Monday, February 24, 2025
Monday, February 24, 2025

ಸಿಒಡಿಪಿ: ವಿಚಾರ ಸಂಕಿರಣ

ಸಿಒಡಿಪಿ: ವಿಚಾರ ಸಂಕಿರಣ

Date:

ಮಂಗಳೂರು, ನ.25: ಮಾನವ ಕಳ್ಳಸಾಗಣೆ ಮತ್ತು ಸೈಬರ್ ಅಪರಾಧ ಕುರಿತ ವಿಚಾರ ಸಂಕಿರಣ ಬಾಂಧವ್ಯ (ರಿ) ಸಹಯೋಗದೊಂದಿಗೆ ಸಿಒಡಿಪಿಯಲ್ಲಿ ಆಯೋಜಿಸಲಾಯಿತು. ಬಾಂಧವ್ಯ (ರಿ) ಅಧ್ಯಕ್ಷರಾದ ಫಾ| ಶಿಬಿ ದೇವಸ್ಸಿ ಸ್ವಾಗತಿಸಿದರು ಮತ್ತು ಮಾನವ ಕಳ್ಳ ಸಾಗಣೆ ಮತ್ತು ಸೈಬರ್ ಅಪರಾಧದ ಬಗ್ಗೆ ಸೆಮಿನಾರ್‌ನ್ನು ಆಯೋಜಿಸುವಲ್ಲಿ ದೂರದೃಷ್ಠಿಯ ಉಪಕ್ರಮ ಮತ್ತು ಮೆಚ್ಚುಗೆಯ ನಾಯಕತ್ವಕ್ಕಾಗಿ ಬಾಂಧವ್ಯ (ರಿ) ಕಾರ್ಯದರ್ಶಿ ಫಾ| ವಿನ್ಸೆಂಟ್ ಡಿ ಸೋಜರವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಸಂಪನ್ಮೂಲ ವ್ಯಕ್ತಿಗಳಾದ ಶುಕ್ರಾಜ್ ಕೊಟ್ಟಾರಿ, ಜಿಲ್ಲಾ ರಕ್ಷಣಾ ವಕೀಲರು; ಪ್ರೋ. ಸರಿಕ್ ಅಂಕಿತಾ, ಕ್ರಿಮಿನಾಲಜಿ ವಿಭಾಗದ ಮುಖ್ಯಸ್ಥರು – ರೋಶಿನಿಲಯ ಕಾಲೇಜು ಮಂಗಳೂರು ಮತ್ತು ಗೋಪಾಲ್ ಕೃಷ್ಣ, ಎಎಸ್‌ಐ ಐಎಸ್‌ಡಿ ಅವರು ಮಾನವ ಸಾಗಣೆ, ಸೈಬರ್ ಅಪರಾಧ ಮತ್ತು ಆನ್‌ಲೈನ್ ಸುರಕ್ಷತೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಬಾಂಧವ್ಯದ ಉಪಾಧ್ಯಕ್ಷೆಯಾದ ಸಿಸ್ಟರ್ ಲೀನಾ ಡಿ ಕೊಸ್ಟಾ ಕಾರ್ಯಕ್ರಮ ನಿರ್ವಹಿಸಿ ಪೂತ್ತೂರಿನ ಪಾತ್ರಾವೊ ಆಸ್ಪತ್ರೆಯ ಸಿಬ್ಬಂಧಿಯಾದ ಸಿಸ್ಟರ್ ಜಾನೆಟ್ ಕುಟಿನ್ಹಾ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗೆಳೆಯರ ಬಳಗ ಕಾರ್ಕಡ- ವಾರ್ಷಿಕೋತ್ಸವ; ಸಾಧಕರಿಗೆ ಸನ್ಮಾನ

ಸಾಲಿಗ್ರಾಮ, ಫೆ.23: ಸಂಘಟನೆಗಳ ನಿರಂತರ ಸಾಮಾಜಿಕ ಕಾರ್ಯ ಅಸಾಮಾನ್ಯವಾದದ್ದು. ಈ ನಿಟ್ಟಿನಲ್ಲಿ...

ಭಜನಾ ಮಂಗಲೋತ್ಸವ

ಸಾಸ್ತಾನ, ಫೆ.23: ಶ್ರೀ ರಾಘವೇಂದ್ರ ಭಜನಾ ಮಂದಿರ ಪಾಂಡೇಶ್ವರ ಸಾಸ್ತಾನ ಇಲ್ಲಿ...

ಹೀಗೊಂದು ಜಾಹೀರಾತು

ನೀವು ತಿಂಗಳಿಗೆ ಲಕ್ಷಗಟ್ಟಲೆ ಸಂಪಾದಿಸಬೇಕಾದರೆ ಇದನ್ನು ಮಾಡಿರಿ, ಮಿಲಿನಿಯರ್ ಆಗಲು ಹೀಗೆ...
error: Content is protected !!