Wednesday, February 26, 2025
Wednesday, February 26, 2025

ಕ್ಯಾಪ್ಟನ್ ಪ್ರಾಂಜಲ್ ಸ್ಮಾರಕ ನಾಡಿಗೆ ಮಾದರಿಯಾಗಲಿ

ಕ್ಯಾಪ್ಟನ್ ಪ್ರಾಂಜಲ್ ಸ್ಮಾರಕ ನಾಡಿಗೆ ಮಾದರಿಯಾಗಲಿ

Date:

ಉಡುಪಿ, ನ.30: ಕಾರ್ಕಳ ತಾಲೂಕಿನ ಕಲ್ಯಾ ಶಾಲೆಯ ಶತಮಾನೋತ್ಸವ ಸಮಿತಿ ನಿರ್ಮಾಣ ಮಾಡಲಿರುವ ಹುತಾತ್ಮ ಯೋಧ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ಸ್ಮಾರಕವು ನಾಡಿಗೆ ಮಾದರಿ ಆಗಲಿ. ಅದು ಇಡೀ ಗ್ರಾಮದ ಜನತೆಯ ರಾಷ್ಟ್ರಪ್ರೇಮಕ್ಕೆ ಪೂರಕವಾಗಿ ನಿಲ್ಲಲಿ ಎಂದು ಶಾಸಕ ವಿ ಸುನೀಲ್ ಕುಮಾರ್ ಹೇಳಿದರು. ತಾಲೂಕಿನ ಕಲ್ಯಾ ಸರಕಾರಿ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಿತಿಯು ನಿರ್ಮಿಸಲು ಉದ್ದೇಶಿಸಿರುವ ಹುತಾತ್ಮ ಯೋಧ ಕ್ಯಾಪ್ಟನ್ ಎಂ ವಿ ಪ್ರಾಂಜಲ್ ಸ್ಮಾರಕಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಮುಂದೆ ಕಾರ್ಕಳದಲ್ಲಿ ಸೈನಿಕ ಶಾಲೆ ನಿರ್ಮಿಸುವ ಯೋಜನೆ ಇದ್ದು ಅದು ಕೂಡ ಈ ಪ್ರದೇಶದಲ್ಲಿ ಇನ್ನಷ್ಟು ಸೈನಿಕರನ್ನು ರಾಷ್ಟ್ರಕ್ಕೆ ನೀಡಲು ಪ್ರೆರಕವಾಗುತ್ತದೆ ಎಂದರು.

ಇಬ್ಬರು ನಿವೃತ್ತ ಸೈನಿಕರಾದ ಸುಬೇದಾರ್ ವಿಜಯ್ ಫೆರ್ನಾಂಡಿಸ್ ಮತ್ತು ರಾಧಾಕೃಷ್ಣ ಭಟ್ ಅವರನ್ನು ಸಮಿತಿಯ ಪರವಾಗಿ ಸನ್ಮಾನಿಸಲಾಯಿತು. ಸುಬೇದಾರ್ ವಿಜಯ್ ಫೆರ್ನಾಂಡಿಸ್ ಮಾತನಾಡಿ, ಸೈನಿಕರಾಗುವುದು ಒಂದು ಅದ್ಭುತ ಅವಕಾಶ. ಸೈನಿಕ ದೇಶದ ಬಹುದೊಡ್ಡ ಆಸ್ತಿ. ಯುದ್ಧಭೂಮಿಯಲ್ಲಿ ಭಾರತಕ್ಕಾಗಿ ಬಲಿದಾನ ಮಾಡಲು ಪ್ರತೀ ಒಬ್ಬ ಸೈನಿಕನು ತವಕಿಸುತ್ತಾನೆ ಎಂದು ಹೇಳಿದರು. ಇನ್ನೊಬ್ಬ ನಿವೃತ್ತ ಸೈನಿಕ ರಾಧಾಕೃಷ್ಣ ಭಟ್ ಅವರು ಸೈನಿಕರ ಮಹತ್ವವನ್ನು ವಿವರಿಸಿದರು.

ಶಾಲೆಯ ಮುಖ್ಯ ಶಿಕ್ಷಕಿ ಕಸ್ತೂರಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಆಶಾ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸಂಜೀವ ಶೆಟ್ಟಿ, ಪೂರ್ವ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ರವಿದಾಸ್ ಕುಡ್ವ, ಶತಮಾನೋತ್ಸವ ಸಮಿತಿಯ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸುಮನಾ ಮತ್ತು ವಿವಿಧ ಸಮಿತಿಗಳ ಸಂಚಾಲಕರು ಮತ್ತು ಗ್ರಾಮಸ್ಥರು ಇದ್ದರು. ರಾಜೇಂದ್ರ ಭಟ್ ಕೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಚಿತ್ ಕೋಟ್ಯಾನ್ ದೇಶಭಕ್ತಿ ಗೀತೆ ಹಾಡಿದರು. ಸುಧಾಕರ್ ಶೆಣೈ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೊಂಬೆಳಕು ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಸಾಲಿಗ್ರಾಮ ಪ.ಪಂ.ಗೆ ನಾಲ್ಕು ಬಹುಮಾನ

ಉಡುಪಿ, ಫೆ.25: ಮಂಗಳೂರಿನ ಅಡ್ಯಾರು ಸಹ್ಯಾದ್ರಿ ಕ್ರೀಡಾಂಗಣದಲ್ಲಿ ನಡೆದ ಪಂಚಾಯತ್ ರಾಜ್...

ಆಸ್ತಿ ತೆರಿಗೆ ಪಾವತಿಗೆ ಸೂಚನೆ

ಉಡುಪಿ, ಫೆ.25: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ / ನಿವೇಶನಗಳನ್ನು...

ವೈದ್ಯಾಧಿಕಾರಿ ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ಫೆ.25: ಆರೋಗ್ಯ ಇಲಾಖೆಯ ವತಿಯಿಂದ ಜಿಲ್ಲೆಯ ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ...

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಿಣ್ಣರು ಶ್ರೀಕೃಷ್ಣನ ಫ್ರೆಂಡ್ಸ್: ಪುತ್ತಿಗೆ ಶ್ರೀ

ಉಡುಪಿ, ಫೆ.25: ಶ್ರೀಕೃಷ್ಣನಿಗೆ ಮಕ್ಕಳು ಎಂದರೆ ಬಹಳ ಪ್ರೀತಿ.​ ಕೃಷ್ಣನು ತನ್ನ...
error: Content is protected !!