Sunday, September 22, 2024
Sunday, September 22, 2024

ಇನ್ನಾ ಪ್ರೌಢಶಾಲೆಗೆ ಕೊಡುಗೆ; ಹುಟ್ಟೂರಿನ ಋಣ ತೀರಿಸುವ ಪ್ರಯತ್ನ: ಸುಜಯಾ ಶೆಟ್ಟಿ

ಇನ್ನಾ ಪ್ರೌಢಶಾಲೆಗೆ ಕೊಡುಗೆ; ಹುಟ್ಟೂರಿನ ಋಣ ತೀರಿಸುವ ಪ್ರಯತ್ನ: ಸುಜಯಾ ಶೆಟ್ಟಿ

Date:

ಕಾರ್ಕಳ: ಕಾರ್ಕಳ ತಾಲೂಕಿನ ಇನ್ನಾ ಗ್ರಾಮದ ಆಯುರ್ವೇದ ಭೂಷಣ ಎಂ. ವಿ. ಶಾಸ್ತ್ರಿ ಪ್ರೌಢಶಾಲೆಗೆ ಮೂಲತಃ ಇನ್ನಾ ಗ್ರಾಮದವರೇ ಆದ ಮತ್ತು ಈಗ ಮುಂಬೈಯಲ್ಲಿ ನೆಲೆಸಿರುವ ಸುಜಯಾ ಶೆಟ್ಟಿ ಅವರು ತಮ್ಮ ಸುಜಯ ಫೌಂಡೇಶನ್ ಮತ್ತು ರೋಟರಿ ಸಂಸ್ಥೆಯ ಪರವಾಗಿ 50,000 ರೂ.ಗಳ ಕೊಡುಗೆಯನ್ನು ನೀಡಿದರು.

ಶಾಲೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಈ ಕೊಡುಗೆಯನ್ನು ಚೆಕ್ ಮೂಲಕ ಅವರು ಶಾಲೆಯ ಮುಖ್ಯ ಶಿಕ್ಷಕರಾದ ಪ್ರಕಾಶ್ ರಾವ್ ಪಿ ಎನ್ ಅವರಿಗೆ ಹಸ್ತಾಂತರ ಮಾಡಿದರು. ತನ್ನ ಹುಟ್ಟೂರಾದ ಇನ್ನಾ ಗ್ರಾಮಕ್ಕೆ ಕೊಡುಗೆಯನ್ನು ನೀಡುವುದರ ಮೂಲಕ ಹುಟ್ಟೂರ ಋಣವನ್ನು ತೀರಿಸಲು ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.

ಹಾಗೆಯೇ ತನ್ನ ಅಕ್ಕನ ಹೆಸರಿನಲ್ಲಿ ಶಾಲೆಯ ಮಕ್ಕಳ ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆಗೆ ಇನ್ನೂ 22,500 ರೂ.ಗಳ ಕೊಡುಗೆಯನ್ನು ನೀಡುವುದಾಗಿ ಅವರು ಘೋಷಣೆ ಮಾಡಿದರು. ಹಾಗೆಯೇ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ಕಲಿಕೆಗೆ ನೆರವು ನೀಡುವ ಭರವಸೆ ಕೂಡ ಕೊಟ್ಟರು.

ಕೊಡುಗೆಯನ್ನು ಸ್ವೀಕಾರ ಮಾಡಿ ಮಾತಾಡಿದ ಮುಖ್ಯ ಶಿಕ್ಷಕ ಪ್ರಕಾಶ್ ರಾವ್ ಪಿ.ಎನ್ ಅವರು ಸುಜಯಾ ಅಂತಹ ದಾನಿಗಳು ಮುಂದೆ ಬಂದು ಶಾಲೆಗೆ ನೆರವಾಗಬೇಕು ಎಂದು ಹೇಳಿದರು.

ಇನ್ನಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕುಶ ಆರ್ ಮೂಲ್ಯ, ಇನ್ನಾ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗುರುದತ್, ಮೂಲ್ಕಿ ಕುಬೇವೂರು ನರೇಶ್ ಶೆಟ್ಟಿ ಅವರು ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಶಿಕ್ಷಕ ರಾಜೇಂದ್ರ ಭಟ್ ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಕನ್ನಡ ಅಧ್ಯಾಪಕರಾದ ಸುಧಾಕರ್ ಆಚಾರ್ಯ ಸ್ವಾಗತಿಸಿ, ವಿಜ್ಞಾನ ಶಿಕ್ಷಕರಾದ ಪೊನ್ನುತುರೈ ಧನ್ಯವಾದ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾದ ಕೋವಿಡ್ ಲಸಿಕೆ ಕೊಡುವ ಕಾರ್ಯಕ್ರಮವು ಕೂಡ ಜರಗಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರಾಜ್ಯದ ದೇವಾಲಯಗಳಲ್ಲಿ ಮೊದಲಿನಿಂದಲೂ ಪರಿಶುದ್ಧ ಪ್ರಸಾದ

ಬೆಂಗಳೂರು, ಸೆ. 21: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಪ್ರಸಾದ,...

ದೇವಾಲಯಗಳಲ್ಲಿ ನಂದಿನಿ ತುಪ್ಪ ಬಳಸಲು ಸೂಚನೆ

ಬೆಂಗಳೂರು, ಸೆ. 21: ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ...

ಗಿಡ ನೆಡುವ ಕಾರ್ಯಕ್ರಮ

ಉಡುಪಿ, ಸೆ.21: ಸ್ವಚತಾ ಹೀ ಅಂದೋಲನ ಪಾಕ್ಷಿಕ-2024 ಆಚರಣೆಯ ಅಂಗವಾಗಿ ನಮ್ಮ...

ವಿಶ್ವ ಶಾಂತಿಗಾಗಿ ಮಾನವೀಯತೆಯ ನಡಿಗೆ ಜಾಥಾ

ಉಡುಪಿ, ಸೆ.21: ಭಾರತೀಯ ರೆಡ್‌ಕ್ರಾಸ್ ರಾಜ್ಯ ಶಾಖೆ ಮತ್ತು ಉಡುಪಿ ಜಿಲ್ಲಾ...
error: Content is protected !!