Wednesday, February 26, 2025
Wednesday, February 26, 2025

ಶಂಕರನಾರಾಯಣ ಶಾಖಾ ಅಂಚೆ ಪಾಲಕರಿಗೆ ಬೀಳ್ಕೊಡುಗೆ

ಶಂಕರನಾರಾಯಣ ಶಾಖಾ ಅಂಚೆ ಪಾಲಕರಿಗೆ ಬೀಳ್ಕೊಡುಗೆ

Date:

ಸಿದ್ಧಾಪುರ, ಆ.7: ಭಾರತೀಯ ಅಂಚೆ ಇಲಾಖೆಯ ಅಮಾಸೆಬೈಲು ಶಾಖಾ ಅಂಚೆ ಕಛೇರಿಯಲ್ಲಿ 26 ವರ್ಷಗಳ ಕಾಲ ಶಾಖಾ ಅಂಚೆ ಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಹರಿಕೃಷ್ಣ ಉಳ್ಳೂರು ಇವರನ್ನು ಶಂಕರನಾರಾಯಣ ಉಪ ಅಂಚೆ ಕಛೇರಿಯಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. ಕುಂದಾಪುರ ದಕ್ಷಿಣ ವಿಭಾಗದ ಅಂಚೆ ನಿರೀಕ್ಷಕರಾದ ರಾಮಚಂದ್ರ ಅಧ್ಯಕ್ಷತೆ ವಹಿಸಿ ನಿವೃತ್ತರಿಗೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಚ್ಚಟ್ಟು ಶಾಖಾ ಅಂಚೆ ಕಛೇರಿಯಿಂದ ವರ್ಗಾವಣೆಗೊಂಡಿರುವ ಶುಭವತಿ ಹಾಗೂ ರಟ್ಟಾಡಿ ಅಂಚೆ ಕಛೇರಿಯಿಂದ ವರ್ಗಾವಣೆಗೊಂಡಿರುವ ಪ್ರವೀಣ ಹೆಗ್ಡೆ ಇವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಶಂಕರನಾರಾಯಣ ಅಂಚೆ ಕಛೇರಿ ಸಿಬ್ಬಂದಿ ಹಾಗೂ ಶಾಖಾ ಅಂಚೆ ಕಛೇರಿಯ ಸಿಬ್ಬಂದಿಯವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಂಕರನಾರಾಯಣ ಉಪ ಅಂಚೆ ಕಛೇರಿಯ ಅಂಚೆ ಪಾಲಕಿ ಚೇತನಾ ನಿರೂಪಿಸಿದರು. ಗಣಪತಿ ಕಾಮತ್ ಸ್ವಾಗತಿಸಿ, ರಾಮ ಹಾಂಡ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೊಂಬೆಳಕು ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಸಾಲಿಗ್ರಾಮ ಪ.ಪಂ.ಗೆ ನಾಲ್ಕು ಬಹುಮಾನ

ಉಡುಪಿ, ಫೆ.25: ಮಂಗಳೂರಿನ ಅಡ್ಯಾರು ಸಹ್ಯಾದ್ರಿ ಕ್ರೀಡಾಂಗಣದಲ್ಲಿ ನಡೆದ ಪಂಚಾಯತ್ ರಾಜ್...

ಆಸ್ತಿ ತೆರಿಗೆ ಪಾವತಿಗೆ ಸೂಚನೆ

ಉಡುಪಿ, ಫೆ.25: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ / ನಿವೇಶನಗಳನ್ನು...

ವೈದ್ಯಾಧಿಕಾರಿ ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ಫೆ.25: ಆರೋಗ್ಯ ಇಲಾಖೆಯ ವತಿಯಿಂದ ಜಿಲ್ಲೆಯ ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ...

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಿಣ್ಣರು ಶ್ರೀಕೃಷ್ಣನ ಫ್ರೆಂಡ್ಸ್: ಪುತ್ತಿಗೆ ಶ್ರೀ

ಉಡುಪಿ, ಫೆ.25: ಶ್ರೀಕೃಷ್ಣನಿಗೆ ಮಕ್ಕಳು ಎಂದರೆ ಬಹಳ ಪ್ರೀತಿ.​ ಕೃಷ್ಣನು ತನ್ನ...
error: Content is protected !!