Tuesday, February 25, 2025
Tuesday, February 25, 2025

ವ್ಯಕ್ತಿಗೆ ಸಿಗುವ ಆತ್ಮತೃಪ್ತಿಯೇ ನಿಜವಾದ ಯಶಸ್ಸು: ಚಕ್ರವರ್ತಿ ಸೂಲಿಬೆಲೆ

ವ್ಯಕ್ತಿಗೆ ಸಿಗುವ ಆತ್ಮತೃಪ್ತಿಯೇ ನಿಜವಾದ ಯಶಸ್ಸು: ಚಕ್ರವರ್ತಿ ಸೂಲಿಬೆಲೆ

Date:

ಮಂಗಳೂರು: ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ, ಕೆನರಾ ಹೈಸ್ಕೂಲ್ ಅಸೋಸಿಯೇಷನ್ ಆಯೋಜಿಸುತ್ತಿರುವ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ “ಗುರಿ ಮುಟ್ಟುವುದು ಅಸಾಧ್ಯವಲ್ಲ! ಪ್ರೇರಣಾ ಕಾರ್ಯಕ್ರಮ ಇಂದು ಕೆನರಾ ಪ್ರೌಢ ಶಾಲೆ ಹಾಗೂ ಕೆನರಾ ಹಿರಿಯ ಪ್ರಾಥಮಿಕ ಶಾಲೆ ಉರ್ವಾದ ಸಹಯೋಗದೊಂದಿಗೆ ನಡೆಯಿತು.

6 ರಿಂದ 10 ನೇ ತರಗತಿಯ ಸುಮಾರು 700ಮಂದಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ವಾಗ್ಮಿ ಚಕ್ರವರ್ತಿ ಸೂಲಿಬೆಲೆ, ಮನಸ್ಸನ್ನು ಹತೋಟಿಯಲ್ಲಿಡುವ ಕೆಲವು ಸರಳ ತಂತ್ರಗಳನ್ನು ಸೂಚಿಸಿದರು. ವ್ಯಕ್ತಿಗೆ ಸಿಗುವ ಆತ್ಮತೃಪ್ತಿಯೇ ನಿಜವಾದ ಯಶಸ್ಸು. ಜೀವನದಲ್ಲಿ ಪ್ರಯತ್ನ ಮುಖ್ಯ, ಗುರಿಮುಟ್ಟುವ ವರೆಗೆ ಶ್ರಮಿಸುತ್ತಿರಿ. ಸ್ಪಷ್ಟ ಗುರಿಯನ್ನು ವಿದ್ಯಾರ್ಥಿಗಳು ಹೊಂದಿದ್ದು, ಅದನ್ನು ಎಲ್ಲರೂ ಸಾಧಿಸುವಂತಾಗಲಿ ಎಂದು ಆಶಿಸಿದರು.

ಶಾಲಾ ಸಂಚಾಲಕರಾದ ಪಂಚಮಾಲ್ ಗೋಪಾಲಕೃಷ್ಣ ಶೆಣೈ, ಆಡಳಿತ ಮಂಡಳಿಯ ಸದಸ್ಯರಾದ ನರೇಶ್ ಶೆಣೈ ಹಾಗೂ ಆಡಳಿತ ಮಂಡಳಿಯ ಜನ ಸಂಪರ್ಕ ಅಧಿಕಾರಿ ಉಜ್ವಲಾ ಮಲ್ಯ ರವರು ಉಪಸ್ಥಿತರಿದ್ದರು. ಕೆನರಾ ಶಾಲೆ ಉರ್ವ ಇಲ್ಲಿಯ ಮುಖ್ಯೋಪಾಧ್ಯಾಯಿನಿಯರಾದ ನವಿತಾ ಪ್ರಕಾಶ್ ಹಾಗೂ ಲಲನಾ ಜೆ. ಶೆಣೈ ಉಪಸ್ಥಿತರಿದ್ದರು. ಸುಧಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ರೂಪಾ ಎಂ ವಂದಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಕ್ಕೆಹಳ್ಳಿ: ಕಲಿಕಾ ಹಬ್ಬ

ಬ್ರಹ್ಮಾವರ, ಫೆ.25: ಶಾಲಾ ಶಿಕ್ಷಣ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ,...

ಅಧ್ಯಾತ್ಮ ವಿದ್ಯೆಯ ಅಧ್ಯಯನದಿಂದ ನಮ್ಮ ವಿಕಾಸ: ಪುತ್ತಿಗೆ ಶ್ರೀಪಾದರು

ಉಡುಪಿ, ಫೆ.25: ಲೌಕಿಕ ಶಿಕ್ಷಣದಿಂದ ವೃತ್ತಿಯ ಸಂಪಾದನೆಯಾಗುತ್ತದೆ. ಅಧ್ಯಾತ್ಮ ಶಿಕ್ಷಣದಿಂದ ಜೀವನ...

ರೆಡ್ ಕ್ರಾಸ್ ಶಿಬಿರ

ಉಡುಪಿ, ಫೆ.24: ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನ ರೆಡ್ ಕ್ರಾಸ್...

ತುಳು ನಟ ನವೀನ್ ಡಿ ಪಡೀಲ್ ಅವರಿಗೆ ವಿಶ್ವಪ್ರಭಾ ಪ್ರಶಸ್ತಿ ಪ್ರದಾನ

ಉಡುಪಿ, ಫೆ.24: ಮಾನಸಿಕವಾಗಿ ದುಗುಡ-ಒತ್ತಡಕ್ಕೆ ಒಳಗಾದಾಗ ನಿವಾರಣೆಗಾಗಿ ನಾನಾ ರೀತಿಯ ಕ್ರಮ...
error: Content is protected !!