Tuesday, February 25, 2025
Tuesday, February 25, 2025

ಸರಸ್ವತಿ ನದಿ ಪಾತ್ರವು ಸೆಟಲೈಟ್ ಚಿತ್ರಗಳ ಮೂಲಕ ಲಭ್ಯವಿದ್ದು ಅದರ ಪುನಃಶ್ಚೇತನದ ಅಗತ್ಯವಿದೆ

ಸರಸ್ವತಿ ನದಿ ಪಾತ್ರವು ಸೆಟಲೈಟ್ ಚಿತ್ರಗಳ ಮೂಲಕ ಲಭ್ಯವಿದ್ದು ಅದರ ಪುನಃಶ್ಚೇತನದ ಅಗತ್ಯವಿದೆ

Date:

ಮಣಿಪಾಲ, ಮಾ.20: ವೇದಗಳಲ್ಲಿ ಉಲ್ಲೇಖಿಸಲ್ಪಟ್ಟ ‘ಸರಸ್ವತಿ’ ನದಿಯ ಪಾತ್ರವು ಸೆಟಲೈಟ್ ಚಿತ್ರಗಳ ಮೂಲಕ ಲಭ್ಯವಿದ್ದು, ಅದರ ಪುನಃಶ್ಚೇತನದ ಅಗತ್ಯವಿದೆ ಎಂದು ಹಿರಿಯ ಸಂಶೋಧಕ ಜಗದೀಶ ಗಾಂಧಿ ಅಭಿಪ್ರಾಯಪಟ್ಟರು. ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಮತ್ತು ರೋಟರಿ, ಮಣಿಪಾಲ ಜಂಟಿಯಾಗಿ ಆಯೋಜಿಸಿದ್ದ ಗೋಷ್ಠಿಯಲ್ಲಿ ‘ಸರಸ್ವತಿ ರಿವರ್ ವಾಟರ್ ಆಂಡ್ ಎನ್ವಿರಾನ್ಮೆಂಟ್’ ವಿಷಯದ ಕುರಿತು ಅವರು ಮಾತನಾಡಿದರು. ನಾಲ್ಕು ಸಾವಿರ ವರ್ಷಗಳ ಹಿಂದೆ, ಭೌಗೋಳಿಕ ಕಾರಣಗಳಿಗಾಗಿ ತನ್ನ ಪಾತ್ರವನ್ನು ಬದಲಾಯಿಸಿದ, ಸರಸ್ವತಿ ನದಿಯು ಇಂದು ಗುಪ್ತಗಾಮಿನಿಯಾಗಿ ಹರಿದು ಪ್ರಯಾಗದ ತ್ರಿವೇಣಿ ಸಂಗಮವನ್ನು ಸೇರುತ್ತದೆ ಎಂದು ತಮ್ಮ ಸಂಶೋಧನೆಗಳನ್ನು ಉಲ್ಲೇಖಿಸಿ ಪ್ರತಿಪಾದಿಸಿದರು. ಇಂದು ಒಣಗಿದಂತೆ ಕಾಣುವ ಈ ಪ್ರಮುಖ ನದಿಯ ಪುನಃಶ್ಚೇತನವು, ರಾಜಸ್ಥಾನದ ಮರುಭೂಮಿಯಲ್ಲಿ ನೀರುಣಿಸಬಹುದಾದ ಪ್ರಯತ್ನವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಜಿಸಿಪಿಎಎಸ್ ನ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಕಾರ್ಯಕ್ರಮ ಸಂಯೋಜಿಸಿದರು. ರೋಟರಿಯ ದೇವಾನಂದ್ ಸಿಎ, ಡಾ. ಮನೋಜ್ ನಾಗಸಂಪಿಗೆ, ಸಚ್ಚಿದಾನಂದ ನಾಯಕ್, ರಾಮಚಂದ್ರ ಕಾಮತ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಕ್ಕೆಹಳ್ಳಿ: ಕಲಿಕಾ ಹಬ್ಬ

ಬ್ರಹ್ಮಾವರ, ಫೆ.25: ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ,...

ಅಧ್ಯಾತ್ಮ ವಿದ್ಯೆಯ ಅಧ್ಯಯನದಿಂದ ನಮ್ಮ ವಿಕಾಸ: ಪುತ್ತಿಗೆ ಶ್ರೀಪಾದರು

ಉಡುಪಿ, ಫೆ.25: ಲೌಕಿಕ ಶಿಕ್ಷಣದಿಂದ ವೃತ್ತಿಯ ಸಂಪಾದನೆಯಾಗುತ್ತದೆ. ಅಧ್ಯಾತ್ಮ ಶಿಕ್ಷಣದಿಂದ ಜೀವನ...

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...
error: Content is protected !!