Monday, October 7, 2024
Monday, October 7, 2024

ಮಾಣಿಬೆಟ್ಟು- ಪ್ರಾಚ್ಯ: ತೌಳವ ಕರ್ಣಾಟ ಶೀರ್ಷಿಕೆಯಡಿಯಲ್ಲಿ ಪುಷ್ಕರಣಿ ಸ್ವಚ್ಛತಾ ಕಾರ್ಯಕ್ರಮ

ಮಾಣಿಬೆಟ್ಟು- ಪ್ರಾಚ್ಯ: ತೌಳವ ಕರ್ಣಾಟ ಶೀರ್ಷಿಕೆಯಡಿಯಲ್ಲಿ ಪುಷ್ಕರಣಿ ಸ್ವಚ್ಛತಾ ಕಾರ್ಯಕ್ರಮ

Date:

ಶಿರ್ವ, ಅ.6: ಶ್ರೀನಿಕೇತನ ವಸ್ತುಸಂಗ್ರಹಾಲಯ & ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠ-ಕುಕ್ಕೆ ಸುಬ್ರಹ್ಮಣ್ಯ, ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ ಹಾಗೂ ಉಡುಪಿಗೆ ಬನ್ನಿ-ಯೂಟ್ಯೂಬ್ ಚಾನೆಲ್ ಇವರ ಜಂಟಿ ಸಹಯೋಗದಲ್ಲಿ ಪ್ರಾಚ್ಯ: ತೌಳವ ಕರ್ಣಾಟ ಎಂಬ ಶೀರ್ಷಿಕೆಯಡಿಯಲ್ಲಿ ಶಿರ್ವ ಗ್ರಾಮದ ವ್ಯಾಪ್ತಿಗೆ ಒಳಪಡುವ ಮಾಣಿಬೆಟ್ಟು ಪ್ರದೇಶದಲ್ಲಿನ ಪ್ರಾಚೀನ ಪುಷ್ಕರಣಿಯ ಸ್ವಚ್ಛತಾ ಕಾರ್ಯಕ್ರಮ ಭಾನುವಾರ ನಡೆಯಿತು.

ಈ ಕಾರ್ಯಕ್ರಮದ ಉದ್ಘಾಟನೆಯನ್ನು ಪುಷ್ಕರಣಿಯಿರುವ ಸ್ಥಳದ ಮಾಲೀಕರಾದ ಬಾಲಕೃಷ್ಣ ಉಪಾಧ್ಯಾಯ ಇವರ ನೇತೃತ್ವದಲ್ಲಿ ಸಮಾಜ ಸೇವಕ ಮತ್ತು ಕೊಡುಗೈ ದಾನಿ ವಿಶ್ವನಾಥ್ ಶೆಣೈ ಅವರು ನೆರವೇರಿಸಿದರು.

ಮುಖ್ಯ ಸಂಯೋಜಕರಾದ ಶ್ರೀನಿಕೇತನ ವಸ್ತುಸಂಗ್ರಹಾಲಯ & ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ ಪೀಠ-ಕುಕ್ಕೆ ಸುಬ್ರಹ್ಮಣ್ಯ ಇದರ ಉಪ ನಿರ್ದೇಶಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಇವರ ಜೊತೆ ಸಹ ಸಂಯೋಜಕರಾಗಿ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ ಇದರ ಅಧ್ಯಯನ ನಿರ್ದೇಶಕರಾದ ಪ್ರೊ. ಎಸ್.ಎ ಕೃಷ್ಣಯ್ಯ ಮತ್ತು ಉಡುಪಿಗೆ ಬನ್ನಿ-ಯೂಟ್ಯೂಬ್ ಚಾನೆಲ್ ಇದರ ಸ್ಥಾಪಕರಾದ ಡಾ. ಗಣೇಶ್ ಪ್ರಸಾದ್ ಜಿ. ನಾಯಕ್ ಉಪಸ್ಥಿತರಿದ್ದರು.

