Wednesday, February 26, 2025
Wednesday, February 26, 2025

ಛಾಯಾಗ್ರಹಣದಲ್ಲಿ ಯೋಚನೆಯ ಪಾತ್ರ ಮಹತ್ವದ್ದಾಗಿದೆ: ಆಸ್ಟ್ರೋ ಮೋಹನ್

ಛಾಯಾಗ್ರಹಣದಲ್ಲಿ ಯೋಚನೆಯ ಪಾತ್ರ ಮಹತ್ವದ್ದಾಗಿದೆ: ಆಸ್ಟ್ರೋ ಮೋಹನ್

Date:

ಮಣಿಪಾಲ, ಅ.26: ಉತ್ತಮ ಛಾಯಾಗ್ರಹಣದಲ್ಲಿ ಕ್ಯಾಮೆರಾದ ತಂತ್ರಜ್ಞಾನಕ್ಕಿಂತಲೂ ಅದರ ಹಿಂದಿರುವ ಯೋಚನೆಯೇ ಮಹತ್ವದ ಪಾತ್ರ ವಹಿಸುತ್ತದೆ ಎಂದು ಹಿರಿಯ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಹೇಳಿದರು. ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ‘ಅ ಫೋಟೋಗ್ರಾಫಿಕ್ ಜರ್ನಿ’ ವಿಷಯದ ಕುರಿತು ಮಾತನಾಡಿ, ಛಾಯಾಗ್ರಹಣದ ತಂತ್ರಜ್ಞಾನವು ತುಂಬಾ ಮುಂದುವರೆದಿದೆ, ಈಗ ಒಬ್ಬರ ಮೊಬೈಲ್ ಫೋನ್ ಮೂಲಕವೇ ನೂರಾರು ಛಾಯಾಚಿತ್ರಗಳನ್ನು ತಕ್ಷಣವೇ ತೆಗೆಯಬಹುದು. ಆದರೆ ಇವು ಪ್ರಾಥಮಿಕವಾಗಿ ಸ್ನ್ಯಾಪ್‌ಶಾಟ್‌ಗಳು ಬದಲಾಗಿ ಛಾಯಾಚಿತ್ರಗಳಲ್ಲ ಎಂದರು.

ಛಾಯಾಚಿತ್ರಗಳನ್ನು ಯೋಚಿಸಿ ತೆಗೆದರೆ ಅದು ಅರ್ಥಪೂರ್ಣವಾಗಿರುತ್ತದೆ ಎಂದ ಆಸ್ಟ್ರೋ ಮೋಹನ್ ಅವರು ಮಂಗಳೂರು ವಿಮಾನ ಅಪಘಾತ, ಶ್ರೀಕೃಷ್ಣಮಠದ ಆವರಣದಲ್ಲಿ ಆನೆ ಓಡಾಟ, ಗುಜರಾತ್ ಭೂಕಂಪ, ಪಾಜಕದಲ್ಲಿ ಕಲ್ಲುಗಣಿಗಾರಿಕೆ ಸೇರಿದಂತೆ ತಮ್ಮ ಪ್ರಮುಖ ಛಾಯಾಚಿತ್ರಗಳ ವಿವರಣೆಯನ್ನು ನೀಡಿದರು. ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಸುದ್ದಿ ಮತ್ತು ಮಾನವ ಆಸಕ್ತಿಯ ಛಾಯಾಗ್ರಹಣದಲ್ಲಿ, ಸರಿಯಾದ ಕ್ಷಣವನ್ನು ಸೆರೆಹಿಡಿಯಲು ಆ ಸಂದರ್ಭಗಳಿಗೆ ಜೀವಂತವಾಗಿರಬೇಕು ಎಂದರು. ಜಿಸಿಪಿಎಎಸ್ ವಿಷುಯಲ್ ಆರ್ಟ್ಸ್ ಕ್ಲಬ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೊಂಬೆಳಕು ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಸಾಲಿಗ್ರಾಮ ಪ.ಪಂ.ಗೆ ನಾಲ್ಕು ಬಹುಮಾನ

ಉಡುಪಿ, ಫೆ.25: ಮಂಗಳೂರಿನ ಅಡ್ಯಾರು ಸಹ್ಯಾದ್ರಿ ಕ್ರೀಡಾಂಗಣದಲ್ಲಿ ನಡೆದ ಪಂಚಾಯತ್ ರಾಜ್...

ಆಸ್ತಿ ತೆರಿಗೆ ಪಾವತಿಗೆ ಸೂಚನೆ

ಉಡುಪಿ, ಫೆ.25: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ / ನಿವೇಶನಗಳನ್ನು...

ವೈದ್ಯಾಧಿಕಾರಿ ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ಫೆ.25: ಆರೋಗ್ಯ ಇಲಾಖೆಯ ವತಿಯಿಂದ ಜಿಲ್ಲೆಯ ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ...

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಿಣ್ಣರು ಶ್ರೀಕೃಷ್ಣನ ಫ್ರೆಂಡ್ಸ್: ಪುತ್ತಿಗೆ ಶ್ರೀ

ಉಡುಪಿ, ಫೆ.25: ಶ್ರೀಕೃಷ್ಣನಿಗೆ ಮಕ್ಕಳು ಎಂದರೆ ಬಹಳ ಪ್ರೀತಿ.​ ಕೃಷ್ಣನು ತನ್ನ...
error: Content is protected !!