Wednesday, February 26, 2025
Wednesday, February 26, 2025

ಐಎಡಿವಿಎಲ್ ಕರ್ನಾಟಕ ಶಾಖೆಯ 14ನೇ ವಾರ್ಷಿಕ ಸಮ್ಮೇಳನ

ಐಎಡಿವಿಎಲ್ ಕರ್ನಾಟಕ ಶಾಖೆಯ 14ನೇ ವಾರ್ಷಿಕ ಸಮ್ಮೇಳನ

Date:

ಉಡುಪಿ, ಅ.25: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮಣಿಪಾಲದ ಚರ್ಮರೋಗ ವಿಭಾಗದ ಪ್ರಾಧ್ಯಾಪಕ ಹಾಗೂ ಕ್ಯೂಟಿಕಾನ್ ಕೆಎನ್ 2023ರ ಸಂಘಟನಾ ಅಧ್ಯಕ್ಷರಾದ ಡಾ.ಸತೀಶ್ ಪೈ, ಅವರು ಬುಧವಾರ ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಣಿಪಾಲ, ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಮಣಿಪಾಲವು ಡಾ. ಟಿಎಂಎ ಪೈ ಹಾಲ್ಸ್, ಕೆಎಂಸಿ ಮಣಿಪಾಲದಲ್ಲಿ ಕರಾವಳಿ ಡರ್ಮಟಾಲಜಿ ಸೊಸೈಟಿ (ಕೆಡಿಎಸ್) ಇದರ ಸಹಯೋಗದೊಂದಿಗೆ 2023 ರ ಅಕ್ಟೋಬರ್ 27-29 ರವರೆಗೆ ಕರ್ನಾಟಕ ಶಾಖೆಯ ಐಎಡಿವಿಎಲ್ 14 ನೇ ವಾರ್ಷಿಕ ರಾಜ್ಯ ಸಮ್ಮೇಳನವನ್ನು ಆಯೋಜಿಸುತ್ತಿದೆ. 23 ವರ್ಷಗಳ ನಂತರ ನಾವು ಇದನ್ನು ಆಯೋಜಿಸುತ್ತಿರುವುದರಿಂದ ಈ ಸಮ್ಮೇಳನವು ನಮಗೆ ತುಂಬಾ ವಿಶೇಷವಾಗಿದೆ. ಚರ್ಮಶಾಸ್ತ್ರವು ವೇಗವಾಗಿ ಬೆಳೆಯುತ್ತಿರುವ ಉಪ-ವಿಶೇಷತೆಗಳಲ್ಲಿ ಒಂದಾಗಿದೆ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಹೆಚ್ಚು ಬೇಡಿಕೆಯಿರುವ ಶಾಖೆಯಾಗಿದೆ. ಆಯ್ಕೆಮಾಡಿದ ವಿಶೇಷತೆಯಲ್ಲಿ ನಮ್ಮ ಜ್ಞಾನವನ್ನು ನವೀಕರಿಸಿಕೊಳ್ಳುವುದು ಬಹಳ ಮುಖ್ಯ; ಒಬ್ಬರ ಜ್ಞಾನವನ್ನು ರಿಫ್ರೆಶ್ ಮಾಡಲು ಇರುವ ಒಂದು ಒಳ್ಳೆಯ ಮಾರ್ಗವೆಂದರೆ ಇಂತಹ ಸಮ್ಮೇಳನಗಳಲ್ಲಿ ಭಾಗವಹಿಸಿ ಆಲಿಸುವ ಮತ್ತು ತಜ್ಞರೊಂದಿಗೆ ಚರ್ಚಿಸುವ ಮೂಲಕ’ ಎಂದು ಹೇಳಿದರು.

