Friday, September 20, 2024
Friday, September 20, 2024

ರಾಷ್ಟ್ರಭಕ್ತಿಯೊಂದಿಗೆ ಯಕ್ಷಗಾನದ ಪ್ರಾಥಮಿಕ ಶಿಕ್ಷಣದ ಅನಾವರಣವೇ ಹೂವಿನ ಕೋಲು: ಕಲ್ಕೂರ

ರಾಷ್ಟ್ರಭಕ್ತಿಯೊಂದಿಗೆ ಯಕ್ಷಗಾನದ ಪ್ರಾಥಮಿಕ ಶಿಕ್ಷಣದ ಅನಾವರಣವೇ ಹೂವಿನ ಕೋಲು: ಕಲ್ಕೂರ

Date:

ಮಂಗಳೂರು: ಸಾಂಪ್ರದಾಯಿಕ ಯಕ್ಷಗಾನದ ಆರಂಭಿಕ ಶಿಕ್ಷಣದ ಪರಿಪೂರ್ಣ ಜ್ಞಾನ ನೀಡುವ ಕಲೆಯೇ ಹೂವಿನ ಕೋಲು. ಖಾದಿ ವಸ್ತ್ರಧಾರಿಗಳಾಗಿ, ತಲೆಯ ಮೇಲೆ ಗಾಂಧಿ ಟೋಪಿ ಧರಿಸುವುದರೊಂದಿಗೆ ರಾಷ್ಟ್ರಾಭಿಮಾನವನ್ನು ಪ್ರತಿಬಿಂಬಿಸುವ ಎಳೆಯ ಮಕ್ಕಳು ಹೂವಿನಕೋಲು ಎನ್ನುವ ಧ್ವಜಸ್ತಂಭದೊಂದಿಗೆ, ಕೋಲಾಟದ ಹಿನ್ನಲೆಯನ್ನಿರಿಸಿಕೊಂಡು ಸಣ್ಣ ಸಣ್ಣ ಪುರಾಣ ಕಥೆಗಳನ್ನು ಭಾಗವತರೊಂದಿಗೆ ಯಕ್ಷಗಾನದ ಮೂಲಕ ಮನೆ ಮನೆಗಳಿಗೆ ತೆರಳಿ ಪ್ರಸ್ತುತಪಡಿಸುವ ಕ್ರಮ ಅತ್ಯಂತ ಸ್ತುತ್ಯರ್ಹವಾಗಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದರು.

ಕದ್ರಿ ಕಂಬಳದ ಮಂಜುಪ್ರಾಸಾದದ ವಿಶ್ವೇಶತೀರ್ಥ ವೇದಿಕೆಯಲ್ಲಿ ನಡೆದ ತೆಕ್ಕಟ್ಟೆ ಯಶಸ್ವಿ ಕಲಾವೃಂದ ಕೋಮೆ ತಂಡದಿಂದ ಸಾಂಪ್ರದಾಯಿಕ ಹೂವಿನಕೋಲು ಪ್ರದರ್ಶನಗೊಂಡಿತು. ಮಕ್ಕಳ ತಂಡದ ಗುರುಗಳು ಹಾಗೂ ಭಾಗವತರಾದ ದೇವದಾಸ ರಾವ್ ಕೂಡ್ಲಿ, ಮದ್ದಳೆ ವಾದಕ ಸ್ಕಂದ ಉರಾಳ, ಹಾಗೂ ತಂಡದ ನೇತೃತ್ವ ವಹಿಸಿದ ವೆಂಕಟೇಶ ವೈದ್ಯ ಮೊದಲಾದವರನ್ನು ಶಾಲು ಫಲವಸ್ತುವಿನೊಂದಿಗೆ ಗೌರವಿಸಿ ಕಲ್ಕೂರ ಮಾತನಾಡಿದರು.

ಜನಾರ್ದನ ಹಂದೆ ಸ್ವಾಗತಿಸಿದರು. ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಶುಭಾಶಂಸನೆಗೈದರು. ರಾಮಚಂದ್ರ ಭಟ್ ಕದ್ರಿಕಂಬ್ಳ, ಸುಧಾಕರ ರಾವ್ ಪೇಜಾವರ, ವಿನೋದ ಪಿ. ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...
error: Content is protected !!