Friday, September 20, 2024
Friday, September 20, 2024

ಲಡಾಖ್ ನಲ್ಲಿ ಸಿಂಧೂ ನದಿ ಪೂಜೆ

ಲಡಾಖ್ ನಲ್ಲಿ ಸಿಂಧೂ ನದಿ ಪೂಜೆ

Date:

ಮಂಗಳೂರು: ಯೂಥ್ ಆಫ್ ಜಿ.ಎಸ್.ಬಿ ನೇತೃತ್ವದಲ್ಲಿ ಲಡಾಖ್ ಪ್ರಾಂತ್ಯದ ಸಪ್ತ ಪವಿತ್ರ ನದಿಗಳಲ್ಲಿ ಒಂದಾಗಿರುವ ಸಿಂಧೂ ನದಿಯ ಪೂಜೆ ನೆರವೇರಿಸಲಾಯಿತು. ಕೆಲ ಸಮಯ ಹಿಂದೆಯಷ್ಟೇ ಪ್ರಧಾನಿ ನರೇಂದ್ರ ಮೋದಿಯವರು ಲಡಾಖ್ ನ ಸಿಂಧೂ ನದಿ ಪೂಜೆ ನೆರವೇರಿಸಿದ್ದು ಈ ಮೂಲಕ ಲಡಾಖ್ ಗೆ ಆಗಮಿಸುವ ಪ್ರವಾಸಿಗರು ಕೂಡ ಸಿಂಧೂ ದರ್ಶನ ಮಾಡಬೇಕೆಂಬ ಉದ್ದೇಶ ಹೊಂದಿದ್ದರು. ಇದರಿಂದ ಪ್ರೇರಣೆಗೊಂಡ ಯೂಥ್ ಆಫ್ ಜಿ.ಎಸ್.ಬಿ ತಂಡ, ಅತ್ಯಂತ ಪ್ರಾಚೀನ ಹಾಗೂ 3180 ಕಿ ಮೀ ಹರಿಯುವ ಅತೀ ದೊಡ್ಡ ನದಿ ಸಿಂಧೂ ನದಿ ತಟದಲ್ಲಿ ಕಲ್ಪೋಕ್ತ ಪೂಜೆ ಹಮ್ಮಿಕೊಂಡಿತ್ತು. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಿಂಧೂ ತಟದಲ್ಲಿ ಪೂಜೆ ಮಾಡಿದ್ದು ಜಿ.ಎಸ್.ಬಿ ಸಮಾಜದ ಇತಿಹಾಸದಲ್ಲಿಯೇ ಪ್ರಥಮ ಎಂದು ಹೇಳಲಾಗುತ್ತಿದೆ.

160 ಪ್ರವಾಸಿಗರು ಕಾಶ್ಮೀರ, ಲಡಾಖ್ ಪ್ರವಾಸ ಕೈಗೊಂಡಿದ್ದು ಯೂಥ್ ಆಫ್ ಜಿ.ಎಸ್.ಬಿ ಪ್ರಮುಖರಾಗಿರುವ ಮಂಗಲ್ಪಾಡಿ ನರೇಶ್ ಶೆಣೈ ನೇತೃತ್ವ ವಹಿಸಿದ್ದಾರೆ. ಮಂಜೇಶ್ವರ ಮದನಂತೇಶ್ವರ ದೇವಳದ ಖಜಾಂಚಿ ಯೋಗೀಶ್ ಕಾಮತ್ ಪೂಜೆಯಲ್ಲಿ ಪ್ರಮುಖರಾಗಿ ಭಾಗವಹಿಸಿ ಮಂಗಳೂರು ಕಾತ್ಯಾಯನೀ ಮಠದ ವೇದಮೂರ್ತಿ ಗೋಪಾಲಕೃಷ್ಣ ಭಟ್ ಅವರು ಪೂಜೆ ನೆರವೇರಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...
error: Content is protected !!