Tuesday, February 25, 2025
Tuesday, February 25, 2025

ಮೇ 15: ಉಡುಪಿಯಲ್ಲಿ ಗಂಗಾ ಶಶಿಧರನ್​ ವಯಲಿನ್ ವಾದನ

ಮೇ 15: ಉಡುಪಿಯಲ್ಲಿ ಗಂಗಾ ಶಶಿಧರನ್​ ವಯಲಿನ್ ವಾದನ

Date:

ಉಡುಪಿ, ಮೇ 14: ಮೇ​15 ರಂದು ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಉಡುಪಿಯ ಪ್ರಸಿದ್ಧ ಗಾಂಧಿ ಆಸ್ಪತ್ರೆ ​ಮೂವತ್ತನೆ ಸಂವತ್ಸರಕ್ಕೆ ಪಾದಾರ್ಪಣೆ ಮಾಡುತ್ತಿರುವ ಸುಸಂದರ್ಭದಲ್ಲಿ ​ಹಾಗು ಪಂಚಮಿ ಟ್ರಸ್ಟ್, ಪಂಚಲಹರಿ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಗಂಗಾ ಶಶಿಧರನ್ ಗುರುವಾಯೂರು ಹಾಗೂ ಅವರ ಗುರು ಅನುರೂಪ್ ಗುರುವಾಯೂರು ಮತ್ತು​ ತಂಡದವರಿಂದ ವಯಲಿನ್ ವಾದನ ನಡೆಯಲಿದೆ​.

ತ್ರಿಶೂರ್ ನ ಹತ್ತು ವರ್ಷದ ಪುಟ್ಟ ಬಾಲಕಿ ಗಂಗಾ ಶಶಿಧರನ್ ವಯಲಿನ್ ವಾದನದ ಮೂಲಕ ನಾಡಿನ ಸಮಸ್ತರ ಗಮನ ಸೆಳೆದಿದ್ದಾಳೆ. ಸತತ ಪರಿಶ್ರಮದ ಮೂಲಕ ಎಳವೆಯಲ್ಲಿಯೇ ಅದ್ಭುತವಾದ ವಯಯೊಲಿನ್ ನುಡಿಸುವ ಮೂಲಕ ಸಂಗೀತ ಪ್ರಿಯರ ಮನ ಗೆದ್ದಿದ್ದಾಳೆ. ಗುರುವಾಯೂರು ದೇವಸ್ಥಾನದ ವೇದಿಕೆಯಲ್ಲಿ ವಯಲಿನ್ ಕಛೇರಿ ನಡೆದಾಗಲೆಲ್ಲ ಒಂದೂವರೆ ವರ್ಷದ ಗಂಗಾ ತನ್ನ ತಾಯಿಯೊಂದಿಗೆ ವೀಕ್ಷಕರಲ್ಲಿ ಒಬ್ಬಳಾಗಿದ್ದಳು. ಕಛೇರಿ ಮುಗಿಯುವವರೆಗೂ ಎದ್ದೇಳುತ್ತಿರಲಿಲ್ಲ. ವಯಲಿನ್ ನಲ್ಲಿ ಅಷ್ಟೊಂದು ಆಸಕ್ತಿ ಇದ್ದ ಆ ಒಂದೂವರೆ ವರ್ಷದ ಬಾಲಕಿಗೆ ಇದೀಗ ಹತ್ತು ವರ್ಷ.