ಸಂಪನ್ಮೂಲ ಭಾಷಣಕಾರರಾಗಿ ಯು.ಎಸ್.ಎ ಮತ್ತು ಯುಕೆಯಂತಹ ದೇಶಗಳಿಂದ ಬರುತ್ತಿರುವ ನಾಲ್ಕು ಪ್ರತಿಷ್ಠಿತ ಅಂತರರಾಷ್ಟ್ರೀಯ ತಜ್ಞರನ್ನು ಹೊಂದಲು ನಾವು ಅದೃಷ್ಟಶಾಲಿಯಾಗಿದ್ದೇವೆ. ಬೋಸ್ಟನ್ ವಿಶ್ವವಿದ್ಯಾನಿಲಯದ ಡಾ. ರಜಾಕ್ ಅಹ್ಮದ್ ಅವರು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಂತಹ ಪ್ರತಿಷ್ಠಿತ ನಿಯತಕಾಲಿಕಗಳಲ್ಲಿ ಬಹಳಷ್ಟು ಪ್ರಕಟಣೆಗಳೊಂದಿಗೆ ಆಟೋಇಮ್ಯೂನ್ ಬುಲ್ಲಸ್ ಕಾಯಿಲೆಗಳ ನಿರ್ವಹಣೆಯಲ್ಲಿ ವಿಶ್ವ ಪರಿಣಿತರಾಗಿದ್ದಾರೆ. ಪೆಮ್ಫಿಗಸ್‌ನಲ್ಲಿನ ಅವರ ಚಿಕಿತ್ಸೆಯ ಪ್ರೋಟೋಕಾಲ್ ಅನ್ನು ವೈಜ್ಞಾನಿಕ ಭ್ರಾತೃತ್ವವು ವ್ಯಾಪಕವಾಗಿ ಸ್ವೀಕರಿಸಿದೆ. ಅವರು ಎರಡು ಭಾಷಣಗಳನ್ನು ನೀಡಲಿದ್ದಾರೆ ಮತ್ತು ಅವರು ಡರ್ಮಟಾಲಜಿಯ ಉಪವಿಶೇಷತೆಗೆ ನೀಡಿದ ಕೊಡುಗೆಗಾಗಿ ಐಎಡಿವಿಎಲ್ ಕರ್ನಾಟಕ ಶಾಖೆಯು ‘ಚರಕ ಪ್ರಶಸ್ತಿ’ಯನ್ನು ನೀಡಿ ಗೌರವಿಸಲಿದೆ. ಮತ್ತೊಬ್ಬರು ಯುಕೆಯ ಸೇಂಟ್ ಜಾನ್ಸ್ ಇನ್‌ಸ್ಟಿಟ್ಯೂಟ್ ಆಫ್ ಡರ್ಮಟಾಲಜಿಯ ಪ್ರೊಫೆಸರ್ ಜೆಮಿಮಾ ಮೆಲ್ಲಿರಿಯೊ. ಇವರು ‘ಎಪಿಡರ್ಮಾಲಿಸಿಸ್ ಬುಲೋಸಾ’ ಎಂಬ ಆನುವಂಶಿಕ ಚರ್ಮದ ಕಾಯಿಲೆಯ ಚಿಕಿತ್ಸೆಗೆ ವಿಶ್ವ ಪರಿಣತರಾಗಿದ್ದಾರೆ. ಅಲ್ಲದೇ ತನ್ನ ಹೆಸರಿನಲ್ಲಿ ಅನೇಕ ಪ್ರಕಟಣೆಗಳನ್ನು ನೀಡಿದ್ದಾರೆ ಮತ್ತು ಈ ರೋಗದ ಪರಿಷ್ಕೃತ ಚಿಕಿತ್ಸಾ ವರ್ಗೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಇವರ ಜೊತೆಗೆ ವೇಲ್ಸ್ ವಿಶ್ವವಿದ್ಯಾನಿಲಯದ ತಜ್ಞ ಡಾ. ಮಂಜುನಾಥ್ ಅವರು ಸೋರಿಯಾಸಿಸ್ ಮತ್ತು ಎಸ್ಜಿಮಾ ಕುರಿತು ಮಾತನಾಡಲಿದ್ದಾರೆ. ದುಬೈನ ಡಾ. ಶ್ರೀಕುಮಾರ್ ಅವರು ಸೋರಿಯಾಸಿಸ್ ನಿರ್ವಹಣೆಯಲ್ಲಿ ಹೊಸ ಔಷಧದ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ. ಇದಲ್ಲದೆ, ಚಂಡೀಗಢ, ಪಾಂಡಿಚೇರಿ, ಕೋಲ್ಕತ್ತಾ, ವೆಲ್ಲೂರು, ಚೆನ್ನೈ ಮತ್ತು ಅಹಮದಾಬಾದ್‌ನಂತಹ ದೇಶದ ವಿವಿಧ ಭಾಗಗಳ ತಜ್ಞರು ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ” ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರು, ಚರ್ಮರೋಗ ವಿಭಾಗದ ಮುಖ್ಯಸ್ಥ ಹಾಗೂ ಕ್ಯೂಟಿಕಾನ್ ಕೆಎನ್ 2023ರ ಸಂಘಟನಾ ಕಾರ್ಯದರ್ಶಿ ಡಾ.ರಾಘವೇಂದ್ರ ರಾವ್ ಮಾತನಾಡಿ, “ಸಮ್ಮೇಳನಕ್ಕೆ ಸುಮಾರು 600 ಪ್ರತಿನಿಧಿಗಳು ನೋಂದಾಯಿಸಿಕೊಂಡಿದ್ದಾರೆ; ಸ್ನಾತಕೋತ್ತರ ಪದವಿ ಪಡೆಯುತ್ತಿರುವ ವೈದ್ಯರು ಪ್ರಬಂಧಗಳನ್ನು ಮಂಡಿಸುತ್ತಿದ್ದಾರೆ (ಸುಮಾರು 500 ಪ್ರಬಂಧಗಳು ಮಂಡನೆಯಾಗಲಿದೆ). 5 ಸಭಾಂಗಣಗಳಲ್ಲಿ ಸಮ್ಮೇಳನ ನಡೆಯಲಿದೆ. ಕರ್ನಾಟಕ ವೈದ್ಯಕೀಯ ಮಂಡಳಿಯಿಂದ ಈ ಸಮ್ಮೇಳನವು ಅಂಗೀಕಾರಗೊಂಡಿದೆ ಮತ್ತು ಸಮ್ಮೇಳನದಲ್ಲಿ ಭಾಗವಹಿಸುವ ವೈದ್ಯರಿಗೆ 5 ಕ್ರೆಡಿಟ್ ಅವರ್‌ಗಳನ್ನು ನೀಡಲಿದೆ . ಸ್ನಾತಕೋತ್ತರ ಮತ್ತು ಪದವಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ನಡೆಯಲಿದೆ. ಇದರೊಂದಿಗೆ ಜೀವಮಾನದ ಸಾಧನೆಯ ಪ್ರಶಸ್ತಿ, ಅತ್ಯುತ್ತಮ ಸಮುದಾಯ ಸೇವೆ, ಯುವ ಚರ್ಮರೋಗ ವೈದ್ಯ ಪ್ರಶಸ್ತಿ ಮುಂತಾದ ಅನೇಕ ಪ್ರಶಸ್ತಿಗಳನ್ನು ವಿತರಿಸಲಾಗುವುದು. ಅಕ್ಟೋಬರ್ 28ರಂದು ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಐಎಡಿವಿಎಲ್ ಕರ್ನಾಟಕ ಶಾಖೆಯ ಅಧ್ಯಕ್ಷರು ಮತ್ತು ರಾಷ್ಟ್ರೀಯ ಅಧ್ಯಕ್ಷರು ಮತ್ತು ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ. ಶರತ್ ಕುಮಾರ್ ಭಾಗವಹಿಸಲಿದ್ದಾರೆ. ಅಕ್ಟೋಬರ್ 29 ರ ಬೆಳಿಗ್ಗೆ 6:30 ಕ್ಕೆ ಸೋರಿಯಾಸಿಸ್ ಕಾಯಿಲೆಯ ಜಾಗೃತಿ ಜಾಥಾ ಕೂಡ ನಡೆಯಲಿದೆ. ಇದು ಮಾಹೆ ಮಣಿಪಾಲದಿಂದ ಆರಂಭವಾಗಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮುಂಭಾಗ ಕೊನೆಗೊಳ್ಳಲಿದೆ ಎಂದು ಹೇಳಿದರು. ಸಂಘಟನಾ ಸಹ ಅಧ್ಯಕ್ಷರುಗಳಾದ ಡಾ. ಲೋಕೇಶ್ ರಾವ್ ಮತ್ತು ಡಾ. ಶ್ರೀಪತಿ ಎಚ್., ಜಂಟಿ ಸಂಘಟನಾ ಕಾರ್ಯದರ್ಶಿ ಡಾ. ಸನತ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೊಂಬೆಳಕು ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಸಾಲಿಗ್ರಾಮ ಪ.ಪಂ.ಗೆ ನಾಲ್ಕು ಬಹುಮಾನ

