Sunday, October 6, 2024
Sunday, October 6, 2024

ಹೂವಿನ ಕೋಲು ಕಲೆ ಮನೆ ಮನದಲ್ಲಿ ಪಸರಿಸಲಿ: ಯಕ್ಷಗುರು ದೇವದಾಸ್ ರಾವ್ ಕೂಡ್ಲಿ

ಹೂವಿನ ಕೋಲು ಕಲೆ ಮನೆ ಮನದಲ್ಲಿ ಪಸರಿಸಲಿ: ಯಕ್ಷಗುರು ದೇವದಾಸ್ ರಾವ್ ಕೂಡ್ಲಿ

Date:

ಕೋಟ, ಅ.6: ಹೂವಿನ ಕೋಲು ಕಲೆ ಮನೆ ಮನದಲ್ಲೂ ಸದಾಕಾಲ ಪಸರಿಸುತ್ತಾ ಇರಲಿ ಎಂದು ಯಕ್ಷಗುರು ದೇವದಾಸ್ ರಾವ್ ಕೂಡ್ಲಿ ಹೇಳಿದರು. ಯಶಸ್ವಿ ಕಲಾವೃಂದ ತೆಕ್ಕಟ್ಟೆ ಇವರು ಪ್ರತಿವರ್ಷ ವಿವಿಧ ಭಾಗಗಳಲ್ಲಿ ಹಮ್ಮಿಕೊಂಡು ಬರುತ್ತಿರುವ ಹೂವಿನಕೋಲು ಪತ್ರಕರ್ತ ರವೀಂದ್ರ ಕೋಟ ಮನೆಯಲ್ಲಿ ನಡೆಸಿಕೊಟ್ಟ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಕ್ಷಗಾನ ಕ್ಷೇತ್ರ ಕರಾವಳಿಯಲ್ಲಿ ತನ್ನದೆ ಆದ ಅಸ್ತಿತ್ವ ಉಳಿಸಿಕೊಂಡು ಬಂದಿದೆ ಅದೇ ರೀತಿ ಹೂವಿನಕೋಲು ಸಹ ಕಲಾರಾಧನೆಯ ಪ್ರತಿರೂಪವಾಗಿ ಸದಾ ಕಾಲ ಉಳಿಯುವಂತಾಗಬೇಕು ಈ ದಿಸೆಯಲ್ಲಿ ಪ್ರತಿ ಮನೆಯಲ್ಲೂ ಇದರ ಕಲರವ ಮೇಳೈಸಬೇಕು ಎಂದರು. ಹೂವಿನಕೋಲು ತಂಡದ ಪರವಾಗಿ ದೇವದಾಸ್ ರಾವ್ ಕೂಡ್ಲಿ ಇವರನ್ನು ಗೌರವಿಸಲಾಯಿತು. ಹೂವಿನ ಕೋಲು ತಂಡದ ಪ್ರಮುಖರಾದ ಭಾಗವತ ಪ್ರಶಾಂತ್ ಪಡುಕರೆ, ಬಾಲ ಕಲಾವಿದರಾಗಿ ವಿಶ್ರುತ್, ಸಂಕೇತ್, ಪವನ್ ಆಚಾರ್, ಸವಿತಾ ರವೀಂದ್ರ ಕೋಟ ಮತ್ತಿತರರು ಇದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು ಅವರಿಗೆ ರಮಣಶ್ರೀ ಶರಣ ಸಾಹಿತ್ಯ ಪ್ರಶಸ್ತಿ

ಉಡುಪಿ, ಅ.6: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ...

ಮಾಣಿಬೆಟ್ಟು- ಪ್ರಾಚ್ಯ: ತೌಳವ ಕರ್ಣಾಟ ಶೀರ್ಷಿಕೆಯಡಿಯಲ್ಲಿ ಪುಷ್ಕರಣಿ ಸ್ವಚ್ಛತಾ ಕಾರ್ಯಕ್ರಮ

ಶಿರ್ವ, ಅ.6: ಶ್ರೀನಿಕೇತನ ವಸ್ತುಸಂಗ್ರಹಾಲಯ & ಕೆಳದಿ ರಾಣಿ ಚೆನ್ನಮ್ಮಾಜಿ ಅಧ್ಯಯನ...

ನೀರಿನಲ್ಲಿ ಜೀವಿಸುವ ಪಕ್ಷಿಗಳ ಅಂಚೆ ಚೀಟಿ ಪ್ರದರ್ಶನ

ಬಾರಕೂರು, ಅ. 6: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಶನಲ್ ಸರಕಾರಿ...

ಅಮೃತೇಶ್ವರಿ ದೇಗುಲ: ಶರನ್ನವರಾತ್ರಿ ಉತ್ಸವ

ಕೋಟ, ಅ.6: ಕೋಟದ ಅಮೃತೇಶ್ವರಿ ಹಲವು ಮಕ್ಕಳ ತಾಯಿ ದೇಗುಲದಲ್ಲಿ ಶರನ್ನವರಾತ್ರಿ...
error: Content is protected !!