Friday, October 18, 2024
Friday, October 18, 2024

ಉಡುಪಿ ಗೀತಾಮಂದಿರ: ವೈಭವದ ಗೀತಾ ಜಯಂತಿ

ಉಡುಪಿ ಗೀತಾಮಂದಿರ: ವೈಭವದ ಗೀತಾ ಜಯಂತಿ

Date:

ಉಡುಪಿ, ಡಿ.24: ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದಂಗಳವರ ಶುಭ ಆಶೀರ್ವಾದದೊಂದಿಗೆ ಉಡುಪಿಯ ಗೀತಾಮಂದಿರದಲ್ಲಿ ಗೀತಾಜಯಂತಿ ಉತ್ಸವ ನಡೆಯಿತು. ವಿದ್ವಾನ್ ಶತಾವಧಾನಿ ಡಾ. ರಾಮನಾಥ ಆಚಾರ್ಯ ದೀಪ ಬೆಳಗಿಸಿ ಶ್ರೀ ಕೃಷ್ಣನ ಗೀತೆಯ ಸಾರದ ಬಗ್ಗೆ ತಿಳಿಸಿ, ಎಲ್ಲರೂ ಜೀವನದಲ್ಲಿ ಗೀತೆಯನ್ನು ಬಳಸಿ ಉತ್ತಮ ಜೀವನವನ್ನು ಅನುಭವಿಸಿ ಎಂದು ಸಂದೇಶ ನೀಡಿದರು. ಹಿರಿಯ ವಿದ್ವಾಂಸರಾದ ಮಧ್ವರಮಣ ಆಚಾರ್ಯ ಮಾತನಾಡಿ, ಪೋಷಕರು ಈಗಲೇ ಮಕ್ಕಳಲ್ಲಿ ಗೀತಾಭ್ಯಾಸವನ್ನು ಮಾಡಿಸಿ, ಹಿಂದೂ ಸಂಸ್ಕೃತಿಯನ್ನು ಉಳಿಸುವಂತಾಗಲಿ ಎಂದರು.

ಉಡುಪಿಯ ಸುಮಾರು 24 ಶಾಲೆಗಳ 800 ವಿದ್ಯಾರ್ಥಿಗಳಿಂದ ಗೀತಾ ಕಂಠ ಸ್ಪರ್ಧೆ ನಡೆಸಿ, 175 ವಿಜೇತರಿಗೆ ಪ್ರಮಾಣಪತ್ರದೊಂದಿಗೆ ಬಹುಮಾನ ನೀಡಲಾಯಿತು. ಗೀತಾ ಮಾತೆಯರಿಂದ ಗೀತಾ ಪಾರಾಯಣ ನಡೆಯಿತು. ರಮೇಶ್ ಭಟ್ ಕೆ ಕಾರ್ಯಕ್ರಮ ನಿರೂಪಿಸಿ ಸಂಯೋಜಿಸಿದರು. ಶ್ರೀಮಠದ ವಿಷ್ಣುಮೂರ್ತಿ ಉಪಾಧ್ಯ ಸ್ವಾಗತಿಸಿ, ರವೀಂದ್ರ ಆಚಾರ್ಯ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತರರ ಭಾವದಲ್ಲಿ

ಸವಿಗೆ ಪಿಯುಸಿಯಲ್ಲಿ 85% ಮಾರ್ಕ್ಸ್ ಬಂದಿತ್ತು. ಅವಳಿಗೆ ಸಿಗಬೇಕಾದ ಅಂಕಕ್ಕಿಂತ 10%...

ಅ.27: ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ, ಪ್ರದರ್ಶನ ಮತ್ತು ಮಾರಾಟ

ಉಡುಪಿ, ಅ.18: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ, ಶಬರಿಮಲೆ...

ಕಬ್ಬದುಳುಮೆ: ಹಳೆಗನ್ನಡ ಕಾವ್ಯದೋದು ಕಮ್ಮಟ

ತೆಂಕನಿಡಿಯೂರು, ಅ.18: ನೆಲವನ್ನು ಉತ್ತು ಅದರೊಡಲಿಗೆ ಕಾಳು ಬಿತ್ತಿ ಬಾಳು ಕಟ್ಟಿಕೊಂಡ...

ಇಸ್ರೇಲ್ ದಾಳಿಗೆ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವು

ಯು.ಬಿ.ಎನ್.ಡಿ., ಅ.18: ಹಮಾಸ್ ಮುಖ್ಯಸ್ಥ ಮತ್ತು ಕಳೆದ ವರ್ಷ ಅಕ್ಟೋಬರ್ 7...
error: Content is protected !!