ಉಡುಪಿ, ಫೆ.25: ಮಂಗಳೂರಿನ ಅಡ್ಯಾರು ಸಹ್ಯಾದ್ರಿ ಕ್ರೀಡಾಂಗಣದಲ್ಲಿ ನಡೆದ ಪಂಚಾಯತ್ ರಾಜ್...

ಆಸ್ತಿ ತೆರಿಗೆ ಪಾವತಿಗೆ ಸೂಚನೆ

ಉಡುಪಿ, ಫೆ.25: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ / ನಿವೇಶನಗಳನ್ನು...

ವೈದ್ಯಾಧಿಕಾರಿ ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ಫೆ.25: ಆರೋಗ್ಯ ಇಲಾಖೆಯ ವತಿಯಿಂದ ಜಿಲ್ಲೆಯ ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ...

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಿಣ್ಣರು ಶ್ರೀಕೃಷ್ಣನ ಫ್ರೆಂಡ್ಸ್: ಪುತ್ತಿಗೆ ಶ್ರೀ

ಉಡುಪಿ, ಫೆ.25: ಶ್ರೀಕೃಷ್ಣನಿಗೆ ಮಕ್ಕಳು ಎಂದರೆ ಬಹಳ ಪ್ರೀತಿ.​ ಕೃಷ್ಣನು ತನ್ನ...
error: Content is protected !!