Sunday, February 23, 2025
Sunday, February 23, 2025

ಡಾ. ವಸುಂಧರಾ ದೊರಸ್ವಾಮಿ ಸಂವಾದ

ಡಾ. ವಸುಂಧರಾ ದೊರಸ್ವಾಮಿ ಸಂವಾದ

Date:

ಮಣಿಪಾಲ, ಆ.28: ನನ್ನ ಭರತನಾಟ್ಯ ಶೈಲಿಯಲ್ಲಿ ಯೋಗ ಮತ್ತು ಸಮರ ಕಲೆಯನ್ನು ಸೇರಿಸಲು ಪ್ರಯತ್ನಿಸಿದ್ದೇನೆ, ಇದು ಪಂದನಲ್ಲೂರಿನ ನೃತ್ಯ ಶೈಲಿಗಿಂತ ಭಿನ್ನವಾಗಿದೆ ಎಂದು ಪ್ರಶಸ್ತಿ ವಿಜೇತ ನೃತ್ಯಗಾರ್ತಿ ಡಾ. ವಸುಂಧರಾ ದೊರಸ್ವಾಮಿ ಹೇಳಿದರು. ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್, ಮಾಹೆಯ ವಿದ್ಯಾರ್ಥಿಗಳೊಂದಿಗೆ ಅವರು ಸಂವಾದ ನಡೆಸಿದರು. ನೃತ್ಯದ ಶೈಲಿಯ ವಿಶಿಷ್ಟತೆಗಳನ್ನು ವಿವರಿಸಿದರು. ನನ್ನ ಕಲೆಯ ಸಂಪೂರ್ಣ ಪ್ರೀತಿಯು ನನ್ನನ್ನು 75 ನೇ ವಯಸ್ಸಿನಲ್ಲಿ ನೃತ್ಯ ಮಾಡುವಂತೆ ಮಾಡುತ್ತದೆ ಎಂದರು. ಯೋಗವು ಹೇಗೆ ಉತ್ತಮವಾಗಿ ನೃತ್ಯ ಮಾಡಲು ಸಹಾಯ ಮಾಡುತ್ತದೆ ಎಂಬುದನ್ನು ವಿವರಿಸಿದರು. ಅವರ ಶಿಷ್ಯೆ ಡಾ.ಭ್ರಮರಿ ಶಿವಪ್ರಕಾಶ್ ಅವರು ತಮ್ಮ ಗುರುಗಳ ನೃತ್ಯ ಶೈಲಿಯ ಕೆಲವು ನಿರ್ದಿಷ್ಟ ಗುಣಲಕ್ಷಣಗಳನ್ನು ಪ್ರದರ್ಶಿಸಿದರು.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಚರ್ಚೆಯನ್ನು ನಿರ್ವಹಿಸಿದರು. ನಂತರ ಸಂಜೆ ಡಾ. ವಸುಂಧರಾ ದೊರಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಸಮನ್ವಯ ಸಮಿತಿ, ಮಾಹೆ, ಮಣಿಪಾಲ ಇದರ ಆಶ್ರಯದಲ್ಲಿ ನಡೆದ ಕಿತ್ತೂರು ರಾಣಿ ಚೆನ್ನಮ್ಮ ಏಕವ್ಯಕ್ತಿ ನೃತ್ಯ-ನಾಟಕ-ಸಮರ ಕಲಾ ಪ್ರದರ್ಶನದಲ್ಲಿ ಮಾಹೆ ಉಪಕುಲಪತಿ ಡಾ. ಎಂ. ಡಿ. ವೆಂಕಟೇಶ್, ಸಿಸಿಸಿ ಅಧ್ಯಕ್ಷೆ ಡಾ. ಶೋಭಾ ಕಾಮತ್, ಉಪಾಧ್ಯಕ್ಷ ಸಂಬಿತ್ ದಾಶ್ ಸೇರಿದಂತೆ ಅಪಾರ ಸಂಖ್ಯೆಯ ಜನರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಿನ್ಸಿಪಲ್ ಸೆಕ್ರೆಟರಿ ಆಗಿ ಮಾಜಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇಮಕ

ನವದೆಹಲಿ, ಫೆ.22: ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಶಕ್ತಿಕಾಂತ ದಾಸ್...

ಕಾರ್ಕಳ ಜ್ಞಾನಸುಧಾ: ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಗಣಿತನಗರ, ಫೆ.22: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್(ರಿ.) ಇದರ ಆಡಳಿತಕ್ಕೆ ಒಳಪಟ್ಟ...

ಸುರಂಗದ ಛಾವಣಿ ಕುಸಿತ; ಸಿಲುಕಿದ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ

ಯು.ಬಿ.ಎನ್.ಡಿ., ಫೆ.22: ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್‌ಎಲ್‌ಬಿಸಿ)...
error: Content is protected !!