Friday, September 20, 2024
Friday, September 20, 2024

ಆನಂದತೀರ್ಥ ಪ.ಪೂ ಕಾಲೇಜು: ಕೆಸರುಗದ್ದೆ ಕ್ರೀಡಾಕೂಟ

ಆನಂದತೀರ್ಥ ಪ.ಪೂ ಕಾಲೇಜು: ಕೆಸರುಗದ್ದೆ ಕ್ರೀಡಾಕೂಟ

Date:

ಕಟಪಾಡಿ, ಆ.7: ಪಾಜಕ ಆನಂದತೀರ್ಥ ಪ.ಪೂ ಕಾಲೇಜು ಹಾಗೂ ಆನಂದತೀರ್ಥ ವಿದ್ಯಾಲಯದ ವಸತಿನಿಲಯದ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಕೆಸರುಗದ್ದೆ ಕ್ರೀಡಾಕೂಟ ಕಾಲೇಜು ಆಡಳಿತ ಮಂಡಳಿ ಸದಸ್ಯ ಸುದರ್ಶನ್‌ ರಾವ್‌ ಅವರ ಗದ್ದೆಯಲ್ಲಿ ನಡೆಯಿತು. ಆಡಳಿತ ಮಂಡಳಿ ಸದಸ್ಯೆ ರೂಪಾ ಬಲ್ಲಾಳ್‌ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡುತ್ತಾ, ವಸತಿನಿಲಯದಲ್ಲಿ ಇದ್ದು ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು ಹಾಸ್ಟೆಲ್‌ನಿಂದ ಹೊರಬರುವುದೇ ಅಪರೂಪ. ಕಾಲೇಜು ಮತ್ತು ಹಾಸ್ಟೆಲ್ ಇಷ್ಟೇ ಅವರ ಬದುಕಾಗಿರುತ್ತದೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗಾಗಿ ವಿವಿಧ ಮನೋರಂಜನಾ ಕೂಟಗಳನ್ನು ಏರ್ಪಡಿಸುವುದರಿಂದ ಅವರ ಮನಸ್ಸು ಉತ್ಸಾಹ ಭರಿತವಾಗುತ್ತದೆ. ಅಲ್ಲದೆ ಓದಿನಲ್ಲಿ ಕೂಡ ಹೆಚ್ಚಿನ ಆಸಕ್ತಿ ಬೆಳೆಸಿಕ್ಕೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಕ್ರಿಡಾಕೂಟದಲ್ಲಿ ಆಡಳಿತ ಮಂಡಳಿ ಸದಸ್ಯ ಮಧ್ವರಾಜ್‌ ಭಟ್‌, ಪ್ರಾಂಶುಪಾಲ ವಿಜಯ್‌ ಪಿ. ರಾವ್‌, ಡಾ. ಗೀತಾ ಶಶಿಧರ್‌, ದೈ.ಹಿ.ಶಿ. ಶಿಕ್ಷಕರಾದ ವಕ್ಷತ್‌ ಸಾಲಿಯಾನ್, ಸಂತೋಷ್‌ ಕುಮಾರ್‌ ಶೆಟ್ಟಿ, ಸುಮನಾ, ಕಲ್ಮೇಶ್‌, ಸಚಿನ್, ದರ್ಗಪ್ಪ, ಮಮತಾ, ಸಂಸ್ಕೃತ ಶಿಕ್ಷಕ ವೀರೇಂದ್ರ ಹೆಗ್ಡೆ, ಬಾಲಕರ ವಸತಿ ನಿಲಯದ ಮೇಲ್ವಿಚಾರಕರಾದ ಅಮೀಶ್‌, ಮಂಜುನಾಥ್‌, ಬಾಲಕಿಯರ ವಸತಿನಿಲಯ ಮೇಲ್ವಿಚಾರಕರಾದ ಶಿವಾನಿ, ಪಾವನಶ್ರೀ, ಆನಂದತೀರ್ಥ ಸಮೂಹ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳಾದ ಸುಮಂತ್‌ ಮಯ್ಯ , ಹೇಮಂತ್‌ ಮಯ್ಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...
error: Content is protected !!