Wednesday, February 26, 2025
Wednesday, February 26, 2025

ಮಣಿಪಾಲ: ರಾಷ್ಟ್ರೀಯ ಸಮ್ಮೇಳನ

ಮಣಿಪಾಲ: ರಾಷ್ಟ್ರೀಯ ಸಮ್ಮೇಳನ

Date:

ಮಣಿಪಾಲ, ಡಿ.13: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯವು ನವದೆಹಲಿಯ ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೆರ್ಸ್ ಜಂಟಿ ಆಶ್ರಯದಲ್ಲಿ ‘ಭಾರತ, ಅಂತರಾಷ್ಟ್ರೀಯ ಭದ್ರತೆ, ಶಾಂತಿ ಹಾಗೂ ಮಾಧ್ಯಮ’ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ನಡೆಯಿತು. ಮಣಿಪಾಲದ ನಿರ್ಮಾತೃ ಡಾ. ಟಿ.ಎಮ್.ಎ ಪೈ ಇವರ 125 ನೇ ಹುಟ್ಟಿದ ವರ್ಷದ ಪ್ರಯುಕ್ತ ಜಿಯೋಪೊಲಿಟಿಕ್ಸ್ ಮತ್ತು ಇಂಟರ್ನ್ಯಾಷನಲ್ ರಿಲೇಷನ್ಸ್, ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಮತ್ತು ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್ ಒಟ್ಟಾಗಿ ಈ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿದ್ದವು. ಉದ್ಘಾಟನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಹೆಯ ಕುಲಪತಿ ಲೆ. ಜ. ಡಾ. ಎಂ ಡಿ ವೆಂಕಟೇಶ್, ಶಾಂತಿ , ನ್ಯಾಯ ಮತ್ತು ಸುಸ್ಥಿರತೆಯನ್ನು ಆಧರಿಸಿದ, ಜಾಗತಿಕ ವ್ಯವಸ್ಥೆಗೆ ನಾವೆಲ್ಲರೂ ಶ್ರಮಿಸಬೇಕೆಂದು ಕರೆಯಿತ್ತರು. ಈ ನಿಟ್ಟಿನಲ್ಲಿ ಯುನೈಟೆಡ್ ನೇಷನ್ಸ್ ನಲ್ಲಿ ಸದ್ಯ ಇರುವ ವ್ಯವಸ್ಥೆಯಲ್ಲಿ ಹಲವು ಸುಧಾರಣೆಗಳಾಗಬೇಕೆಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದರು.

