Friday, September 20, 2024
Friday, September 20, 2024

ಉಡುಪಿ: ಹಾಡುಹಗಲೇ ಬಸ್ಸಿನಲ್ಲಿ ಕಳ್ಳತನ; ನಗದು, ಚಿನ್ನಾಭರಣ, ವಿದೇಶಿ ಕರೆನ್ಸಿ ಕಳವು

ಉಡುಪಿ: ಹಾಡುಹಗಲೇ ಬಸ್ಸಿನಲ್ಲಿ ಕಳ್ಳತನ; ನಗದು, ಚಿನ್ನಾಭರಣ, ವಿದೇಶಿ ಕರೆನ್ಸಿ ಕಳವು

Date:

ಉಡುಪಿ, ಸೆ.12: ಬಂಟ್ವಾಳ ತಾಲೂಕಿನ ಗೀತಾ ಬಾಯಿ ಹಾಗೂ ಅವರ ತಂಗಿ ಮಂಗಳೂರಿಗೆ ಹೋಗಲು ದಿನಾಂಕ:10/09/2024 ರಂದು ಸಂಜೆ 4:45 ಗಂಟೆಗೆ ಉಡುಪಿಯ ಬನ್ನಂಜೆ ಕೆ.ಎಸ್.‌ಆರ್.‌ಟಿ.ಸಿ ಬಸ್‌ ನಿಲ್ದಾಣದಿಂದ ಪ್ರಯಾಣಿಸುತ್ತಿದ್ದಾಗ ಖಾಲಿ ಸೀಟಿನಲ್ಲಿ ಅವರ ತಂಗಿ ಕುಳಿತುಕೊಳ್ಳಲು ವ್ಯಾನಿಟಿ ಬ್ಯಾಗನ್ನು ಇಟ್ಟಿದ್ದು, ಆ ವೇಳೆ ಬಸ್ಸಿನಲ್ಲಿ ಸುಮಾರು 30-32 ಪ್ರಾಯದ ಅಪರಿಚಿತ ಹೆಂಗಸು ಬಸ್ಸಿನ ಸೀಟಿನ ಮೇಲೆ ಇಟ್ಟಿದ್ದ ಅವರ ವ್ಯಾನಿಟಿ ಬ್ಯಾಗ್‌ ನ ಮೇಲೆ ಬಿದ್ದಂತೆ ನಟನೆ ಮಾಡಿ, ಸೀಟಿನ ಕೆಳಭಾಗದಲ್ಲಿ ಕುಳಿತಿದ್ದ ಮಗುವನ್ನು ಎತ್ತಿಕೊಂಡು ಹೋಗಿದ್ದು, ಕಟಪಾಡಿ ದಾಟಿದ ನಂತರ ಅವರ ಆಧಾರ್‌ ಕಾರ್ಡನ್ನು ಬಸ್ಸಿನ ಕಂಡಕ್ಟರ್‌ ರವರಿಗೆ ತೋರಿಸುವ ಸಮಯ ವ್ಯಾನಿಟಿ ಬ್ಯಾಗನ್ನು ತೆರೆದು ನೋಡಿದ್ದು, ಅದರಲ್ಲಿದ್ದ ಪಿಂಕ್‌ ಬಣ್ಣದ ಪರ್ಸ್‌ ಕಾಣೆಯಾಗಿದ್ದು, ಅದರಲ್ಲಿದ್ದ ನಗದು ರೂ 40,000, ಹರಳನ್ನು ಹೊಂದಿದ ಹಳೆಯ ಚಿನ್ನದ ಬೆಂಡೋಲೆ 1 ಜೊತೆ, ಕಲ್ಲಿನ ಚಿನ್ನದ ಮೂಗುಬೊಟ್ಟು ಹಾಗೂ 10,000/-ರೂಪಾಯಿ ಬೆಲೆ ಬಾಳುವ ಓಮನ್‌ ದೇಶದ ರಿಯಾಲ್‌ ಕರೆನ್ಸಿ ನೋಟುಗಳು ಕಳವಾಗಿರುವುದು ತಿಳಿದುಬಂದಿದೆ.

ಕೂಡಲೇ ಕಂಡಕ್ಟರ್‌ ಬಳಿ ವ್ಯಾನಿಟಿ ಬ್ಯಾಗ್‌ ಮೇಲೆ ಬಿದ್ದಂತೆ ನಟನೆ ಮಾಡಿದ್ದ ಮಹಿಳೆಯ ಬಗ್ಗೆ ವಿಚಾರಿಸಿದಾಗ, ಅವರು ಹಾಗೂ ಇನ್ನೋರ್ವ ಚೂಡಿದಾರ್‌ ಧರಿಸಿದ್ದ ಮಹಿಳೆ ಮತ್ತು ಒಂದು ಮಗು ಉಡುಪಿ ಹಳೆ ತಾಲ್ಲೂಕು ಆಫೀಸಿನ ಬಳಿ ಬಸ್ಸಿನಿಂದ ಇಳಿದುಕೊಂಡು ಹೋಗಿರುವುದು ತಿಳಿದುಬಂದಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪುರ: ರಸ್ತೆ ಕಾಮಗಾರಿ ಪೂರ್ಣ

ಮಣಿಪುರ, ಸೆ.19: ಕಾಪು ವಿಧಾನಸಭಾ ಕ್ಷೇತ್ರದ ಮಣಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ...

ಎಲ್ಲೋರದ ವಿಶ್ವಕರ್ಮ ಗುಹೆ

ಭಾರತವನ್ನು ಕಲೆ-ವಾಸ್ತುಶಿಲ್ಪ ಕ್ಷೇತ್ರದಲ್ಲಿ "ವಿಸ್ಮಯಗಳ ಬೀಡು" ಮತ್ತು ಜಗತ್ತಿನಲ್ಲೇ ಮುಂಚೂಣಿಯಲ್ಲಿರುವ, ಕಲಾಶೈಲಿಯಲ್ಲಿ...

ಬಾಂಗ್ಲಾ ಟೆಸ್ಟ್ ಸರಣಿ: ಅಶ್ವಿನ್ ಅಜೇಯ ಶತಕ

ಚೆನ್ನೈ, ಸೆ.19: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ಭಾರತ...

ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಣೆ: ಅರ್ಜಿ ಆಹ್ವಾನ

ಉಡುಪಿ, ಸೆ.19: ಪ್ರಸಕ್ತ ಸಾಲಿನಲ್ಲಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ...
error: Content is protected !!