Wednesday, February 26, 2025
Wednesday, February 26, 2025

ಶಾಂತಿಯ ದೃಷ್ಟಿಕೋನದಿಂದ ಕಲೆಯನ್ನು ಮರು ವ್ಯಾಖ್ಯಾನಿಸುವುದು ಗಾಂಧಿ ವಿಚಾರಗಳ ಪ್ರಯತ್ನವಾಗಿದೆ: ಪ್ರೊ.ಪ್ರಿಯಾಂಕರ್ ಉಪಾಧ್ಯಾಯ

ಶಾಂತಿಯ ದೃಷ್ಟಿಕೋನದಿಂದ ಕಲೆಯನ್ನು ಮರು ವ್ಯಾಖ್ಯಾನಿಸುವುದು ಗಾಂಧಿ ವಿಚಾರಗಳ ಪ್ರಯತ್ನವಾಗಿದೆ: ಪ್ರೊ.ಪ್ರಿಯಾಂಕರ್ ಉಪಾಧ್ಯಾಯ

Date:

ಮಣಿಪಾಲ, ಆ. 20: ಮಾನವನ ಮನಸ್ಸೇ ಯುದ್ಧಗಳಿಗೆ ಮೂಲವಾಗಿದೆ. ಶಾಂತಿ, ಸೌಂದರ್ಯಶಾಸ್ತ್ರ ಮತ್ತು ಕಲೆಗಳು ಯುದ್ಧಕ್ಕಿಂತ ಶಾಂತಿಯ ಕಡೆಗೆ ಹೊರಳಿಕೊಳ್ಳುವ ಅಗತ್ಯವಿದೆ ಎಂದು ಯುನೆಸ್ಕೋ ಚೇರ್ ಫಾರ್ ಪೀಸ್ ಅಂಡ್ ಇಂಟರ್ ಕಲ್ಚರಲ್ ಅಂಡರ್ಸ್ಟ್ಯಾಂಡಿಂಗ್, ವಾರಾಣಸಿಯ ಪ್ರೊ. ಪ್ರಿಯಾಂಕರ್ ಉಪಾಧ್ಯಾಯ ಹೇಳಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ನ ಇಕಾಸೊಫಿ, ಎಸ್ಥೆಟಿಕ್ಸ್, ಪೀಸ್ ಮತ್ತು ಆರ್ಟ್ ಮೀಡಿಯಾದ ಹೊಸ ವಿದ್ಯಾರ್ಥಿಗಳಿಗೆ ನಡೆದ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರೊ.ಪ್ರಿಯಾಂಕರ್ ಉಪಾಧ್ಯಾಯ ಅವರು, ಇದು ಕಲೆಯನ್ನು ಶಾಂತಿ, ಪರಿಸರ ಮತ್ತು ಕಲಾ ಮಾಧ್ಯಮದೊಂದಿಗೆ ಬೆಸೆಯುವ ನವೀನ ಪ್ರಯತ್ನ ಮತ್ತು ಈ ಹೊತ್ತಲ್ಲಿ ಜಗತ್ತಿಗೆ ಇದರ ಅಗತ್ಯವಿದೆ ಎಂದು ಹೇಳಿದರು. ಹಿಂಸೆಯಿಂದ ಜರ್ಜರಿತವಾಗಿರುವ ಜಗತ್ತಿನಲ್ಲಿ ಶಾಂತಿಯ ದೃಷ್ಟಿಕೋನದಿಂದ ಕಲೆಯನ್ನು ಮರು ವ್ಯಾಖ್ಯಾನಿಸುವುದು ಗಾಂಧಿ ವಿಚಾರಗಳ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.

ಮಾಹೆಯ ಸಂಶೋಧನಾ ವಿಭಾಗದ ನಿರ್ದೇಶಕರಾದ ಪ್ರೊ.ಸತೀಶ್ ರಾವ್ ಮಾತನಾಡಿ, ಜಿಸಿಪಿಎಎಸ್ ನಲ್ಲಿರುವ ಅಂತರ್ ಶಿಸ್ತೀಯ ಅಧ್ಯಯನ ನಿಜವಾಗಿಯೂ ಹೊಸ ಜ್ಞಾನ ವ್ಯವಸ್ಥೆಯ ಸೃಷ್ಟಿಗೆ ಕಾರಣವಾಗುತ್ತದೆ. ಶಾಂತಿ ಮತ್ತು ಪರಿಸರ ಅಧ್ಯಯನ ಹಾಗೂ ಶಾಂತಿ ಮತ್ತು ಕಲೆಗಳು ಸಂಶೋಧನೆಯಲ್ಲಿ ನವೀನ ಕ್ಷೇತ್ರಗಳಾಗಿವೆ, ಇದನ್ನು ಜಿಸಿಪಿಎಎಸ್ ಮುನ್ನಡೆಸಬೇಕು ಎಂದರು. ಮತ್ತೋರ್ವ ಅತಿಥಿ ಏರ್ ಕಮೋಡೊರ್ ಹರೀಂದ್ರ ಕುಮಾರ್ ಧಿಮನ್ ಮಾತನಾಡಿ ಭಾರತದ ಶಾಂತಿ ಪಾಲನಾ ಪ್ರಯತ್ನಗಳನ್ನು ಮತ್ತು ಮಿಲಿಟರಿ ವಲಯಗಳಲ್ಲಿ ಶಾಂತಿಯ ಕಲ್ಪನೆಯನ್ನು ವಿವರಿಸಿದರು.

