Sunday, September 22, 2024
Sunday, September 22, 2024

ಕೋಟತಟ್ಟು ಪ್ರಕರಣ- ಅಮೃತೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ

ಕೋಟತಟ್ಟು ಪ್ರಕರಣ- ಅಮೃತೇಶ್ವರಿ ದೇಗುಲದಲ್ಲಿ ವಿಶೇಷ ಪೂಜೆ

Date:

ಕೋಟ: ಕೋಟತಟ್ಟು ಗ್ರಾಮದ ಕೊರಗ ಸಮುದಾಯದ ಮೇಲೆ ಪೋಲಿಸರು ಲಾಠಿ ಚಾರ್ಜ್ ನಡೆಸಿದ್ದಾರೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊರಗ ಸಮುದಾಯದ ಕುಟುಂಬಿಕರು ಕೋಟದ ಅಮೃತೇಶ್ವರಿ ದೇವಿಗೆ ಮೊರೆ ಇಟ್ಟ ಘಟನೆ ಶನಿವಾರ ನಡೆಯಿತು.

ಕೊರಗ ಸಮಾಜದ ಮುಖಂಡ ಗಣೇಶ್ ಬಾರ್ಕೂರು ಮಾತನಾಡಿ, ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದೇವಳದ ಹೊರಭಾಗದಲ್ಲಿ ಕುಟುಂಬ ಸಹಿತ ತೆಂಗಿನ ಕಾಯಿ ಒಡೆದು ತಮ್ಮ ನೋವಿಗೆ ಕಾರಣಿಕರ್ತರಾದ ಯಾರೇ ಇರಬಹುದು ಅಂತವರನ್ನು ತಾಯಿ ನೋಡಿಕೊಳ್ಳಲಿ.

ನಾವು ಅನ್ಯಾಯ ಮಾಡಿ ಬದುಕಿದವರಲ್ಲ. ನಮ್ಮ ಕಾರ್ಯಕ್ರಮ ವಸ್ತುನಿಷ್ಟೆಯಾಗಿ ನಡೆಯುವ ಸಂದರ್ಭದಲ್ಲಿ ನಮ್ಮ ಮೇಲೆ ಏಕಾಏಕಿ ಹಲ್ಲೆ ಮಾಡಿ ಇಡೀ ಕುಟುಂಬ ಭಯದಲ್ಲಿ ಬದುಕುವಂತೆ ಮಾಡಿದ್ದಾರೆ. ನಮ್ಮನ್ನು ಕಾಯುವ ದೇವರ ಮೊರೆ ಹೋಗಲು ಹಿರಿಯರು ಸೂಚಿಸಿದ್ದಾರೆ.

ಯಾರನ್ನಾದರೂ ಕಣ್ಣು ಕಟ್ಟಬಹುದು ಆದರೆ ದೇವಿಯ ಕಣ್ಣು ಕಟ್ಟಲು ಸಾಧ್ಯವಿಲ್ಲ. ಅಂತಯೇ ನೊಂದ ನಮ್ಮ ಸಮಯದಾಯಕ್ಕೆ ಆ ತಾಯಿ ನ್ಯಾಯ ಒದಗಿಸುತ್ತಾಳೆ ಎಂಬ ನಂಬಿಕೆ ಇಟ್ಟಿದ್ದೇವೆ. ಇಂದಿನಿಂದಲೇ ನೆಮ್ಮದಿಯ ಜೀವನ ಸಾಗಿಸಲು ತಾಯಿ ಅನುಗ್ರಹಿಸಿದ್ದಾಳೆ ಎಂದು ಹೇಳಿದರು.

ದೇವಳದ ಭೇಟಿಯ ನೇತೃತ್ವವನ್ನು ಸಾಮಾಜಿಕ ಕಾರ್ಯಕರ್ತ ಕೋಟ ದಿನೇಶ ಗಾಣಿಗ ವಹಿಸಿದರು. ಜೀವನ್ ಮಿತ್ರ ಆಂಬ್ಯುಲೆನ್ಸ್ ಮಾಲಿಕ ನಾಗರಾಜ್ ಪುತ್ರನ್, ನಾಗೇಂದ್ರ ಪುತ್ರನ್, ಕೃಷ್ಣ ಪುತ್ರನ್, ರಾಮ ತೋಳಾರ್, ಭರತ್ ಗಾಣಿಗ
ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರಾಜ್ಯದ ದೇವಾಲಯಗಳಲ್ಲಿ ಮೊದಲಿನಿಂದಲೂ ಪರಿಶುದ್ಧ ಪ್ರಸಾದ

ಬೆಂಗಳೂರು, ಸೆ. 21: ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಾಲಯಗಳಲ್ಲಿ ಪ್ರಸಾದ,...

ದೇವಾಲಯಗಳಲ್ಲಿ ನಂದಿನಿ ತುಪ್ಪ ಬಳಸಲು ಸೂಚನೆ

ಬೆಂಗಳೂರು, ಸೆ. 21: ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ದೇವಸ್ಥಾನಗಳಲ್ಲಿ...

ಗಿಡ ನೆಡುವ ಕಾರ್ಯಕ್ರಮ

ಉಡುಪಿ, ಸೆ.21: ಸ್ವಚತಾ ಹೀ ಅಂದೋಲನ ಪಾಕ್ಷಿಕ-2024 ಆಚರಣೆಯ ಅಂಗವಾಗಿ ನಮ್ಮ...

ವಿಶ್ವ ಶಾಂತಿಗಾಗಿ ಮಾನವೀಯತೆಯ ನಡಿಗೆ ಜಾಥಾ

ಉಡುಪಿ, ಸೆ.21: ಭಾರತೀಯ ರೆಡ್‌ಕ್ರಾಸ್ ರಾಜ್ಯ ಶಾಖೆ ಮತ್ತು ಉಡುಪಿ ಜಿಲ್ಲಾ...
error: Content is protected !!