ಈಕೆ ಅದೇ ವೇದಿಕೆಯಲ್ಲಿ ವಯಲಿನ್ ನಲ್ಲಿ ಜಾದೂ ಪ್ರದರ್ಶಿಸಿ ಎಲ್ಲರನ್ನು ಬೆರಗುಗೊಳಿಸುವ ತಾರೆಯಾದ ಕಥೆ ಅವಿಸ್ಮರಣೀಯ. ಪಿಟೀಲು ಅಥವಾ ವಯಲಿನ್ ಭಾರತೀಯ ಹಾಗು ಪಾಶ್ಚಾತ್ಯ ಸಂಗೀತ ಪರಿಕರಗಳಲ್ಲಿ ಜನಪ್ರಿಯವಾದ ತಂತಿ ವಾದ್ಯ. ದಕ್ಷಿಣ ಆಫ್ರಿಕಾ, ಸ್ವಿಟ್ಜರ್ಲೆಂಡ್, ದೆಹಲಿ ಮತ್ತು ಬೆಂಗಳೂರಿಗೆ ಆಹ್ವಾನಗಳೊಂದಿಗೆ ಕೇರಳ ಮತ್ತು ಹೈದರಾಬಾದ್‌ನಲ್ಲಿ ಅನೇಕ ಸ್ಥಳಗಳಲ್ಲಿ ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟಿದ್ದಾಳೆ. ಕಳೆದ ನವೆಂಬರ್‌ನಲ್ಲಿ ಗುರುವಾಯೂರು ದೇವಸ್ಥಾನದಲ್ಲಿ ನಡೆದ ಜುಗಲ್ಬಂದಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಗಂಗಾ ಸ್ಟಾರ್ ವಾದಕಿ ಆದರು. ಡಿಸೆಂಬರ್‌ನಲ್ಲಿ ವೈಕಂ ಮಹಾದೇವ ದೇವಸ್ಥಾನದಲ್ಲಿ ವೈಕಥಾಷ್ಟಮಿಯ ಸಂಗೀತ ಕಾರ್ಯಕ್ರಮವೂ ವೈರಲ್ ಆಗಿತ್ತು. ಖಾಸಗಿ ವಾಹಿನಿಗಳ ಕಾರ್ಯಕ್ರಮಗಳಲ್ಲೂ ಅತಿಥಿಯಾಗಿ ಭಾಗವಹಿಸಿದ್ದರು.

ಅಯಿರೂರು ಎಯುಪಿಎಸ್‌ನ ಐದನೇ ತರಗತಿಯ ವಿದ್ಯಾರ್ಥಿನಿ ಗಂಗಾ ನೃತ್ಯವನ್ನೂ ಕಲಿಯುತ್ತಿದ್ದಾಳೆ. ತಾಯಿ ಕೃಷ್ಣವೇಣಿ ಕೂಡ ವಯಲಿನ್ ನುಡಿಸುತ್ತಿದ್ದರು. ತಂದೆ ಶಶಿಧರನ್ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ನಾಲ್ಕೂವರೆ ವಯಸ್ಸಿನಲ್ಲಿ ವಯಲಿನ್ ಕಲಿಯಲು ಆರಂಭಿಸಿ, ಏಳನೇ ವಯಸ್ಸಿನಲ್ಲಿ ವೇದಿಕೆಯಲ್ಲಿ ಪ್ರದರ್ಶನ ನೀಡಲು ಪ್ರಾರಂಭಿಸಿದಳು. ಗಂಗಾ ಆಕಾಶವಾಣಿ ಎ ಗ್ರೇಡ್ ಕಲಾವಿದ ಸಿ.ಎಸ್ ಅನುರೂ​ಪ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ. ಮೊದಲ ಬಾರಿಗೆ ಪಿಟೀಲು ನುಡಿಸುವಾಗ ಕೈಗೆ ಗಾಯವಾದಾಗ ಭಯಪಡಬೇಡಿ ಎಂದು ಶಿಕ್ಷಕರು ಹೇಳಿದಾಗ ಭಯ ಪಡುವುದಿಲ್ಲ, ಕಲಿಯುತ್ತೇನೆ ಅಂದಿದ್ದಳಂತೆ.

ಇದೀಗ ಉಡುಪಿಯಲ್ಲಿ ಆಕೆಯ ವಯಲಿನ್ ವಾದನ ಕಾರ್ಯಕ್ರಮವು ಮೇ 15 ರಂದು ಸಂಜೆ ರಾಜಾಂಗಣದಲ್ಲಿ ನಡೆಯಲಿದ್ದು, ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ ಎಂದು ಗಾಂಧಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಎಂ. ಹರಿಶ್ಚಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಕ್ಕೆಹಳ್ಳಿ: ಕಲಿಕಾ ಹಬ್ಬ

ಬ್ರಹ್ಮಾವರ, ಫೆ.25: ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ,...

ಅಧ್ಯಾತ್ಮ ವಿದ್ಯೆಯ ಅಧ್ಯಯನದಿಂದ ನಮ್ಮ ವಿಕಾಸ: ಪುತ್ತಿಗೆ ಶ್ರೀಪಾದರು

ಉಡುಪಿ, ಫೆ.25: ಲೌಕಿಕ ಶಿಕ್ಷಣದಿಂದ ವೃತ್ತಿಯ ಸಂಪಾದನೆಯಾಗುತ್ತದೆ. ಅಧ್ಯಾತ್ಮ ಶಿಕ್ಷಣದಿಂದ ಜೀವನ...

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...
error: Content is protected !!