ಯೋಗ ಮತ್ತು ವಿವಿಧ ಕಲೆಗಳು ಮನಸ್ಸಿನ ಶಾಂತಿಗೆ ಹೇಗೆ ಕಾರಣವಾಗುತ್ತವೆ ಎಂಬುದನ್ನು ಮಾಹೆ ಯೋಗ ವಿಭಾಗದ ಮುಖ್ಯಸ್ಥೆ ಡಾ.ಅನ್ನಪೂರ್ಣ ವಿವರಿಸಿದರು. ರಾಜಕೀಯಶಾಸ್ತ್ರಜ್ಞ ಡಾ.ರಾಜಾರಾಂ ತೋಳ್ಪಾಡಿ ಸಂಘರ್ಷದಿಂದ ಕೂಡಿರುವ ಅಂತಾರಾಷ್ಟ್ರೀಯ ಸಂಬಂಧಗಳನ್ನು ಗಾಂಧಿಯ ದೃಷ್ಟಿಕೋನದಿಂದ ನೋಡುವ ಅಗತ್ಯವನ್ನು ಒತ್ತಿ ಹೇಳಿದರು. ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಅವರು ಕಳೆದ ನಾಲ್ಕು ವರ್ಷಗಳಲ್ಲಿ ಜಿಸಿಪಿಎಎಸ್ ನಲ್ಲಿ ಕಾರ್ಯಕ್ರಮಗಳು ಹೇಗೆ ವಿಕಾಸಗೊಂಡು ಐದನೇ ವರ್ಷಕ್ಕೆ ಕಾಲಿಟ್ಟಿದ್ದೇವೆ ಎಂಬುದನ್ನು ವಿವರಿಸಿದರು. ವಿದುಷಿ ಭ್ರಮರಿ ಶಿವಪ್ರಕಾಶ್ ಸ್ವಾಗತ ಗೀತೆ ಹಾಡಿದರು. ಅಪೂರ್ವ ಸ್ವಾಗತ ನೃತ್ಯ ಪ್ರದರ್ಶಿಸಿದರು. ಅಪರ್ಣಾ ಪರಮೇಶ್ವರನ್ ನಿರೂಪಿಸಿ, ತನಿಷ್ಕಾ ಕೋಟ್ಯಾನ್ ವಂದಿಸಿದರು. ವಿವಿಧ ಕಾರ್ಯಕ್ರಮಗಳ ಮೂಲಕ ನೂತನ ವಿದ್ಯಾರ್ಥಿಗಳನ್ನು ವಿಭಾಗಕ್ಕೆ ಸ್ವಾಗತಿಸಲಾಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೊಂಬೆಳಕು ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಸಾಲಿಗ್ರಾಮ ಪ.ಪಂ.ಗೆ ನಾಲ್ಕು ಬಹುಮಾನ

ಉಡುಪಿ, ಫೆ.25: ಮಂಗಳೂರಿನ ಅಡ್ಯಾರು ಸಹ್ಯಾದ್ರಿ ಕ್ರೀಡಾಂಗಣದಲ್ಲಿ ನಡೆದ ಪಂಚಾಯತ್ ರಾಜ್...

ಆಸ್ತಿ ತೆರಿಗೆ ಪಾವತಿಗೆ ಸೂಚನೆ

ಉಡುಪಿ, ಫೆ.25: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ / ನಿವೇಶನಗಳನ್ನು...

ವೈದ್ಯಾಧಿಕಾರಿ ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ಫೆ.25: ಆರೋಗ್ಯ ಇಲಾಖೆಯ ವತಿಯಿಂದ ಜಿಲ್ಲೆಯ ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ...

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಿಣ್ಣರು ಶ್ರೀಕೃಷ್ಣನ ಫ್ರೆಂಡ್ಸ್: ಪುತ್ತಿಗೆ ಶ್ರೀ

ಉಡುಪಿ, ಫೆ.25: ಶ್ರೀಕೃಷ್ಣನಿಗೆ ಮಕ್ಕಳು ಎಂದರೆ ಬಹಳ ಪ್ರೀತಿ.​ ಕೃಷ್ಣನು ತನ್ನ...
error: Content is protected !!