ಡಾ. ಟಿಎಂಎ ಪೈ ನಿಜವಾದ ಅರ್ಥದಲ್ಲಿ ಒಬ್ಬ ಗಾಂಧಿವಾದಿಯಾಗಿದ್ದರು. ಅವರು ಆರಂಭಿಸಿದ ಸಂಸ್ಥೆಗಳು ಗಾಂಧಿ ಆದರ್ಶದಿಂದ ಪ್ರೇರಣೆ ಪಡೆದಿದ್ಧವು. ಇಂದು ಮಾಹೆಯ ಜಿಯೋಪೊಲಿಟಿಕ್ಸ್, ಗಾಂಧಿಯನ್ ಸೆಂಟರ್ ಹಾಗೂ ಎಂಐಸಿ ಒಂದು ಶಾಂತಿಯುತ ಜಾಗತಿಕ ವ್ಯವಸ್ಥೆ ಮತ್ತು ಜವಾಬ್ದಾರಿಯುತ ಮಾಧ್ಯಮವನ್ನು ಮುನ್ನೆಲೆಗೆ ತರುತ್ತಿರುವುದು ಸಂತೋಷಕರ ವಿಷಯ ಎಂದರು. ಎರಡು ದಿನಗಳ ಸಮ್ಮೇಳನದಲ್ಲಿ ವಿದ್ವಾಂಸರಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ಪಿ ಎಸ್ ರಾಘವನ್, ನಿವೃತ್ತ ರಾಯಭಾರಿ ಪಂಕಜ್ ಶರಣ್, ಯುನೆಸ್ಕೋ ಪೀಸ್ ಚೇರ್ ನ ಮುಖ್ಯಸ್ಥ ಪ್ರೊ. ಎಂ.ಡಿ ನಳಪತ್, ಐಸಿಡಬ್ಲ್ಯೂ ಎ ನ ಪ್ರತಿನಿಧಿ ಡಾ. ಸ್ತುತಿ ಬಾನೆರ್ಜಿ, ಡಾ. ಬಿ ಪಿ ಸಂಜಯ್, ಡಾ. ರಾಜಾರಾಮ್ ತೋಳ್ಪಡಿ, ಡಾ. ಶೇಷಾದ್ರಿ ಚಾರಿ, ಮಿಸ್ ಪ್ರಭಾ ರಾವ್, ಡಾ. ಅಜಯ್ ಲೇಲೆ, ಡಾ. ರಾಘೋತ್ತಮ್, ಡಾ. ಸ್ಟಾನ್ಲೀ ಜಾನಿ, ಡಾ. ಗುರ್ಬಸ್ ಅಕ್ತಾಸ್, ಪ್ರೊ. ಕೆ ಪಿ ವಿಜಯಲಕ್ಷ್ಮಿ, ಪ್ರೊ. ವರದೇಶ್ ಹಿರೇಗಂಗೆ, ಡಾ. ಪದ್ಮರಾಣಿ, ಡಾ. ರವೀಂದ್ರನಾಥನ್, ಶ್ರೀರಾಜ್ ಗುಡಿ, ಡಾ. ವಿಘ್ನೇಶ್ ರಾಮ್, ಡಾ. ಧನಶ್ರೀ ಜಯರಾಮ್, ಡಾ. ಸಂಕಲ್ಪ್ ಗುರ್ಜರ್, ಡಾ. ಅಮೃತ ಜಾಶ್ ಮಾತನಾಡಿದರು. ಮಾಹೆ ಸಹಕುಲಪತಿ ಡಾ. ಮಧು ವೀರಾಘವನ್ ಹಾಗೂ ಕುಲಸಚಿವ ಡಾ. ಗಿರಿಧರ್ ಕಿಣಿ ಉಪಸ್ಥಿತರಿದ್ಧರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೊಂಬೆಳಕು ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಸಾಲಿಗ್ರಾಮ ಪ.ಪಂ.ಗೆ ನಾಲ್ಕು ಬಹುಮಾನ

ಉಡುಪಿ, ಫೆ.25: ಮಂಗಳೂರಿನ ಅಡ್ಯಾರು ಸಹ್ಯಾದ್ರಿ ಕ್ರೀಡಾಂಗಣದಲ್ಲಿ ನಡೆದ ಪಂಚಾಯತ್ ರಾಜ್...

ಆಸ್ತಿ ತೆರಿಗೆ ಪಾವತಿಗೆ ಸೂಚನೆ

ಉಡುಪಿ, ಫೆ.25: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ / ನಿವೇಶನಗಳನ್ನು...

ವೈದ್ಯಾಧಿಕಾರಿ ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ಫೆ.25: ಆರೋಗ್ಯ ಇಲಾಖೆಯ ವತಿಯಿಂದ ಜಿಲ್ಲೆಯ ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ...

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಿಣ್ಣರು ಶ್ರೀಕೃಷ್ಣನ ಫ್ರೆಂಡ್ಸ್: ಪುತ್ತಿಗೆ ಶ್ರೀ

ಉಡುಪಿ, ಫೆ.25: ಶ್ರೀಕೃಷ್ಣನಿಗೆ ಮಕ್ಕಳು ಎಂದರೆ ಬಹಳ ಪ್ರೀತಿ.​ ಕೃಷ್ಣನು ತನ್ನ...
error: Content is protected !!