Friday, September 20, 2024
Friday, September 20, 2024

ಪಣಿಯಾಡಿ ದೇವಳ- ವೈಭವದ ಹಸಿರು ಹೊರೆಕಾಣಿಕೆ

ಪಣಿಯಾಡಿ ದೇವಳ- ವೈಭವದ ಹಸಿರು ಹೊರೆಕಾಣಿಕೆ

Date:

ಉಡುಪಿ: ಉಡುಪಿ ಸಮೀಪದ ಇತಿಹಾಸ ಪ್ರಸಿದ್ಧ ಕ್ಷೇತ್ರವಾದ ಪಣಿಯಾಡಿ ಶ್ರೀ ಅನಂತಾಸನ ಶ್ರೀ ಲಕ್ಷ್ಮೀ ಅನಂತ ಪದ್ಮನಾಭ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪ್ರಯುಕ್ತ ಭಾನುವಾರ ಉಡುಪಿಯ ರಥಬೀದಿಯ ಶ್ರೀ ಚಂದ್ರಮೌಳೀಶ್ವರ ಹಾಗೂ ಶ್ರೀ ಅನಂತೇಶ್ವರ ಮತ್ತು ಶ್ರೀಕೃಷ್ಣ- ಮುಖ್ಯಪ್ರಾಣ ದೇವರ ಸನ್ನಿಧಾನದಲ್ಲಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ಊರಿನ ಭಕ್ತರ ಉಪಸ್ಥಿತಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಹಸಿರು ಹೊರೆಕಾಣಿಕೆಗೆ ವಿದ್ಯುಕ್ತ ಚಾಲನೆಯನ್ನು ನೀಡಲಾಯಿತು.

ರಥಬೀದಿಯಿಂದ ಹೊರಟ ಭವ್ಯ ಹೊರೆಕಾಣಿಕೆಯ ಮೆರವಣಿಗೆಯು ನಗರದ ಕಲ್ಸಂಕ ಮಾರ್ಗವಾಗಿ ದೇವಾಲಯಕ್ಕೆ ತಲುಪಿತು. ಈ ಸ೦ದರ್ಭದಲ್ಲಿ ಸಂಚಾಲಕರಾದ ಎಂ. ನಾಗರಾಜ್ ಆಚಾರ್ಯ, ಪುತ್ತಿಗೆ ಮಠದ ಮುರಳೀಧರ ಆಚಾರ್ಯ, ಪ್ರಸನ್ನ ಆಚಾರ್ಯ, ರತೀಶ್ ತಂತ್ರಿ, ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷರಾದ ಎಂ.ವಿಶ್ವನಾಥ ಭಟ್, ಎಸ್. ನಾರಾಯಣ ಮಡಿ, ಪ್ರಧಾನ ಕಾರ್ಯದರ್ಶಿಗಳಾದ ಬಿ.ವಿಜಯರಾಘವ ರಾವ್, ಉಪಾಧ್ಯಕ್ಷರಾದ ಪಳ್ಳಿ ಲಕ್ಷ್ಮೀನಾರಾಯಣ ಹೆಗ್ಡೆ, ತಲ್ಲೂರು ಚ೦ದ್ರಶೇಖರ ಶೆಟ್ಟಿ, ಕಾರ್ಯದರ್ಶಿಗಳಾದ ಪಣಿಯಾಡಿ ಶ್ರೀನಿವಾಸ ಆಚಾರ್ಯ, ಗಣ್ಯರಾದ ಡಾ. ರವಿರಾಜ ಆಚಾರ್ಯ, ಕೆ.ರಾಘವೇ೦ದ್ರ ಕಿಣಿ, ನಗರಸಭೆಯ ಸದಸ್ಯರಾದ ಗಿರೀಶ್ ಅಂಚನ್ ಮತ್ತಿತರರು ಉಪಸ್ಥಿತರಿದ್ದರು.

ಮೆರವಣಿಗೆಯಲ್ಲಿ ವೇದಘೋಷ, ಬಿರುದಾವಲಿ, ಚೆಂಡೆ, ಮಹಿಳಾ ಚೆಂಡೆ ಬಳಗ, ಭಜನಾ ತಂಡಗಳು, ಕೀಲು ಕುದುರೆ, ಬ್ಯಾಂಡ್, ಹುಲಿವೇಷ, ನಾಶಿಕ್ ಬ್ಯಾಂಡ್, ಹಾಗೂ ತರಕಾರಿ, ಅಕ್ಕಿ, ಬೆಲ್ಲ, ಧಾನ್ಯ ಹಾಗೂ ಬ್ರಹ್ಮಕಲಶೋತ್ಸವದ ಪ್ರಧಾನ ಚಿನ್ನಲೇಪಿತ ಬೆಳ್ಳಿಕಲಶ, ಹಾಗೂ ದೇವರಿಗೆ ನೂತನ ಪಲ್ಲಕಿ ಹಾಗೂ ದೇವಾಲಯದ ಹೆಬ್ಬಾಗಿಲಿನ ಕಂಚಿನ ದ್ವಾರ ಇನ್ನಿತರ ಧಾರ್ಮಿಕ ಕಾರ್ಯಕ್ರಮದ ವಸ್ತುಗಳು ಸೇರಿದಂತೆ ದಾನಿಗಳಿಂದ ಕೊಡಮಾಡಿದ, ಕುರ್ಚಿ, ಗ್ರೈಂಡರ್, ಟೇಬಲ್ ಗಳು ಸಹಿತ ವಿವಿಧ ವಸ್ತುಗಳು ಹೊರೆಕಾಣಿಕೆಯ ಮೆರವಣಿಗೆಯಲ್ಲಿ ಬಂದು ಶ್ರೀಪಾದರ ಸಮ್ಮುಖದಲ್ಲಿ ಶ್ರೀ ದೇವರಿಗೆ ಅರ್ಪಿಸಲಾಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...
error: Content is protected !!