Wednesday, February 26, 2025
Wednesday, February 26, 2025

ಪ್ರತಿಯೊಬ್ಬರಲ್ಲೂ ಅದಮ್ಯ ಶಕ್ತಿಯಿದೆ: ಡಾ. ಮೀನಾಕ್ಷಿ ರಾಮಚಂದ್ರ

ಪ್ರತಿಯೊಬ್ಬರಲ್ಲೂ ಅದಮ್ಯ ಶಕ್ತಿಯಿದೆ: ಡಾ. ಮೀನಾಕ್ಷಿ ರಾಮಚಂದ್ರ

Date:

ಮಂಗಳೂರು, ಅ. 10: ಪ್ರತಿಯೊಬ್ಬರಲ್ಲೂ ಅದಮ್ಯ ಶಕ್ತಿಯಿದೆ. ಅದರ ಅರಿವು ಇರಬೇಕಷ್ಟೆ. ನಮ್ಮೊಳಗಿನ ಶಕ್ತಿಯ ಅರಿವು ನಮಗಿದ್ದರೆ ಸಾಧನೆಗೆ ನೂರು ದಾರಿಗಳಿವೆ. ಕಾರಂತರಿಗೆ ಅವರ ಶಕ್ತಿಯ ಅರಿವಿತ್ತು. ಹಾಗಾಗಿ ಹತ್ತಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದರು. ಅವರು ಪ್ರತಿ ಘಟನೆಗಳನ್ನು ದರ್ಶಿಸಿ ಪರಾಮರ್ಶಿಸುತ್ತಿದ್ದರು. ಕಾರಂತರು ಕಾದಂಬರಿಕಾರರು, ಕಲಾವಿದರು, ನಿರ್ದೇಶಕರು, ಸಂಶೋಧಕರು, ವಿಮರ್ಶಕರು ಮತ್ತು ಜೀವನಪ್ರೇಮಿ ಎಂದು ಡಾ. ಮೀನಾಕ್ಷಿ ರಾಮಚಂದ್ರ ಹೇಳಿದರು. ಅವರು ಡಾ. ಪಿ. ದಯಾನಂದ ಪೈ, ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥಬೀದಿ ಮಂಗಳೂರು ಇಲ್ಲಿ ನಡೆದ ಡಾ. ಶಿವರಾಮ ಕಾರಂತರ ನೂರಿಪ್ಪತ್ತೆರಡನೆಯ ಹುಟ್ಟುಹಬ್ಬದ ಆಚರಣೆ ಸಂದರ್ಭದಲ್ಲಿ ಕಾರಂತರ ಬದುಕು -ಬರಹ ಕುರಿತು ಮಾತನಾಡುತ್ತಿದ್ದರು. ಕಾರಂತರದು ಎಂದಿಗೂ ಸೋಲೊಪ್ಪದ ವ್ಯಕ್ತಿತ್ವ. ವಿದೇಶಿಗರೂ ಯಕ್ಷಗಾನವನ್ನು ಒಪ್ಪಿಕೊಳ್ಳಬೇಕೆಂಬ ಛಲದಿಂದ ಯಕ್ಷಗಾನ ಬ್ಯಾಲೆಯನ್ನು ಆಯೋಜಿಸಿದ್ದರು. ಮಕ್ಕಳಿಗಾಗಿ ಮಕ್ಕಳ ಪ್ರಪಂಚವನ್ನು ಪರಿಚಯಿಸಿದರು. ಸೋಲು ಗೊತ್ತಿದ್ದೂ ಚುನಾವಣೆಗೆ ನಿಂತರು. ಸುತ್ತಲಿನ ಎಲ್ಲ ಕ್ರಿಯೆಗಳಿಗೆ ಸಂವೇದಿಸಬಲ್ಲ, ನಿಷ್ಟುರವಾಗಿ ಪ್ರತಿಕ್ರಿಯಿಸಬಲ್ಲ ವಿಮರ್ಶಕರು. ಹೊಸತಲೆಮಾರು ಅವರ ಬಹುಮುಖ ವ್ಯಕ್ತಿತ್ವವನ್ನು ಪರಿಚಯಿಸಿಕೊಂಡಾಗ ಮಾತ್ರ ಸಮಸ್ಯೆಗಳನ್ನು ಎದುರಿಸಬಲ್ಲ ಆತ್ಮವಿಶ್ವಾಸ ಗಳಿಸಬಲ್ಲರು ಎಂದು ಡಾ. ಮೀನಾಕ್ಷಿ ರಾಮಚಂದ್ರ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಡಾ. ಸುಧಾಕರನ್ ವಹಿಸಿದ್ದರು. ಪದವಿ ವಿಭಾಗದ ಸಂಯೋಜನಾಧಿಕಾರಿಗಳಾದ ಡಾ. ವಸಂತಿ, ಡಾ.ನಾಗವೇಣಿ ಎನ್., ಡಾ.ವಿನೋದಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜ್ಯೋತಿಪ್ರಿಯ ಸ್ವಾಗತಿಸಿ, ಸಾಹಿತ್ಯ ಸಂಘದ ಸಂಯೋಜಕರಾದ ನಿವೇದಿತಾ ಕ್ಯಾರೋಲಿನ ವಂದಿಸಿದರು. ವಿದ್ಯಾರ್ಥಿಗಳಾದ ಅಜಿತಶ್ರೀ ಪ್ರಾರ್ಥಿಸಿ, ಸುಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ಕಾರಂತರ ಜನುಮದಿನದ ಪ್ರಯುಕ್ತ ಕಾರಂತ ಕೃತಿಗಳ ಪ್ರದರ್ಶನವನ್ನು ಗ್ರಂಥಾಲಯದಲ್ಲಿ ಏರ್ಪಡಿಸಲಾಗಿತ್ತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೊಂಬೆಳಕು ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಸಾಲಿಗ್ರಾಮ ಪ.ಪಂ.ಗೆ ನಾಲ್ಕು ಬಹುಮಾನ

ಉಡುಪಿ, ಫೆ.25: ಮಂಗಳೂರಿನ ಅಡ್ಯಾರು ಸಹ್ಯಾದ್ರಿ ಕ್ರೀಡಾಂಗಣದಲ್ಲಿ ನಡೆದ ಪಂಚಾಯತ್ ರಾಜ್...

ಆಸ್ತಿ ತೆರಿಗೆ ಪಾವತಿಗೆ ಸೂಚನೆ

ಉಡುಪಿ, ಫೆ.25: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ / ನಿವೇಶನಗಳನ್ನು...

ವೈದ್ಯಾಧಿಕಾರಿ ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ಫೆ.25: ಆರೋಗ್ಯ ಇಲಾಖೆಯ ವತಿಯಿಂದ ಜಿಲ್ಲೆಯ ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ...

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಿಣ್ಣರು ಶ್ರೀಕೃಷ್ಣನ ಫ್ರೆಂಡ್ಸ್: ಪುತ್ತಿಗೆ ಶ್ರೀ

ಉಡುಪಿ, ಫೆ.25: ಶ್ರೀಕೃಷ್ಣನಿಗೆ ಮಕ್ಕಳು ಎಂದರೆ ಬಹಳ ಪ್ರೀತಿ.​ ಕೃಷ್ಣನು ತನ್ನ...
error: Content is protected !!