Thursday, October 24, 2024
Thursday, October 24, 2024

ಆನೆಗುಡ್ಡೆ: ‘ದೇವವೃಕ್ಷ ಅಭಿಯಾನ’

ಆನೆಗುಡ್ಡೆ: ‘ದೇವವೃಕ್ಷ ಅಭಿಯಾನ’

Date:

ಕೋಟ, ಆ.28: ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ಮತ್ತು ಟೀಮ್ ಅಭಿಮತದ ‘ದೇವವೃಕ್ಷ ಅಭಿಯಾನ’ ಕಾರ್ಯಕ್ರಮ ಕಾರಣಿಕ ಕ್ಷೇತ್ರ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ನಡೆಯಿತು. ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಧ್ಯಾಯರವರು ಮಾತನಾಡಿ, ಜನಸೇವಾ ಟ್ರಸ್ಟ್ ಮಾಡುತ್ತಿರುವಂತಹ ಈ ಕೆಲಸ ಅತ್ಯಂತ ಶ್ಲಾಘನೀಯ. ಸನಾತನ ಧರ್ಮವು ಪ್ರಕೃತಿಯಲ್ಲೇ ದೇವರನ್ನು ಕಂಡು ಆರಾಧಿಸಿಕೊಂಡು ಬಂದಿರುವ ಪರಂಪರೆ ಇರುವಂತಹದ್ದು. ನಮ್ಮಲ್ಲಿ ಹಲವಾರು ವೃಕ್ಷಗಳನ್ನ ದೇವತರುಗಳು ಎಂದೇ ಆರಾಧಿಸುತ್ತೇವೆ. ಅಂತಹ ಗಿಡಗಳನ್ನ ದೇವಸ್ಥಾನಗಳಲ್ಲಿ ನೆಡುವಂತ ಕಾರ್ಯ ಅರ್ಥಪೂರ್ಣವಾದದ್ದು. ಟ್ರಸ್ಟಿನ ’ದೇವವೃಕ್ಷ’ ಅಭಿಯಾನ ಯಶಸ್ವಿಯಾಗಲಿ ಎಂದು ಹಾರೈಸಿದರು.

ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರಿಂದ ಚಾಲನೆಗೊಂಡ ಈ ಅಭಿಯಾನ ದಿವ್ಯಕ್ಷೇತ್ರದ ಸನ್ನಿಧಾನದಲ್ಲಿ ಶ್ರೀಗಂಧ, ಬಿಲ್ವ, ರುದಾಕ್ಷಿ, ಸಂಪಿಗೆ, ಪಾರಿಜಾತ ಹೀಗೆ ದೇವತರುಗಳ ನೆಡುವ ಮೂಲಕ ಮುಂದುವರಿಯುತ್ತದೆ. ಜನಸೇವಾ ಟ್ರಸ್ಟ್ ಅಧ್ಯಕ್ಷ ವಸಂತ್ ಗಿಳಿಯಾರ್, ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದ ಪ್ರಭಂದಕರಾದ ನಟೇಶ್ ಕಾರಂತ್, ಕೆ., ರಾಜರಾಮ ಉಪಾಧ್ಯಾಯ ಟೀಮ್ ಅಭಿಮತದ ನಿಖಿಲ್ ನಾಯಕ್ ತೆಕ್ಕಟ್ಟೆ, ಲೋಕೇಶ್ ಅಂಕದಕಟ್ಟೆ, ರಾಘವೇಂದ್ರ ರಾಜ್ ಸಾಸ್ತಾನ, ಸುಜೀರ್ ಶೆಟ್ಟಿ ಹೇರಿಕುದ್ರು, ರಾಜೇಶ್ ಕಾಂಚನ್ ಕೊರವಡಿ, ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

11 ನೂತನ ಸರ್ಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆಗೆ ನಿರ್ಧಾರ

ಬೆಂಗಳೂರು, ಅ.24: ಬಡ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣದ ಕನಸನ್ನು ನನಸು ಮಾಡಬೇಕೆಂಬ...

ರಾಯಚೂರು ವಿಮಾನ ನಿಲ್ದಾಣಕ್ಕೆ ಕೇಂದ್ರ ಸರ್ಕಾರದ ಗ್ರೀನ್ ಸಿಗ್ನಲ್

ಬೆಂಗಳೂರು, ಅ.24: ಬಹು ದಿನಗಳ ಬೇಡಿಕೆಯಾಗಿದ್ದ ರಾಯಚೂರು ವಿಮಾನ ನಿಲ್ದಾಣಕ್ಕೆ ಕೊನೆಗೂ...

ಜನವರಿಯಲ್ಲಿ ಕೌಶಲ ಶೃಂಗಸಭೆ

ಬೆಂಗಳೂರು, ಅ.24: ರಾಜ್ಯದಲ್ಲಿ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಕೌಶಲ ಶೃಂಗಸಭೆ ನಡೆಸಲು...

ಮಕ್ಕಳು ಸುಳ್ಳು ಹೇಳುತ್ತಾರೆಯೇ?

“ನನ್ನ ಮಗ ಯಾವಾಗ ನೋಡಿದರೂ ಸುಳ್ಳು ಹೇಳುತ್ತಿರುತ್ತಾನೆ, ನನಗೆ ಸಾಕಾಗಿ ಹೋಗಿದೆ,...
error: Content is protected !!