೆ ಎಂದು ಕಾಯುವುದಕ್ಕಿಂತ ಖಾಸಗಿ ಸಂಸ್ಥೆಗಳು ಮತ್ತು‌ ಸಾರ್ವಜನಿಕರು ಸರಕಾರದೊಂದಿಗೆ ಸೇರಿ ಈ ರೀತಿಯ ಅತೀ ತುರ್ತು ಮತ್ತು ಅವಶ್ಯಕ ಕಾರ್ಯಗಳನ್ನು ನಡೆಸುವ ಅಗತ್ಯವಿದೆಯಂದು ಧಾಮವನ್ನು ಸಾಂಕೇತಿಕವಾಗಿ ಲೋಕಾರ್ಪಣೆ ಮಾಡಿ ಕರೆ ನೀಡಿದರು.

ರೋ. ಜಿಲ್ಲಾ ಗವರ್ನರ್ ದೇವಾನಂದ ಅವರು ‌ಶಿಲಾ ಫಲಕವನ್ನು‌ ಅನಾವರಣಗೊಳಿಸಿ, ರೋಟರಿಯ ಚರಿತ್ರೆಯಲ್ಲಿ ಈ ಯೋಜನೆಯು ವಿಶಿಷ್ಟ, ಅಪೂರ್ವ ಮತ್ತು ಅರ್ಥಪೂರ್ಣವಾದದ್ದು. ಪಾರ್ಥೀವ ಶರೀರದ ಅಂತಿಮ ದರ್ಶನ, ಅಗ್ನಿ ಸಂಸ್ಕಾರ ಪೂರ್ವ ವಿಧಿ ನಿಯಮಗಳ ನಡೆಸುವ ವ್ಯವಸ್ಥೆ, ವಾಸ್ತವ್ಯ ನಿಬಿಡವಾಗುತ್ತಿರುವ ಮಣಿಪಾಲ ಉಡುಪಿಯ ಕುಟುಂಬಗಳಿಗೆ ಇದು ಮಹತ್ತರ ಸಹಾಯವನ್ನು ಮಾಡುತ್ತದೆ ಎಂದರು.

ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ ಮಾತನಾಡಿ, ನಗರದ ಜನತೆಗೆ ಇದೊಂದು ಅತ್ಯಮೂಲ್ಯ ಕೊಡುಗೆ ಎಂದರು. ಮಾಜಿ ಅಧ್ಯಕ್ಷೆ ಸುಮಿತ್ರಾ ನಾಯಕ್ ಅವರು ಮೃತರ ಅಂತಿಮ ಸಂಸ್ಕಾರ ವ್ಯವಸ್ಥಿತವಾಗಿ ನಡೆಸುವ ಯೋಜನೆಯನ್ನು ಉಡುಪಿ ನಗರಸಭೆ ಜನತೆಯ ಪರವಾಗಿ ಕೊಂಡಾಡುತ್ತದೆ ಎಂದರು. ದಾನಿಗಳಾದ ಬೆಲ್ಪತ್ರೆ ಗಣೇಶ್ ನಾಯಕ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ಶೈಲಾ ಜಿ ನಾಯಕ್, ಜಗನ್ನಾಥ ಕೋಟೆ, ನಾಗರಾಜ ಶೆಟ್ಟಿ, ನವೀನ್ ಕುಮಾರ್ ಕೂಡಮರ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ್ ಜಿ. ಕಲ್ಮಾಡಿ, ನಗರಸಭಾ ಸದಸ್ಯರಾದ ಗಿರೀಶ್ ಕಾಂಚನ್, ಅಶೋಕ್ ನಾಯಕ್, ರಾಜು, ಭಾರತಿ, ರುದ್ರಭೂಮಿ ವ್ಯವಸ್ಥಾಪಕ ಪ್ರಶಾಂತ್ ಉಪಸ್ಥಿತರಿದ್ದರು. ಕಟ್ಟಡ ನಿರ್ಮಾಣ ಕಾರ್ಯವನ್ನು ಮಾಡಿದ ನಿತ್ಯಾನಂದ ನಾಯಕ್, ಗೋಪಾಲ ಗಾಣಿಗ, ಮತ್ತು ಅಶೊಕ್ ನಾಯಕ್ ಅವರನ್ನು ಗೌರವಿಸಲಾಯಿತು. ಅಧ್ಯಕ್ಷ ಡಾ. ಮನೋಜ್ ಕುಮಾರ್ ನಾಗಸಂಪಿಗೆ ಸ್ವಾಗತಿಸಿ, ನಿತ್ಯಾನಂದ ನಾಯಕ್ ವಂದಿಸಿದರು. ಸಚ್ಚಿದಾನಂದ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಿನ್ಸಿಪಲ್ ಸೆಕ್ರೆಟರಿ ಆಗಿ ಮಾಜಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇಮಕ

ನವದೆಹಲಿ, ಫೆ.22: ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಶಕ್ತಿಕಾಂತ ದಾಸ್...

ಕಾರ್ಕಳ ಜ್ಞಾನಸುಧಾ: ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಗಣಿತನಗರ, ಫೆ.22: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್(ರಿ.) ಇದರ ಆಡಳಿತಕ್ಕೆ ಒಳಪಟ್ಟ...

ಸುರಂಗದ ಛಾವಣಿ ಕುಸಿತ; ಸಿಲುಕಿದ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ

ಯು.ಬಿ.ಎನ್.ಡಿ., ಫೆ.22: ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್‌ಎಲ್‌ಬಿಸಿ)...
error: Content is protected !!