Tuesday, February 25, 2025
Tuesday, February 25, 2025

ನಲಿಕಲಿ ಕಾರ್ಡು ಜೋಡಿಸುವ ಕಪಾಟು ಕೊಡುಗೆ

ನಲಿಕಲಿ ಕಾರ್ಡು ಜೋಡಿಸುವ ಕಪಾಟು ಕೊಡುಗೆ

Date:

ಬ್ರಹ್ಮಾವರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಾಯ್ಬ್ರಕಟ್ಟೆ ಇಲ್ಲಿ ಇಂದು ರೋಟರಿ ಕ್ಲಬ್ ಸಾಯಿಬ್ರಕಟ್ಟೆ ವತಿಯಿಂದ ನಲಿಕಲಿ ಕಾರ್ಡು ಜೋಡಣೆ ಕಪಾಟು ಹಸ್ತಾಂತರ ಕಾರ್ಯಕ್ರಮ ನಡೆಯಿತು. ರೋಟರಿ ಕ್ಲಬ್ ಅಧ್ಯಕ್ಷ ಪ್ರಸಾದ ಭಟ್ ಅಧ್ಯಕ್ಷತೆ ವಹಿಸಿದ್ದರು.

ಶಾಲಾ ಹಳೆ ವಿದ್ಯಾರ್ಥಿ ಅಣ್ಣಯ್ಯ ದಾಸ್ ತಮ್ಮ ವೈವಾಹಿಕ‌ ಜೀವನದ 25ನೇ ವರ್ಷದ ಸವಿನೆನಪಿಗಾಗಿ ಕಪಾಟು ಕೊಡುಗೆಯ ಪ್ರಾಯೋಜಕತ್ವವನ್ನು‌ ವಹಿಸಿದ್ದರು. ಶಾಲಾಭಿಮಾನಿಯವರಾದ ಪ್ರಸಾದ ಭಟ್ ಹಾಗೂ ಕೊಡುಗೆ ಪ್ರಾಯೋಜಕರಾದ ಅಣ್ಣಯ್ಯ ದಾಸ್ ಇವರನ್ನು ಶಾಲೆಯ ವತಿಯಿಂದ ಗೌರವಿಸಲಾಯಿತು.

ಅಕ್ಷರ ಜೋಳಿಗೆ ವಿನೂತನ ಕಾರ್ಯಕಮದಡಿಯಲ್ಲಿ ಶಾಲಾ ಗ್ರಂಥಾಲಯಕ್ಕೆ ರೋಟರಿ‌ಕ್ಲಬ್ ಸಾಯ್ಬ್ರಕಟ್ಟೆ ಇವರಿಂದ ವಾಚನಾಲಯ ಪುಸ್ತಕ ಕೊಡುಗೆ ನೀಡುವುದಾಗಿ ತಿಳಿಸಿದರು

ಮುಖ್ಯ ಅತಿಥಿಗಳಾಗಿ ರೋಟರಿ ಮಾಜಿ ಸಹಾಯಕ ಗವರ್ನರ್ ಮಹೇಶ್ ಕುಮಾರ್, ವಲಯ ಸೇನಾನಿ ವಿಜಯ ಕುಮಾರ್ ಶೆಟ್ಟಿ, ನೀಲಕಂಠ ರಾವ್, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಅಶೋಕ ಪ್ರಭು, ಕಾರ್ಯದರ್ಶಿ ರವೀಂದ್ರನಾಥ ಕಿಣಿ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಪುರುಷೋತ್ತಮ ದೇವಾಡಿಗ, ಜಗದೀಶ ಹೆಗ್ಡೆ, ರಾಮ್ ಪ್ರಕಾಶ್, ವಿಜಯ ಕುಮಾರ್ ಶೆಟ್ಟಿ ಕಾಜ್ರಳ್ಳಿ, ಗಣೇಶ್, ಮುಖ್ಯ ಶಿಕ್ಷಕರಾದ ಸತೀಶ್ಚಂದ್ರ, ಎಸ್ ಡಿ ಎಮ್ ಸಿ ಸದಸ್ಯರು, ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...

ಒಳಕಾಡು ಮಜಲು ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಉಡುಪಿ, ಫೆ.24: ಉಡುಪಿ ನಗರಸಭೆಯ ಒಳಕಾಡು ವಾರ್ಡಿನ ರೂ. 30 ಲಕ್ಷ...

ಪಂಚವರ್ಣ ಸ್ವಚ್ಛತಾ ಕಾರ್ಯ

ಕೋಟ, ಫೆ.24: ಕೋಟದ ಹರ್ತಟ್ಟು ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದ ವಾರ್ಷಿಕ...
error: Content is protected !!