Saturday, October 19, 2024
Saturday, October 19, 2024

ಪುತ್ತಿಗೆ ಪರ್ಯಾಯ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದೊಂದಿಗೆ ಸಮಾಲೋಚನಾ ಸಭೆ

ಪುತ್ತಿಗೆ ಪರ್ಯಾಯ: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದೊಂದಿಗೆ ಸಮಾಲೋಚನಾ ಸಭೆ

Date:

ಉಡುಪಿ, ಡಿ.17: ಪುತ್ತಿಗೆ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯೋತ್ಸವದ ಪ್ರಯುಕ್ತ ಸ್ವಾಗತ ಸಮಿತಿಯ ನೇತೃತ್ವದಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದೊಂದಿಗೆ ಸಮಾಲೋಚನಾ ಸಭೆ ನಡೆಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಮಠದ ದಿವಾನರಾದ ನಾಗರಾಜ ಆಚಾರ್ಯ, ಇಡೀ ಜಿ.ಎಸ್.ಬಿ ಸಮಾಜ ಪುತ್ತಿಗೆ ಪರ್ಯಾಯದ ಪ್ರತಿ ಉಪಸಮಿತಿಯಲ್ಲಿ ಸಹಕರಿಸಬೇಕಾಗಿ ವಿನಂತಿಸಿ, ಸಮಾಜದ ಅಧಿಕೃತ ಸದಸ್ಯತ್ವವನ್ನು ಪತ್ರ ಮುಖೇನ ನೀಡಿದರು. ಪತ್ರವನ್ನು ಸ್ವೀಕರಿಸಿದ ಉಡುಪಿ ಶ್ರೀ ಲಕ್ಷ್ಮಿ ವೆಂಕಟರಮಣ ದೇವಳದ ಆಡಳಿತ ಮೊಕ್ತೇಸರ ಪಿ. ವಿ. ಶೆಣೈ, ನಮ್ಮ ಸಮಾಜವು ಪರ್ಯಾಯದ ಪುರಪ್ರವೇಶದ ಮೆರವಣಿಗೆಯಲ್ಲಿ ಭಾಜನಾ ತಂಡದ ಮೂಲಕ ಭಾಗವಹಿಸುವುದು ಅಲ್ಲದೆ ಹೊರೆಕಾಣಿಕೆ, ಸ್ವಯಂಸೇವಕ ಸಮಿತಿ ಹೀಗೆ ಎಲ್ಲದರಲ್ಲಿ ಪಾಲ್ಗೊಂಡು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಸಭೆಯಲ್ಲಿ ವಿಶ್ವನಾಥ್ ಶೆಣೈ, ಪ್ರಶಾಂತ್ ಬಾಳಿಗ, ಕೆ.ಎ.ಪಿ.ಆರ್.ಕಿಣಿ, ಗಣೇಶ್ ಕಿಣಿ, ಮಲ್ಪೆ ವಿಶ್ವನಾಥ್ ಭಟ್, ದೀಪಕ್ ಶೆಣೈ ಅಲೆವೂರು, ಗೋಕುಲದಾಸ್ ಪೈ, ಕುಯಿಲಾಡಿ ಸುರೇಶ್ ನಾಯಕ್, ರಾಘವೇಂದ್ರ ಕಿಣಿ, ಜಗದೀಶ್ ಪೈ, ವಿಶ್ವನಾಥ ಪೈ, ಮುಂತಾದವರು ಉಪಸ್ಥಿತರಿದ್ದರು. ಸಮಿತಿಯ ಸಂಚಾಲಕರಾದ ರಮೇಶ್ ಭಟ್ ಕೆ ಸ್ವಾಗತಿಸಿ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ: ಮೈ ಮರೆತರೆ ಕಾದಿದೆ ಅಪಾಯ

ಉಡುಪಿ, ಅ.19: ಉಡುಪಿ ನಗರದ ಕಲ್ಸಂಕ ಮಣಿಪಾಲ ರಸ್ತೆಯ ಮಾಲ್ ಒಂದರ...

ಅಧ್ಯಯನ ಪ್ರವಾಸ

ಕುಂದಾಪುರ, ಅ.19: ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಗಣಕ...

ಸ್ಯಾಮ್ ಸಂಗ್ ಸಾಲ್ವ್ ಫಾರ್ ಟುಮಾರೊ 2024 ಫಲಿತಾಂಶ ಪ್ರಕಟ

ಉಡುಪಿ, ಅ.19: ಸ್ಯಾಮ್ ಸಂಗ್ ಇಂಡಿಯಾ ಕಂಪನಿಯ ಪ್ರಮುಖ ರಾಷ್ಟ್ರೀಯ ಶಿಕ್ಷಣ...

ಮಕ್ಕಳಿಗೆ ಎಳವೆಯಲ್ಲಿಯೇ ವೇದಿಕೆ ಕಲ್ಪಿಸಿ: ಗೀತಾ ಆನಂದ್ ಕುಂದರ್

ಕೋಟ, ಅ.19: ಎಳವೆಯಲ್ಲಿಯೇ ಮಕ್ಕಳಿಗೆ ಸಮರ್ಪಕ ವೇದಿಕೆ ಕಲ್ಪಿಸಿಕೊಡಬೇಕು, ಮಕ್ಕಳ ಪ್ರಥಮ...
error: Content is protected !!