Saturday, September 21, 2024
Saturday, September 21, 2024

ಸಿಒಡಿಪಿ ಶಿಕ್ಷಣ ನಿಧಿ ಉದ್ಘಾಟನೆ

ಸಿಒಡಿಪಿ ಶಿಕ್ಷಣ ನಿಧಿ ಉದ್ಘಾಟನೆ

Date:

ಮಂಗಳೂರು, ಸೆ.18: ಸಿಒಡಿಪಿಯ ಮದರ್ ಥೆರೆಸಾ ಸಭಾಂಗಣದಲ್ಲಿ ಶ್ರೀ ಮೈಕಲ್ ಡಿ ಸೋಜ ಮತ್ತು ಕುಟುಂಬದ ಎಜುಕೇರ್ ಎಂಡೋಮೆಂಟ್ (ರಿವಾಲ್ವಿಂಗ್) ನಿಧಿಯನ್ನು ಉದ್ಘಾಟಿಸಲಾಯಿತು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ರೆ.ಡಾ. ಪೀಟರ್ ಪೌಲ್ ಸಲ್ಡಾನ್ಹ ಉದ್ಘಾಟಿಸಿದರು. ಶಿಕ್ಷಣ ಸಮಿತಿ ಸಲಹೆಗಾರ ರೆ.ಫಾ. ವಲೇರಿಯನ್ ಡಿ ಸೋಜ, ಮೈಕಲ್ ಡಿ ಸೋಜ ಅವರ ಧರ್ಮಪತ್ನಿ ಫ್ಲಾವಿಯ ಡಿ ಸೋಜ, ಮೈಕಲ್ ಡಿ ಸೋಜರವರ ಪುತ್ರಿ ನಿಶಾ ಡಿ ಸೋಜ. ಸಿಒಡಿಪಿ ನಿರ್ದೇಶಕರಾದ ರೆ.ಫಾ. ವಿನ್ಸೆಂಟ್ ಡಿ ಸೋಜ ಶಿಕ್ಷಣ ನಿಧಿಯ ಪ್ರತಿಷ್ಠಾಪಕ ಧಾನಿಗಳಾದ ಮೈಕಲ್ ಫ್ಲಾವಿಯ ಡಿಸೋಜ ಮತ್ತು ನಿಶಾ ಡಿಸೋಜ ರವರ ಪರಿಚಯ ನೀಡಿದರು.

ಸಿಒಡಿಪಿ ಸಂಸ್ಥೆಗೆ ಸಹಕಾರ ನೀಡುವ ರೆ.ಫಾ ವಲೇರಿಯನ್ ಡಿ ಸೋಜ, ಸ್ಟೀಫನ್ ಪಿಂಟೊ, ಒಸ್ವಲ್ಡ್ ರೊಡ್ರಿಗಸ್, ಹೆನ್ರಿ ಡಿ ಸೋಜ ಮತ್ತು ಲೈನಲ್ ಅರಾನ್ಹ ರವರನ್ನು ಬಿಷಪ್ ರವರು ಗೌರವಿಸಿದರು ರೆ.ಫಾ ಲೊರೆನ್ಸ್ ಕುಟಿನ್ಹಾರವರು ಸಹಕರಿಸಿದರು. ಈ ನಿಧಿಯಿಂದ ಮಂಗಳೂರು ಧರ್ಮಪ್ರಾಂತ್ಯದ 84 ವಿದ್ಯಾರ್ಥಿಗಳಿಗೆ ರೂ. 74,42,000/- ಬಡ್ಡಿ ರಹಿತ ಸಾಲವನ್ನು ಬ್ಯಾಂಕಿನ ಮುಖಾಂತರ ವಿತರಿಸಲಾಗುವುದು. ರಿಚರ್ಡ್ ಅಲ್ವಾರಿಸ್‌ ಕಾರ್ಯಕ್ರಮ ನಿರೂಪಿಸಿದರು ರೀನಾ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಿ.ಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೆಹಳ್ಳಿ: ಡಿಜಿಟಲ್ ಗ್ರಂಥಾಲಯ, ಹ್ಯಾಪಿ ಇಂಗ್ಲೀಷ್ ಕ್ಲಾಸ್ ಉದ್ಘಾಟನೆ; ದಾನಿಗಳಿಗೆ ಸನ್ಮಾನ

ಉಡುಪಿ, ಸೆ.20: ಪಿ.ಎಂ.ಶ್ರೀ ಯೋಜನೆಯಡಿಯಲ್ಲಿ ಮಂಜೂರಾದ ಡಿಜಿಟಲ್ ಗ್ರಂಥಾಲಯ ಹಾಗೂ ಪಿ.ಎಂ.ಶ್ರೀ....

ಸನಾತನ ಧರ್ಮವನ್ನು ಅಪವಿತ್ರಗೊಳಿಸುವುದನ್ನು ಕೊನೆಗೊಳಿಸಲು ನಾವೆಲ್ಲರೂ ಒಗ್ಗೂಡಬೇಕು: ಪವನ್ ಕಲ್ಯಾಣ್

ತಿರುಪತಿ, ಸೆ.20: ತಿರುಪತಿ ಬಾಲಾಜಿ ಪ್ರಸಾದದಲ್ಲಿ ಬೆರೆತಿರುವ ಪ್ರಾಣಿಗಳ ಕೊಬ್ಬನ್ನು (ಮೀನಿನ...

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ- ತುಂತುರು ನೀರಾವರಿ ಘಟಕ: ಅರ್ಜಿ ಆಹ್ವಾನ

ಉಡುಪಿ, ಸೆ.20: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ...

ಕಾಲರಾ ರೋಗ ಹರಡದಂತೆ ಎಚ್ಚರ ವಹಿಸಿ

ಉಡುಪಿ, ಸೆ.20: ಜಿಲ್ಲೆಯಲ್ಲಿ ಕಾಲರಾ ಪ್ರಕರಣ ಕಂಡುಬಂದಿದ್ದು, ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು...
error: Content is protected !!