Tuesday, February 25, 2025
Tuesday, February 25, 2025

ವಿಜಯ ಆಪ್ತ ಸಮಾಲೋಚನಾ ಕೇಂದ್ರದ ಉದ್ಘಾಟನೆ

ವಿಜಯ ಆಪ್ತ ಸಮಾಲೋಚನಾ ಕೇಂದ್ರದ ಉದ್ಘಾಟನೆ

Date:

ಉಡುಪಿ: ಪೇಜಾವರ ಮಠದ ಅಧೀನದಲ್ಲಿರುವ ಕುಕ್ಕಿಕಟ್ಟೆಯ ಶ್ರೀಕೃಷ್ಣ ಬಾಲನಿಕೇತನ ಉಚಿತ ವಿದ್ಯಾರ್ಥಿನಿಲಯದಲ್ಲಿ ವಿಜಯ ಗಣಪತಿ ನಾಯಕ್ ರವರ ಸನಿನೆನಪಿಗಾಗಿ ವಿಜಯ ಆಪ್ತ ಸಮಾಲೋಚನಾ ಕೇಂದ್ರ ಸಂಸ್ಥೆಯ ಅಧ್ಯಕ್ಷರು ಹಾಗೂ ಪೇಜಾವರ ಮಠಾಧೀಶರಾದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದಂಗಳವರಿಂದ ಉದ್ಘಾಟನೆಗೊಂಡಿತು.

ತಮ್ಮ ಗುರುಗಳಾದ ಪರಮಪೂಜ್ಯ ವಿಶ್ವೇಶತೀರ್ಥ ಶ್ರೀ ಪಾದಂಗಳವರು ಸ್ಥಾಪಿಸಿದ ಈ ಸಂಸ್ಥೆ ಅನೇಕ ಮಕ್ಕಳ ಭವಿಷ್ಯಕ್ಕೆ ಸಹಕಾರಿಯಾಗಿದೆ. ಇದರ ಸಹಸಂಸ್ಥೆ ಚೈಲ್ಡ ಲೈನ್ ನ ಉದ್ಧೇಶಕ್ಕೆ ಪೂರಕವಾಗಿಈ “ವಿಜಯ ಆಪ್ತ ಸಮಾಲೋಚನಾ ಕೇಂದ್ರವು ಕಾರ್ಯನಿರ್ವಹಿಸಲೆಂದು ಶ್ರೀಪಾದರು ಆಶಿಸಿದರು.

ಕೊಠಡಿಯ ಪ್ರಾಯೋಜಕತ್ವವನ್ನು ನೀಡಿರುವ ಉದ್ಯಮಿಗಳಾದ ಗಣಪತಿ ಮರ್ತಪ್ಪ ನಾಯಕ್ ಹೊಸನಗರ ಇವರನ್ನು ಮಂತ್ರಾಕ್ಷತೆಯನ್ನು ನೀಡಿ ಹರಸಿದರು.

ಸಂಸ್ಥೆಯ ಆಡಳಿತ ಮಂಡಳಿಯ ಕಾರ್ಯದರ್ಶಿ ರಾಮಚಂದ್ರ ಉಪಾಧ್ಯಾಯ, ಸದಸ್ಯರಾದ ರಘುರಾಮ ಆಚಾರ್ಯ, ರಾಘವೇಂದ್ರ ರಾವ್, ಎಸ್. ವಿ. ಭಟ್, ಗುರುರಾಜ ಭಟ್, ಸುಬ್ರಹ್ಮಣ್ಯ ಕಾರಂತ, ಚೈಲ್ಡ್ ಲೈನ್ ಸಿಬ್ಬಂದಿಗಳು ಮತ್ತು ಮಕ್ಕಳು ಹಾಜರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...

ಒಳಕಾಡು ಮಜಲು ಕೆರೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ

ಉಡುಪಿ, ಫೆ.24: ಉಡುಪಿ ನಗರಸಭೆಯ ಒಳಕಾಡು ವಾರ್ಡಿನ ರೂ. 30 ಲಕ್ಷ...

ಪಂಚವರ್ಣ ಸ್ವಚ್ಛತಾ ಕಾರ್ಯ

ಕೋಟ, ಫೆ.24: ಕೋಟದ ಹರ್ತಟ್ಟು ಕಲ್ಲಟ್ಟು ಶ್ರೀ ಮಹಾಲಿಂಗೇಶ್ವರ ದೇಗುಲದ ವಾರ್ಷಿಕ...
error: Content is protected !!