Wednesday, February 26, 2025
Wednesday, February 26, 2025

ಪಕ್ಷಗಳಿಗೆ ಅಂಟಿಕೊಳ್ಳದ ಮತದಾರನೇ ಉತ್ತಮ ಸರ್ಕಾರದ ರೂವಾರಿ: ಪ್ರೊ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

ಪಕ್ಷಗಳಿಗೆ ಅಂಟಿಕೊಳ್ಳದ ಮತದಾರನೇ ಉತ್ತಮ ಸರ್ಕಾರದ ರೂವಾರಿ: ಪ್ರೊ ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ

Date:

ಕಾರ್ಕಳ: ಮತದಾನ ಮಾಡಿದ ಮತದಾರ ಮಾತ್ರ ಪರಿಪೂರ್ಣ ಪ್ರಜೆ ಅನ್ನಿಸಿಕೊಳ್ಳುತ್ತಾನೆ. ಸರ್ಕಾರದ ತಪ್ಪು ಸರಿಗಳನ್ನು ವಿಮರ್ಶಿಸುವ ನೈತಿಕ ಹಕ್ಕು ಅವನಿಗೆ ಮಾತ್ರ ಇದೆ. ಮತದಾನ ಮಾಡದೇ ಸರ್ಕಾರವನ್ನು ದೂರುವುದಾಗಲಿ, ಟೀಕಿಸುವುದಾಗಲಿ ಸರಿಯಾದ ಕ್ರಮವಲ್ಲ ಎಂದು ಅಂಕಣಕಾರ ರಾಜಕೀಯ ವಿಮರ್ಶಕ ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಹೇಳಿದರು. ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಮತದಾರರ ಅರಿವು ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ವಿಶೇಷ ಉಪನ್ಯಾಸ ನೀಡಿದರು

ಮತದಾನ ಮಾಡಿದವನಿಗೆ ಮಾತ್ರ ಸರ್ಕಾರದ ಸವಲತ್ತುಗಳು ಸಿಗುವ ನೀತಿ ರೂಪಿಸಬೇಕಾದ ಅಗತ್ಯವಿದೆ. ಮತದಾನ ಮಾಡುವುದರಲ್ಲಿ ನಗರ ಮತದಾರರಿಗ್ಗಿಂತ ಗ್ರಾಮೀಣ ಮತದಾರರೇ ಸಾಕಷ್ಟು ಮುಂದೆ ಇದ್ದಾರೆ. ಶ್ರೀಮಂತರಿಗಿಂತ ಬಡವರೇ ಮುಂದಿದ್ದಾರೆ. ವಿದ್ಯಾವಂತರಿಗ್ಗಿಂತ ಅವಿದ್ಯಾವಂತರೆ ಮುಂದೆ ಇದ್ದಾರೆ ಅನ್ನುವಾಗ ಈ ದೇಶದ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಜವಾಬ್ದಾರಿತನ ತೇೂರಿಸುತ್ತಿರುವವರು ಯಾರು ಅನ್ನುವುದನ್ನು ಮತ್ತೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

ಮುಂದಿನ ಚುನಾವಣೆಗಳಲ್ಲಿ ಈ ಮತದಾನದ ಪ್ರಮಾಣ ಕನಿಷ್ಠ ಪಕ್ಷ ಶೇ.80ರ ಗಡಿ ದಾಟಿಸುವ ಜವಾಬ್ದಾರಿ ನಮ್ಮ ಯುವ ಮತದಾರರ ಮೇಲಿದೆ. ಮತದಾನ ಮಾಡುವಾಗ ಅಭ್ಯರ್ಥಿಗಳ ಸಾಧನೆ, ಪ್ರಾಮಾಣಿಕತೆ, ಶಿಸ್ತು ಜನಹಿತ ಕಾಳಜಿ ಹೊಂದಿದ್ದವರನ್ನೆ ಚುನಾಯಿಸಬೇಕೇ ಹೊರತು ಭ್ರಷ್ಟರು, ಪುಂಡರು, ಅವಿವೇಕಿಗಳನ್ನು ಸಾರಸಗಟವಾಗಿ ತಿರಸ್ಕರಿಸಬೇಕಾದ ಹೊಣೆ ಯುವ ಮತದಾರರಿಗಿದೆ.

ಸಭಾಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಕೇೂಟ್ಯಾನ್ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಮಾಲಿನಿ ಜೈನ್, ವಿದ್ಯಾರ್ಥಿ ಪ್ರತಿನಿಧಿ ವಿಕಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಜೊತೆ ಪ್ರಶ್ನೇೂತ್ತರ ಕಾರ್ಯಕ್ರಮ ಜರುಗಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೊಂಬೆಳಕು ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಸಾಲಿಗ್ರಾಮ ಪ.ಪಂ.ಗೆ ನಾಲ್ಕು ಬಹುಮಾನ

ಉಡುಪಿ, ಫೆ.25: ಮಂಗಳೂರಿನ ಅಡ್ಯಾರು ಸಹ್ಯಾದ್ರಿ ಕ್ರೀಡಾಂಗಣದಲ್ಲಿ ನಡೆದ ಪಂಚಾಯತ್ ರಾಜ್...

ಆಸ್ತಿ ತೆರಿಗೆ ಪಾವತಿಗೆ ಸೂಚನೆ

ಉಡುಪಿ, ಫೆ.25: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ / ನಿವೇಶನಗಳನ್ನು...

ವೈದ್ಯಾಧಿಕಾರಿ ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ಫೆ.25: ಆರೋಗ್ಯ ಇಲಾಖೆಯ ವತಿಯಿಂದ ಜಿಲ್ಲೆಯ ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ...

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಿಣ್ಣರು ಶ್ರೀಕೃಷ್ಣನ ಫ್ರೆಂಡ್ಸ್: ಪುತ್ತಿಗೆ ಶ್ರೀ

ಉಡುಪಿ, ಫೆ.25: ಶ್ರೀಕೃಷ್ಣನಿಗೆ ಮಕ್ಕಳು ಎಂದರೆ ಬಹಳ ಪ್ರೀತಿ.​ ಕೃಷ್ಣನು ತನ್ನ...
error: Content is protected !!