Friday, September 20, 2024
Friday, September 20, 2024

ಎನ್. ಗುರುರಾಜ್ ರವರಿಗೆ ಪತ್ರಿಕಾ ದಿನದ ಗೌರವ

ಎನ್. ಗುರುರಾಜ್ ರವರಿಗೆ ಪತ್ರಿಕಾ ದಿನದ ಗೌರವ

Date:

ಉಡುಪಿ: ಪತ್ರಕರ್ತರ ವೇದಿಕೆ ಬೆಂಗಳೂರು ಉಡುಪಿ ಜಿಲ್ಲಾ ಘಟಕದ ವತಿಯಿಂದ ನಿವೃತ್ತ ಪತ್ರಕರ್ತ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಎನ್.ಗುರುರಾಜ್ ರವರಿಗೆ ಪತ್ರಿಕಾ ದಿನದ ಗೌರವ ಕಾರ್ಯಕ್ರಮ ಅವರ ಸ್ವಗ್ರಹದಲ್ಲಿ ಶುಕ್ರವಾರ ನಡೆಯಿತು.

ಕ.ಸಾ.ಪ ಮಾಜಿ ರಾಜ್ಯ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ಗುರುರಾಜ್ ರವರು ಹಿರಿಯ ಪತ್ರಕರ್ತರಾಗಿ, ಸಾಹಿತಿಯಾಗಿ ದೀರ್ಘಕಾಲ ಕೆಲಸ ಮಡಿ ಯಾವುದೇ ಹಮ್ಮ ಬಿಮ್ಮು ಇಲ್ಲದೆ ಸರಳ ಬದುಕಿನೊಂದಿಗೆ ಸಾವಿರಾರು ಪತ್ರಕರ್ತರನ್ನು ಬೆಳೆಸಿದ್ದಾರೆ. ಒಬ್ಬ ವ್ಯಕ್ತಿ ಶಕ್ತಿಯಾಗಿ ಕೆಲಸ ಮಾಡಿದ್ದಾರೆ ಎಂದರು.

ಗೌರವ ಸ್ಟೀಕರಿಸಿ ಮಾತನಾಡಿದ ಎನ್.ಗುರುರಾಜ್, ಪತ್ರಿಕೋದ್ಯಮ ಹಲವಾರು ಮಜಲುಗಳನ್ನು ದಾಟಿ ಬಂದಿದೆ. ಹಲವಾರು ಸುದ್ದಿ ಮಾಧ್ಯಮಗಳು ಬಂದರೂ ಅದರ ಪ್ರಸಿದ್ಧಿಗೆ ಕೊರತೆಯಾಗಿಲ್ಲ. ಯುವ ಪತ್ರಕರ್ತರು ಹಲವಾರು ಸಾಧನೆ ಮಾಡುತ್ತಿರುವುದು ಅಭಿನಂದನೀಯ ಎಂದರು.

ಹಿರಿಯ ಪತ್ರಕರ್ತ ವಸಂತರಾಜ್, ಸಮಾಜ ಸೇವಕ ವಿಶ್ವನಾಥ್ ಶೆಣ್ಯ್, ಕಲಾವಿದ ಪಿ.ಎನ್ ಆಚಾರ್ಯ, ನರಸಿಂಹ ಪಂಚನಬೆಟ್ಟು, ಸಂತೋಷ್ ಜೈನ್, ನರಸಿಂಹಮೂರ್ತಿ ಮುಂತಾದವರಿದ್ದರು.

ಕಾರ್ಯಕ್ರಮ ಸಂಘಟಕ ವೇದಿಕೆಯ ಜಿಲ್ಲಾಧ್ಯಕ್ಷ ಶೇಖರ ಅಜೆಕಾರು ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಪದ್ಮಾಕರ ಭಟ್ ಈದು ಪ್ರಸ್ತಾವಿಕವಾಗಿ ಮಾತನಾಡಿದರು. ದೇವರಾಯ ಪ್ರಭು ವಂದಿಸಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾಮಟ್ಟದ ಸಮೂಹಗಾನ ಸ್ಪರ್ಧೆ

ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ...

ರೆಡ್‌ಕ್ರಾಸ್ ಚಟುವಟಿಕೆಗಳ ಉದ್ಘಾಟನೆ

ಕುಂದಾಪುರ, ಸೆ.20: ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ...

ಜೋರ್ಡಾನ್ ಕುಷ್ಠರೋಗ ಮುಕ್ತ ರಾಷ್ಟ್ರ

ಯು.ಬಿ.ಎನ್.ಡಿ., ಸೆ.20: ವಿಶ್ವ ಆರೋಗ್ಯ ಸಂಸ್ಥೆ ಜೋರ್ಡಾನ್ ಅನ್ನು ಕುಷ್ಠರೋಗವನ್ನು ತೊಡೆದು...

ಸಾಗರ ಸುರಕ್ಷತೆಗಾಗಿ ಎಂಒಯುಗೆ ಭಾರತೀಯ ಕೋಸ್ಟ್ ಗಾರ್ಡ್ ಸಹಿ

ನವದೆಹಲಿ, ಸೆ.20: ಭಾರತೀಯ ಕೋಸ್ಟ್ ಗಾರ್ಡ್ ನವದೆಹಲಿಯಲ್ಲಿ ಸಾಗರ ಸಂರಕ್ಷಣೆಗಾಗಿ ದಿ...
error: Content is protected !!