Monday, February 24, 2025
Monday, February 24, 2025

ಸಮಾಜಮುಖಿ ಕಾರ್ಯದ ಪ್ರತಿರೂಪ ‘ಜೀವನ್ ಮಿತ್ರ’: ಸತೀಶ್ ಹೆಚ್ ಕುಂದರ್

ಸಮಾಜಮುಖಿ ಕಾರ್ಯದ ಪ್ರತಿರೂಪ ‘ಜೀವನ್ ಮಿತ್ರ’: ಸತೀಶ್ ಹೆಚ್ ಕುಂದರ್

Date:

ಕೋಟ, ಜು.24: ಜೀವರಕ್ಷಕ ಕಾರ್ಯದ ಮೂಲಕ ಸಮಾಜಿಕ ಬದ್ದತೆಯನ್ನು ಜೀವನ್ ಮಿತ್ರ ಸಾಕ್ಷಿಕರಿಸಿದೆ ಎಂದು ಮಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷ ಸತೀಶ್ ಹೆಚ್ ಕುಂದರ್ ಹೇಳಿದರು. ಕೋಟದ ಅಮೃತೇಶ್ವರಿ ದೇಗುಲದಲ್ಲಿ ಜೀವನ್ ಮಿತ್ರ ಸೇವಾ ಟ್ರಸ್ಟ್ ಕೋಟ,ಜೀವನ್ ಮಿತ್ರ ಆಂಬ್ಯುಲೇನ್ಸ್ ಇದರ ದಶಮಾನೋತ್ಸವ ಸಂಭ್ರಮಾಚರಣೆಯ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ಸೇವೆಯೇ ಮೂಲ ಮಂತ್ರವಾಗಿರಿಸಿ ಸಮಾಜದ ಋಣ ತಿರಿಸುವ ಕಾರ್ಯ ಶ್ರೇಷ್ಠವಾದದ್ದು ಈ ನಿಟ್ಟಿನಲ್ಲಿ ದಶ ಸಂವತ್ಸರಗಳನ್ನು ಈ ಸಮಾಜಕ್ಕೆ ನೆರವಿನ ಮೂಲಕ ಊಣಬಡಿಸಿದ ಜೀವನ್ ಮಿತ್ರ ಟ್ರಸ್ಟ್ ಕಾರ್ಯ ನಿಜಕ್ಕೂ ಪ್ರಶಂಸನೀಯ ಎಂದು ಕಾರ್ಯದ ಯಶಸ್ಸಿಗೆ ಶುಭಕೋರಿದರು.

ಜೀವನ್ ಮಿತ್ರ ಸೇವಾ ಟ್ರಸ್ಟ್ ನ ನಾಗರಾಜ್ ಪುತ್ರನ್, ನಾಗೇಂದ್ರ ಪುತ್ರನ್, ಕೋಟತಟ್ಟು ಪಂಚಾಯತ್ ಅಧ್ಯಕ್ಷ ಸತೀಶ್ ಕುಂದರ್, ಕೋಟ ಗ್ರಾ.ಪಂ ಸದಸ್ಯ ಎಂ ಜಯರಾಮ ಶೆಟ್ಟಿ, ಭುಜಂಗ ಗುರಿಕಾರ, ಪ್ರದೀಪ್ ಸಾಲಿಯಾನ್, ಕೋಟತಟ್ಟು ಗ್ರಾ.ಪಂ ಸದಸ್ಯ ರವೀಂದ್ರ ತಿಂಗಳಾಯ, ನ್ಯಾಯವಾದಿ ಶ್ಯಾಮಸುಂದರ ನಾಯರಿ, ಸಾಮಾಜಿಕ ಕಾರ್ಯಕರ್ತರಾದ ನಾಗರಾಜ್ ಗಾಣಿಗ ಸಾಲಿಗ್ರಾಮ, ಕೋಟ ಶ್ರೀಕಾಂತ್ ಶೆಣೈ, ಭೋಜ ಪೂಜಾರಿ ಗಿಳಿಯಾರು, ವಸಂತ ಕಾಂಚನ್ ಗುಂಡ್ಮಿ, ಜೀವನ್ ಮಿತ್ರ ಬಳಗದ ವಸಂತ ಸುವರ್ಣ, ಸಂತೋಷ್ ತೆಕ್ಕಟ್ಟೆ, ಶಶಿಧರ ಕುಂದರ್, ಆನಂದ್ ಟೈಲರ್, ಹರ್ತಟ್ಟು ಯುವಕ ಮಂಡಲದ ಪ್ರಮುಖರಾದ ಕೀರ್ತಿಶ ಪೂಜಾರಿ, ಯಕ್ಷ ಸೌರಭ ಕಲಾರಂಗದ ಸ್ಥಾಪಾಕಾಧ್ಯಕ್ಷ ಹರೀಶ್ ಭಂಡಾರಿ, ಧನುಷ್ ವಡ್ಡರ್ಸೆ, ಸ್ವದೇಶ್ ಕಾಸನಗುಂದ್ ಮತ್ತಿತರರು ಉಪಸ್ಥಿತರಿದ್ದರು. ಕೋಟ ಪಂಚಾಯತ್ ಸದಸ್ಯ ಚಂದ್ರ ಆಚಾರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗೆಳೆಯರ ಬಳಗ ಕಾರ್ಕಡ- ವಾರ್ಷಿಕೋತ್ಸವ; ಸಾಧಕರಿಗೆ ಸನ್ಮಾನ

ಸಾಲಿಗ್ರಾಮ, ಫೆ.23: ಸಂಘಟನೆಗಳ ನಿರಂತರ ಸಾಮಾಜಿಕ ಕಾರ್ಯ ಅಸಾಮಾನ್ಯವಾದದ್ದು. ಈ ನಿಟ್ಟಿನಲ್ಲಿ...

ಭಜನಾ ಮಂಗಲೋತ್ಸವ

ಸಾಸ್ತಾನ, ಫೆ.23: ಶ್ರೀ ರಾಘವೇಂದ್ರ ಭಜನಾ ಮಂದಿರ ಪಾಂಡೇಶ್ವರ ಸಾಸ್ತಾನ ಇಲ್ಲಿ...

ಹೀಗೊಂದು ಜಾಹೀರಾತು

ನೀವು ತಿಂಗಳಿಗೆ ಲಕ್ಷಗಟ್ಟಲೆ ಸಂಪಾದಿಸಬೇಕಾದರೆ ಇದನ್ನು ಮಾಡಿರಿ, ಮಿಲಿನಿಯರ್ ಆಗಲು ಹೀಗೆ...
error: Content is protected !!