Tuesday, February 25, 2025
Tuesday, February 25, 2025

ಕಾಗಾಲ: 15-16ನೇ ಶತಮಾನದ ಶಾಸನ ಪತ್ತೆ

ಕಾಗಾಲ: 15-16ನೇ ಶತಮಾನದ ಶಾಸನ ಪತ್ತೆ

Date:

ಕುಮಟಾ: ಕುಮಟಾ ತಾಲ್ಲೂಕಿನ ಬಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಗಾಲ ಗ್ರಾಮದ ಮಹಾದೇವಿ ಮಹಾದೇವ ಪಟಗಾರ್ ಇವರಿಗೆ ಸೇರಿದ ತೋಟದಲ್ಲಿ ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿರುವ ಶಾಸನವೊಂದು ಪತ್ತೆಯಾಗಿದ್ದು, 4 ಅಡಿ ಎತ್ತರ ಹಾಗೂ 2 ಅಡಿ ಅಗಲವನ್ನು ಹೊಂದಿರುವ ಈ ಶಾಸನವು, 33 ಸಾಲುಗಳನ್ನು ಹೊಂದಿದ್ದು, ಕನ್ನಡ ಮತ್ತು ತಿಗಳಾರಿ ಲಿಪಿಯಲ್ಲಿದೆ.

ಶಾಸನವನ್ನು ಅಧ್ಯಯನ ಮಾಡಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಾಡದ ಇತಿಹಾಸ ಸಹಾಯಕ ಪ್ರಾಧ್ಯಾಪಕ ಮತ್ತು ಸಂಶೋಧನಾರ್ಥಿಯಾದ ರಹಿಮಾನ್ ಸಾಬ್ ಎಲ್ ಇವರು ಇದೊಂದು ದಾನ ಶಾಸನವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುತ್ತಾರೆ.

ಶಾಸನದಲ್ಲಿ ಕಂಡುಬರುವ ಸಾಲುಗಳ ಮಾಹಿತಿಯ ಆಧಾರದ ಮೇಲೆ ಗಜನಿ ಪ್ರದೇಶ ಹಾಗೂ ಇಲ್ಲಿನ ಸುತ್ತಮುತ್ತಲಿನ ಪ್ರದೇಶಗಳ ಭೂಮಿಯ ಬೆಳೆಯನ್ನು ಮತ್ತು ಅಕ್ಕಿ ಮುಡಿಯನ್ನು ವಿಶ್ವೇಶ್ವರ ಶ್ರೀಪಾದಂಗಳಿಗೆ ಮತ್ತು ಬ್ರಾಹ್ಮಣರ ಭೋಜನಕ್ಕೆ ದಾನವಾಗಿ ನೀಡಿರುವುದು ಕಂಡುಬರುತ್ತದೆ.

ಶಾಸನದ ಮೇಲ್ಭಾಗ ತೃಟಿತಗೊಂಡಿರುವರಿಂದ ದಾನವನ್ನು ಯಾರು? ಯಾವ ಕಾಲದಲ್ಲಿ ನೀಡಿದರು ಎಂಬುದು ಸ್ಪಷ್ಟವಾಗಿ ತಿಳಿದು ಬರುವುದಿಲ್ಲ.

ಆದರೆ ಲಿಪಿಯ ಆಧಾರದ ಮೇಲೆ ಈ ದಾನ ಶಾಸನವು 15-16ನೇ ಶತಮಾನಕ್ಕೆ (ವಿಜಯನಗರೋತ್ತರ ಕಾಲ) ಸೇರಿರಬಹುದೆಂದು ಸಂಶೋಧನಾರ್ಥಿಯು ತಿಳಿಸಿರುತ್ತಾರೆ. ಶಾಸನದ ಕೊನೆಯಲ್ಲಿ ಶಾಪಾಶಯ ವಾಕ್ಯವನ್ನು ಕಾಣಬಹುದು.

ಶಾಸನದಲ್ಲಿ ಕನ್ನಡ ಲಿಪಿಯ ಜೊತೆಗೆ ಕೆಲವೊಂದು ತಿಗಳಾರಿ ಲಿಪಿಯನ್ನು ಹೋಲುವ ಅಕ್ಷರಗಳು ಕಂಡುಬರುವುದರಿಂದ ಈ ಶಾಸನವು ಅಧ್ಯಯನದ ದೃಷ್ಠಿಯಿಂದ ಮಹತ್ವದ್ದೆನಿಸುತ್ತದೆ.

ಶಾಸನವನ್ನು ಓದುವಲ್ಲಿ ಪ್ಲೀಚ್ ಇಂಡಿಯಾ ಫೌಂಡೇಶನ್ ಹೈದರಾಬಾದ್ ಇಲ್ಲಿನ ಸಹಾಯಕ ಸಂಶೋಧಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಸಹಕಾರ ನೀಡಿರುತ್ತಾರೆ. ಶಾಸನದ ಕ್ಷೇತ್ರಕಾರ್ಯ ಶೋಧನೆಯಲ್ಲಿ ಭಗೀರತ ಎಂ. ಗೌಡ ಹಾಗೂ ಭರತ್ ಪಟಗಾರ್ ಇವರು ಸಹಕಾರ ನೀಡಿರುತ್ತಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಕ್ಕೆಹಳ್ಳಿ: ಕಲಿಕಾ ಹಬ್ಬ

ಬ್ರಹ್ಮಾವರ, ಫೆ.25: ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ,...

ಅಧ್ಯಾತ್ಮ ವಿದ್ಯೆಯ ಅಧ್ಯಯನದಿಂದ ನಮ್ಮ ವಿಕಾಸ: ಪುತ್ತಿಗೆ ಶ್ರೀಪಾದರು

ಉಡುಪಿ, ಫೆ.25: ಲೌಕಿಕ ಶಿಕ್ಷಣದಿಂದ ವೃತ್ತಿಯ ಸಂಪಾದನೆಯಾಗುತ್ತದೆ. ಅಧ್ಯಾತ್ಮ ಶಿಕ್ಷಣದಿಂದ ಜೀವನ...

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...
error: Content is protected !!