Thursday, October 24, 2024
Thursday, October 24, 2024

ನಚಿಕೇತ ವಿದ್ಯಾಲಯ: ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ನಚಿಕೇತ ವಿದ್ಯಾಲಯ: ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

Date:

ಕಾರ್ಕಳ, ಆ.31: ಜನ್ಮಭೂಮಿ ಸೇವಾ ಟ್ರಸ್ಟ್ ನ ತಳಹದಿಯಲ್ಲಿರುವ ಕಾರ್ಕಳ ಬೈಲೂರಿನ ನಚಿಕೇತ ವಿದ್ಯಾಲಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ನೀರೆ ಗ್ರಾಮ ಪಂಚಾಯಿತ್ ನಿಂದ ಶೋಭಾಯಾತ್ರೆ ಆರಂಭವಾಗಿ ಚೆಂಡೆ ನಾದದೊಂದಿಗೆ, ವಿದ್ಯಾರ್ಥಿಗಳಿಂದ ಕುಣಿತ ಭಜನೆ, ಮುದ್ದು ರಾಧೆ-ಕೃಷ್ಣ ರ ಮೆರವಣಿಗೆಯು ಶಾಲೆಯ ಮೈದಾನದನದಲ್ಲಿ ಸಮಾಪನಗೊಂಡು ಮೊಸರು ಕುಡಿಕೆ ನಡೆಯಿತು. ಮುಖ್ಯ ಅತಿಥಿಗಳಾಗಿ ಸಿವಿಲ್ ಕಂಟ್ರಾಕ್ಟರ್ ಅರುಣ್ ಕುಮಾರ್ ನಿಟ್ಟೆ ಆಗಮಿಸಿದ್ದರು. ಎಂಪಿಎಂಸಿ ಕಾಲೇಜಿನ ಉಪನ್ಯಾಸಕಿ ಅಕ್ಷತಾ ರಾವ್ ಹಾಗೂ ಉದ್ಯಮಿ ಗಣೇಶ್ ಕೌಡೂರು, ಸಂಸ್ಥೆಯ ಪಿಟಿಎ ಅಧ್ಯಕ್ಷ ನಿತಿನ್ ಕುಮಾರ್, ಮಾತೃಭಾರತಿ ಅಧ್ಯಕ್ಷೆ ದೀಕ್ಷಿತಾ ರಾವ್, ಶಾಲಾ ಸಂಚಾಲಕ ಡಿ. ಮಚ್ಚೆಂದ್ರನಾಥ್, ಸಂಸ್ಥೆಯ ಮುಖ್ಯೋಪಾಧ್ಯಾಯನಿ ಕವಿತಾ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಮುದ್ದು ಕೃಷ್ಣ ಮುದ್ದು ರಾಧೆ ಛದ್ಮವೇಷ ಸ್ಪರ್ಧೆ ನಡೆಯಿತು. ಯಕ್ಷಗಾನ ಗುರುಗಳಾದ ಸುಬ್ರಹ್ಮಣ್ಯ ಪ್ರಸಾದ್, ಅಕ್ಷತಾ ರಾವ್, ಕುಣಿತ ಭಜನೆಯ ಗುರುಗಳಾದ ಗುರುರಾಜ್ ಆಚಾರ್ಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ವಿದ್ಯಾರ್ಥಿಗಳ ಕಬಡ್ಡಿ ತಂಡವು ರಾಜ್ಯಮಟ್ಟದಲ್ಲಿ ಪ್ರತಿನಿಧಿಸುವಂತೆ ತರಬೇತಿ ನೀಡಿದ ಸೃಜನ್ ಹಾಗೂ ಗಣೇಶ್, ಹಾಗೆಯೇ ಕುಣಿತ ಭಜನೆಗಯ ಗುರುಗಳಾದ ಗುರುರಾಜ್ ಆಚಾರ್ಯ ಇವರನ್ನು ಗೌರವಿಸಲಾಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

11 ನೂತನ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ನಿರ್ಧಾರ

ಬೆಂಗಳೂರು, ಅ.24: ಬಡ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸನ್ನು ನನಸು ಮಾಡಬೇಕೆಂಬ...

ರಾಯಚೂರು ವಿಮಾನ ನಿಲ್ದಾಣಕ್ಕೆ ಕೇಂದ್ರ ಸರ್ಕಾರದ ಗ್ರೀನ್ ಸಿಗ್ನಲ್

ಬೆಂಗಳೂರು, ಅ.24: ಬಹು ದಿನಗಳ ಬೇಡಿಕೆಯಾಗಿದ್ದ ರಾಯಚೂರು ವಿಮಾನ ನಿಲ್ದಾಣಕ್ಕೆ ಕೊನೆಗೂ...

ಜನವರಿಯಲ್ಲಿ ಕೌಶಲ ಶೃಂಗಸಭೆ

ಬೆಂಗಳೂರು, ಅ.24: ರಾಜ್ಯದಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕೌಶಲ ಶೃಂಗಸಭೆ ನಡೆಸಲು...

ಮಕ್ಕಳು ಸುಳ್ಳು ಹೇಳುತ್ತಾರೆಯೇ?

“ನನ್ನ ಮಗ ಯಾವಾಗ ನೋಡಿದರೂ ಸುಳ್ಳು ಹೇಳುತ್ತಿರುತ್ತಾನೆ, ನನಗೆ ಸಾಕಾಗಿ ಹೋಗಿದೆ,...
error: Content is protected !!