Monday, February 24, 2025
Monday, February 24, 2025

ಗೋಪಾಲಪುರ: ವಾಹನ ಸವಾರರ ಸುರಕ್ಷತೆಗಾಗಿ ಎಚ್ಚರಿಕೆ ಫಲಕ ಅಳವಡಿಕೆ

ಗೋಪಾಲಪುರ: ವಾಹನ ಸವಾರರ ಸುರಕ್ಷತೆಗಾಗಿ ಎಚ್ಚರಿಕೆ ಫಲಕ ಅಳವಡಿಕೆ

Date:

ಉಡುಪಿ, ಜು.25: ಉಡುಪಿ ನಗರಸಭಾ ವ್ಯಾಪ್ತಿಯ ಗೋಪಾಲಪುರ 4ನೇ ಮುಖ್ಯರಸ್ತೆ ನಾಗಬನ ರಸ್ತೆ ಕೂಡುವ ಸ್ಥಳದಲ್ಲಿ ಕಳೆದ ಹಲವು ವರ್ಷಗಳಿಂದ ವಾಹನಗಳು ಪರಸ್ಪರ ಢಿಕ್ಕಿಯಾಗುವ ಘಟನೆಗಳು ಸಂಭವಿಸುತ್ತಿವೆ. ಸಂತೆಕಟ್ಟೆಯಿಂದ ರಾಷ್ಟ್ರೀಯ ಹೆದ್ದಾರಿ 66 ಬಳಸದೇ ನೇರವಾಗಿ ಮಲ್ಪೆ ರಸ್ತೆಗೆ ಸಂಪರ್ಕಿಸುವ ಈ ಒಳರಸ್ತೆಯನ್ನು ದಿನನಿತ್ಯ ನೂರಾರು ಮಂದಿ ಬಳಸುತ್ತಾರೆ. ಈ ರಸ್ತೆಯು ಗೋಪಾಲಪುರ 4ನೇ ರಸ್ತೆಯನ್ನು ಸಂಪರ್ಕಿಸುವ ಸ್ಥಳದಲ್ಲಿ ಎಡ ಮತ್ತು ಬಲ ಭಾಗಗಳಿಂದ ವಾಹನಗಳು ಬರುವ ಬಗ್ಗೆ ಗೋಪಾಲಪುರ ಮುಖ್ಯರಸ್ತೆಯ ನಿವಾಸಿಗಳಿಗೆ ಮುನ್ಸೂಚನೆ ಇರುವುದಿಲ್ಲ. ಕೆಲವು ಮಂದಿ ವೇಗದಲ್ಲಿ ವಾಹನ ಚಲಾಯಿಸಿ ಅವಘಡಕ್ಕೆ ತುತ್ತಾಗುವುದು ಮಾತ್ರವಲ್ಲದೇ, ಇಲ್ಲಿ ವಾಹನ ಸವಾರರು ಹಾರ್ನ್ ಹಾಕದೇ ಬರುವುದು ಮತ್ತೊಂದು ತಲೆಬಿಸಿಯಾಗಿದೆ.

ಇದನ್ನು ಮನಗಂಡ ಸ್ಥಳೀಯರು, ವಾಹನ ಸವಾರರಿಗೆ ಮುನ್ಸೂಚನೆ ನೀಡುವ, ಸುಗಮ ಸಂಚಾರದ ಸಂದೇಶವಿರುವ ಎಚ್ಚರಿಕೆಯ ಫಲಕವನ್ನು ‘ಉಡುಪಿಗೆ ಬನ್ನಿ’ ಮತ್ತು ‘ಗೋಪಾಲಪುರ ಸಿಟಿಜನ್ಸ್ ಫೋರಮ್’ ಸಹಕಾರದಲ್ಲಿ ಗುರುವಾರ ಅಳವಡಿಸಿದರು. ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಸದಸ್ಯ ಚಂದ್ರಕಾಂತ್ ನಾಯ್ಕ್, ನಂದಕಿಶೋರ್, ಉದ್ಯಮಿ ಸುರೇಶ್ ಶೆಟ್ಟಿ, ಮಂಜುನಾಥ್ ನಾಯ್ಕ್, ದಿವಾಕರ್ ಶೆಟ್ಟಿ, ಗಣೇಶ್ ಪ್ರಸಾದ್ ಜಿ. ನಾಯಕ್, ರಾಜೇಶ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾಪು ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವ- ಶ್ರೀಕೃಷ್ಣ ಮಠದ ವತಿಯಿಂದ ಹೊರೆಕಾಣಿಕೆ

ಉಡುಪಿ, ಫೆ.23: ಕಾಪು ಹೊಸ ಮಾರಿಗುಡಿ ದೇವಸ್ಥಾನದ ಕಾಪು ಅಮ್ಮನ ಪ್ರತಿಷ್ಠಾ...

ಕುಕ್ಕಿಕಟ್ಟೆ ಶ್ರೀಕೃಷ್ಣ ಬಾಲನಿಕೇತನಕ್ಕೆ ಲ್ಯಾಪ್ ಟಾಪ್ ಪ್ರೊಜೆಕ್ಟರ್ ಕೊಡುಗೆ

ಕುಕ್ಕಿಕಟ್ಟೆ, ಫೆ.23: ಮಣಿಪಾಲದ ಟಾಪ್ಮಿಅಲ್ಯುಮ್ನಿ ಅಸೋಸಿಯೇಷನ್ ನಿಂದ ಮಕ್ಕಳ ವಿದ್ಯಾಭ್ಯಾಸದ ಅನುಕೂಲಕ್ಕಾಗಿ...

ಕೊಹ್ಲಿ ಶತಕ; ಪಾಕಿಸ್ತಾನ ವಿರುದ್ಧ ಭಾರತ ದಿಗ್ವಿಜಯ

ಯು.ಬಿ.ಎನ್.ಡಿ., ಫೆ.23: ಭಾನುವಾರ ದುಬೈನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಹೈ...

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....
error: Content is protected !!