Thursday, February 27, 2025
Thursday, February 27, 2025

ಪೊಲಿಪು: ತರಗತಿಗಳ ಪೀಠೋಪಕರಣಗಳ ಹಸ್ತಾಂತರ

ಪೊಲಿಪು: ತರಗತಿಗಳ ಪೀಠೋಪಕರಣಗಳ ಹಸ್ತಾಂತರ

Date:

ಕಾಪು, ನ.20: ಪೊಲಿಪು ಸರಕಾರಿ ಹಿ.ಪ್ರಾ.ಶಾಲೆಗೆ ಸರಕಾರದ ಅನುದಾನದಲ್ಲಿ ಕೆ.ಜಿ ತರಗತಿಗಳಿಗೆ ನೀಡಿದ ಪೀಠೋಪಕರಣಗಳ ಹಸ್ತಾಂತರ ಕಾರ‍್ಯಕ್ರಮ ಮತ್ತು ಮಕ್ಕಳ ದಿನಾಚರಣೆ ಎಸ್.ಡಿ.ಎಮ್.ಸಿ. ಅಧ್ಯಕ್ಷೆ ಶೋಭಾ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿತು. ಆಂಗ್ಲಮಾಧ್ಯಮ ಸಮಿತಿಯ ಕಾರ‍್ಯದರ್ಶಿಗಳಾದ ಹಾಗೂ ಕಾಪು ಪುರಸಭಾ ಸದಸ್ಯರಾದ ಕಿರಣ ಆಳ್ವ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪೊಲಿಪು ವಾರ್ಡಿನ ಪುರಸಭಾ ಸದಸ್ಯೆ ರಾಧಿಕಾ ಸುವರ್ಣ ಶುಭ ಹಾರೈಸಿದರು. ಪ್ರೀತಾ ಎನ್ ಶೆಟ್ಟಿ ಸ್ವಾಗತಿಸಿದರು. ಆರತಿ ವಾಸುದೇವ ಶಾಲಾ ವರದಿಯನ್ನು ವಾಚಿಸಿದರು.

ಕಾಪು ರೋಟರಿ ಅಧ್ಯಕ್ಷರಾದ ರಾಜೇಂದ್ರನಾಥ್ ಮಕ್ಕಳ ದಿನಾಚರಣೆಯ ಬಗ್ಗೆ ಮಾತನಾಡಿದರು. ಕ್ಷೇತ್ರ ಸಂಪನ್ಮೂಲ ಅಧಿಕಾರಿ ಸುನೀತ ಹಾಗೂ ಕಾಪು ರೋಟರಿಯ ಪೂರ್ವಾಧ್ಯಕ್ಷರಾದ ಕೆ. ಶ್ರೀನಿವಾಸ್ ರಾವ್ ಶುಭ ಹಾರೈಸಿದರು. ಬಹುಮಾನ ವಿಜೇತರ ಪಟ್ಟಿಯನ್ನು ಶಿಕ್ಷಕಿ್ ಸಾವಿತ್ರಿ, ಪ್ರಿಯ, ಸೌಮ್ಯ ಉದಯ್ ವಾಚಿಸಿದರು. ಕಾಪು ರೋಟರಿಯ ಕಾರ್ಯದರ್ಶಿ ವೇಣುಕೃಷ್ಣ, ಸದಾಶಿವ ಭಟ್, ಬಾಲಕೃಷ್ಣ ಆಚಾರ‍್ಯ, ಜೇಮ್ಸ್ ಡಿಸೋಜ, ಗೋಪಾಲ್ ನಾಯ್ಕ್, ಮಾಧವ ಸಾಲ್ಯಾನ್ ಬಹುಮಾನ ವಿತರಿಸಿದರು. ಶಾಲಾ ಮುಖ್ಯ ಶಿಕ್ಷಕಿ ಗಾಯತ್ರಿ ರಾವ್ ಕಾರ‍್ಯಕ್ರಮ ಸಂಯೋಜಿಸಿದರು. ಸೌಮ್ಯ ಸತೀಶ್ ವಂದಿಸಿದರು. ಶಿಕ್ಷಕಿ ಅಮಿತಾ, ನೀತಾ ಕಾರ‍್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

51 ವಯಸ್ಸಿನಲ್ಲೂ ಸ್ಪೋಟಕ ಆಟ; ಗತ ವೈಭವ ನೆನಪಿಸಿದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್

ಮುಂಬಯಿ, ಫೆ.26: ಮಂಗಳವಾರ ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ...

ಮಹಾಕುಂಭ ವೈಭವ- 45 ದಿನಗಳಲ್ಲಿ 65 ಕೋಟಿಗೂ ಹೆಚ್ಚು ಭಕ್ತರು, 3 ಲಕ್ಷ ಕೋಟಿ ರೂ. ಆದಾಯ

ಪ್ರಯಾಗರಾಜ್, ಫೆ.26: ಬುಧವಾರ ಮಹಾಶಿವರಾತ್ರಿಯಂದು ಸಂಪನ್ನಗೊಂಡ ಮಹಾಕುಂಭಮೇಳ ಕಳೆದ 45 ದಿನಗಳಲ್ಲಿ...

ಜೆಇಇ ಬಿ ಆರ್ಕ್ ಮತ್ತು ಬಿ ಪ್ಲಾನಿಂಗ್ ಫಲಿತಾಂಶ: ಕ್ರಿಯೇಟಿವ್ ಸಾಧನೆ

ಉಡುಪಿ, ಫೆ.26: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್.ಟಿ.ಎ) ವತಿಯಿಂದ ನಡೆಸಲಾದ ಜೆಇಇ...

ಪರೀಕ್ಷಾ ತರಬೇತಿ

ಕುಂದಾಪುರ, ಫೆ.26: ಜೆಸಿಐ ಶಂಕರನಾರಾಯಣ ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಶಂಕರನಾರಾಯಣ...
error: Content is protected !!