ಗತವೈಭವನ್ನು‌ ಮುಂದಿನ‌ ಪೀಳಿಗೆಗೆ ತಿಳಿಸಲು ಇಂತಹ ಇತಿಹಾಸ ಉಳಿಸಿ, ಸಂರಕ್ಷಿಸುವ ಕಾರ್ಯಗಳು ಇನ್ನೂ ನಡೆಯಬೇಕೆಂದು ಹಾಗೂ ನಮ್ಮ‌ಲ್ಲಿ‌ ಇತಿಹಾಸ‌ದ ಪ್ರಜ್ಞೆ ಮೂಡಲು ಪ್ರಾಚ್ಯ: ತೌಳವ ಕರ್ಣಾಟದ‌ ಈ ಅಭಿಯಾನಕ್ಕೆ ಎಲ್ಲರೂ ಕೈ‌ ಜೋಡಿಸಬೇಕೆಂದು ಕ್ರೆಡಿಟ್ ಕೊ- ಆಪರೇಟಿವ್ ಬ್ಯಾಂಕ್-ಉಡುಪಿ ಇದರ ವ್ಯವಸ್ಥಾಪಕರಾದ ಉಮೇಶ್ ಆಚಾರ್ಯ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಪುಷ್ಕರಣಿ ಸಂರಕ್ಷಣೆಯ ಜೊತೆಗೆ ಪರಿಸರ ಸಂರಕ್ಷಣೆಯೂ ಆಗಬೇಕೆಂದು ಹಾಗೂ ಪ್ರಾಚ್ಯ: ತೌಳವ ಕರ್ಣಾಟ ಇದರ ಉದ್ದೇಶ ಮತ್ತು ಮುಂದಿನ‌ ಯೋಜನೆಗಳ‌ ಬಗ್ಗೆ ಮಾಹಿತಿಯನ್ನು ಪ್ರೊ.‌ ಎಸ್.ಎ ಕೃಷ್ಣಯ್ಯ ಅವರು ವಿವರಿಸಿದರು.

ಮಾಣಿಬೆಟ್ಟು ಪರಿಸರದಲ್ಲಿರುವ ಈ ಪುಷ್ಕರಣಿಯು ಶಿರ್ವ ಗ್ರಾಮದಲ್ಲಿಯೇ ಪ್ರಾಚೀನವಾದುದಾಗಿದ್ದು, ಸುಮಾರು 14-15ನೆಯ ಶತಮಾನಕ್ಕೆ ಸೇರಿದೆ ಎಂದು ಅಧ್ಯಯನದಿಂದ ತಿಳಿದುಬಂದಿರುತ್ತದೆ. ಇಂತಹ ಪುಷ್ಕರಣಿಯು ಇಂದು ವಿನಾಶದಂಚಿನಲ್ಲಿದ್ದು ಈ ಪುಷ್ಕರಣಿಯ ರಕ್ಷಣಾ ಕಾರ್ಯವನ್ನು ಸ್ಥಳೀಯರ , ಇತಿಹಾಸ ಆಸಕ್ತರ, ಉತ್ಸಾಹಿ ವಿದ್ಯಾರ್ಥಿಗಳ, ಸ್ಥಳೀಯ ಸಂಘಟನೆಗಳ ಸಹಕಾರದೊಂದಿಗೆ ನೆರವೇರಿಸಲಾಯಿತು. ಇಲ್ಲಿಯೇ 14ನೆ ಶತಮಾನದ ಅಪರಿಪೂರ್ಣ ಶಾಸನ ಕಲ್ಲಿ‌ನ ಸಂರಕ್ಷಣೆಯನ್ನು ಸಹ ಮಾಡಲಾಯಿತು. ಶ್ರಾವ್ಯಾ ಆರ್. ಕಾರ್ಯಕ್ರಮ ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅವರಿಗೆ ರಮಣಶ್ರೀ ಶರಣ ಸಾಹಿತ್ಯ ಪ್ರಶಸ್ತಿ

ಉಡುಪಿ, ಅ.6: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ...

ನೀರಿನಲ್ಲಿ ಜೀವಿಸುವ ಪಕ್ಷಿಗಳ ಅಂಚೆ ಚೀಟಿ ಪ್ರದರ್ಶನ

ಬಾರಕೂರು, ಅ. 6: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ...

ಅಮೃತೇಶ್ವರಿ ದೇಗುಲ: ಶರನ್ನವರಾತ್ರಿ ಉತ್ಸವ

ಕೋಟ, ಅ.6: ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಶರನ್ನವರಾತ್ರಿ...

ಹೂವಿನ ಕೋಲು ಕಲೆ ಮನೆ ಮನದಲ್ಲಿ ಪಸರಿಸಲಿ: ಯಕ್ಷಗುರು ದೇವದಾಸ್ ರಾವ್ ಕೂಡ್ಲಿ

ಕೋಟ, ಅ.6: ಹೂವಿನ ಕೋಲು ಕಲೆ ಮನೆ ಮನದಲ್ಲೂ ಸದಾಕಾಲ ಪಸರಿಸುತ್ತಾ...
error: Content is protected !!