Tuesday, February 25, 2025
Tuesday, February 25, 2025

ಧೀಮಂತ ಚೇತನಗಳನ್ನು ನೆನೆದುಕೊಳ್ಳಬೇಕಾದುದು ನಮ್ಮ ಹೊಣೆ: ಟಿ. ಮಂಜುನಾಥ್ ಗಿಳಿಯಾರು

ಧೀಮಂತ ಚೇತನಗಳನ್ನು ನೆನೆದುಕೊಳ್ಳಬೇಕಾದುದು ನಮ್ಮ ಹೊಣೆ: ಟಿ. ಮಂಜುನಾಥ್ ಗಿಳಿಯಾರು

Date:

ಮಲ್ಪೆ, ಜ.4: ಸೀಮಿತವಾಗಿಯಾದರೂ ಸಮಾನತೆ ಹಾಗೂ ಸಮಾನ ಅವಕಾಶಗಳೊಂದಿಗೆ ನಮ್ಮ ಹಿರೀಕರಿಗಿಂತ ಭಿನ್ನವಾಗಿ ಅಕ್ಷರ ಲೋಕದ ಒರತೆಯನ್ನು ಎದೆಗಿಳಿಸಿಕೊಳ್ಳುತ್ತಾ ಕೂಡಿಬಾಳಲು ಸಾಧ್ಯವಾದ ಈ ವರ್ತಮಾನದ ಬದುಕು ಹಾಗೂ ಸಾಮಾಜಿಕ ಸುಸ್ಥಿತಿಯ ಹಿಂದಿನ ಕಾರಣ ಮತ್ತು ಕಾರಣಿಕರುಗಳ ಸಾಲಿನಲ್ಲಿ ನಿಲ್ಲುವ ಅಕ್ಷರದ ಅವ್ವ, ಅರಿವಿನ ತಾಯಿ, ಈ ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಾ ಬಾಪುಲೆ ಹಾಗೂ ಅವರ ಒಡನಾಡಿ ಮೊದಲ ಮುಸ್ಲಿಂ ಶಿಕ್ಷಕಿ ಫಾತಿಮಾ ಶೇಖ್ ತರಹದ ಧೀಮಂತ ಚೇತನಗಳನ್ನು ಅರ್ಥಪೂರ್ಣವಾಗಿ ನೆನೆದುಕೊಳ್ಳುತ್ತಾ ವೈಚಾರಿಕವೂ, ಮಾನವೀಯವೂ ಆದ ಭವಿಷ್ಯದ ಸಮಾಜವನ್ನು ಕಟ್ಟಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದು ನ್ಯಾಯವಾದಿ ಮಂಜುನಾಥ್ ಗಿಳಿಯಾರು ಹೇಳಿದರು. ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿನ ಕನ್ನಡ ವಿಭಾಗ ಹಾಗೂ ಐಕ್ಯೂಎಸಿ ಘಟಕಗಳ ಸಹಯೋಗದಲ್ಲಿ ನಡೆದ ‘ಅರಿವಿನ ತಾಯಿ ಸಾವಿತ್ರಿ ಬಾಪುಲೆ’ ಅವರ ಜನ್ಮದಿನಾಚರಣೆ ಕಾರ‍್ಯಕ್ರಮದಲ್ಲಿ ಸಾವಿತ್ರಿ ಬಾಪುಲೆ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ವಿಶೇಷ ಉಪನ್ಯಾಸ ನೀಡಿದರು.

ಸ್ವಾಗತದೊಂದಿಗೆ ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ವಿಭಾಗ ಮುಖ್ಯಸ್ಥ ಪ್ರೊ. ಜಯಪ್ರಕಾಶ್ ಶೆಟ್ಟಿ, ಅಕ್ಷರವಿಲ್ಲದ ಅನಂತ ಕತ್ತಲೆಯಲ್ಲಿ ಅಳಿದು ಹೋದ ಅಸಂಖ್ಯ ಶಂಭೂಕ ಸರಣಿಯ ಕೊಂಡಿಗಳು ಕಳಚಿಕೊಂಡ ಹೊಸಕಾಲದ ಅರಿವಿನ ಫಲಾನುಭವಿಗಳಾದ ಯುವ ಮನಸ್ಸುಗಳು ಪುಲೆ ದಂಪತಿಗಳ ಬದುಕಿನ ಹೋರಾಟದ ಚರಿತ್ರೆಯನ್ನು ಎಚ್ಚರದಿಂದಲೇ ನೆನೆಯಬೇಕು ಎಂದರು. ಪ್ರಾಂಶುಪಾಲ ಪ್ರೊ. ಸುರೇಶ್ ರೈ ಕೆ. ಅಧ್ಯಕ್ಷತೆ ವಹಿಸಿದ್ದ ಕಾರ‍್ಯಕ್ರಮದಲ್ಲಿ ಐಕ್ಯೂಎಸಿ ಸಂಚಾಲಕಿ ಡಾ. ಮೇವಿ ಮಿರಾಂದ ಉಪಸ್ಥಿತರಿದ್ದರು. ಸಂವಿಧಾನದ ಪೀಠಿಕೆಯ ಓದಿನೊಂದಿಗೆ ಆರಂಭವಾದ ಕಾರ‍್ಯಕ್ರಮವನ್ನು ಉಪನ್ಯಾಸಕಿ ಶರೀತಾ ವಂದಿಸಿ, ಸಹಾಯಕ ಪ್ರಾಧ್ಯಾಪಕಿ ರತ್ನಮಾಲಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಕ್ಕೆಹಳ್ಳಿ: ಕಲಿಕಾ ಹಬ್ಬ

ಬ್ರಹ್ಮಾವರ, ಫೆ.25: ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ,...

ಅಧ್ಯಾತ್ಮ ವಿದ್ಯೆಯ ಅಧ್ಯಯನದಿಂದ ನಮ್ಮ ವಿಕಾಸ: ಪುತ್ತಿಗೆ ಶ್ರೀಪಾದರು

ಉಡುಪಿ, ಫೆ.25: ಲೌಕಿಕ ಶಿಕ್ಷಣದಿಂದ ವೃತ್ತಿಯ ಸಂಪಾದನೆಯಾಗುತ್ತದೆ. ಅಧ್ಯಾತ್ಮ ಶಿಕ್ಷಣದಿಂದ ಜೀವನ...

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...
error: Content is protected !!