Wednesday, September 25, 2024
Wednesday, September 25, 2024

ಉಡುಪಿ: ವರುಣನ ಆರ್ಭಟ | ಕ್ವಾರಂಟೈನ್ ನಲ್ಲಿದ್ದ ಸೂರ್ಯ

ಉಡುಪಿ: ವರುಣನ ಆರ್ಭಟ | ಕ್ವಾರಂಟೈನ್ ನಲ್ಲಿದ್ದ ಸೂರ್ಯ

Date:

ಜಿಲ್ಲೆಯ ಜನರಿಗೆ ಭಾನುವಾರ ಸೂರ್ಯನ ದರ್ಶನವೇ ಆಗಲಿಲ್ಲ, ಆ ರೀತಿ ಇತ್ತು ವರುಣನ ಆರ್ಭಟ! ದಿನವಿಡೀ ಧೋ ಎಂದು ಪೂರ್ಣವಿರಾಮ ಹಾಕದೆ ಸುರಿಯುತ್ತಿದ್ದ ಮಳೆಯ ಕಾರಣ ಜಿಲ್ಲೆಯಲ್ಲಿ ಚಳಿಯ ವಾತಾವರಣ ನಿರ್ಮಾಣವಾಗಿದೆ.

ಉಡುಪಿ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಶನಿವಾರ ನಡುರಾತ್ರಿಯಿಂದ ಆರಂಭವಾದ ಮಳೆ, ಬಳಿಕ ವೇಗ ಪಡೆದು ಭಾನುವಾರ ಮಧ್ಯಾಹ್ನದವರೆಗೂ ಸುರಿಯಿತು.

ಪಶ್ಚಿಮ ಘಟ್ಟ ಹಾಗೂ ತಪ್ಪಲಿನ ಪ್ರದೇಶಗಳಾದ ಆಗುಂಬೆ, ಸೋಮೇಶ್ವರ, ಹೆಬ್ರಿ, ಕಾರ್ಕಳ ಇತರೆ ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ವರ್ಷಧಾರೆಯಾಗುತ್ತಿರುವ ಹಿನ್ನಲೆಯಲ್ಲಿ ಕರಾವಳಿಯ ಬಹುತೇಕ ನದಿಗಳು ಉಕ್ಕಿ ಹರಿಯುತ್ತಿವೆ.

ಇಂದು ರಾತ್ರಿ ಉಪಗ್ರಹ ತೆಗೆದ ಚಿತ್ರ

ಜನರ ವಾರಾಂತ್ಯದ ತಿರುಗಾಟಕ್ಕೆ ವರುಣ ಬ್ರೇಕ್ ಹಾಕಿದ್ದ ಕಾರಣ ನಗರದಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಪ್ರವಾಸಿ ಸ್ಥಳಗಳಲ್ಲಿ ಬೆರಳಣಿಕೆಯಷ್ಟು ಮಾತ್ರ ಪ್ರವಾಸಿಗರು ಇದ್ದದ್ದು ಕಂಡುಬಂತು. ಜಿಲ್ಲೆಯ ಧಾರ್ಮಿಕ ಕೇಂದ್ರಗಳಲ್ಲಿಯೂ ಭಕ್ತರ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು.

ಹವಾಮಾನ ಇಲಾಖೆ ಶನಿವಾರ ನೀಡಿದ ಮುನ್ಸೂಚನೆಯ ಪ್ರಕಾರ ರಾಜ್ಯದ ಕರಾವಳಿ ಜಿಲ್ಲೆಗಳ ಹಲವೆಡೆ ಜುಲಾಯಿ 22 ರವರೆಗೆ 115.6 ಮಿಮಿ-204.4 ಮಿಮಿ ನಷ್ಟು ಭಾರಿ ಮಳೆಯಾಗುವ ಸಾಧ್ಯತೆಯಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾನೂನು ಸಚಿವರನ್ನು ಭೇಟಿಯಾದ ಉಡುಪಿ ವಕೀಲರ ಸಂಘದ ನಿಯೋಗ

ಉಡುಪಿ, ಸೆ.24: ಉಡುಪಿ ವಕೀಲರ ಸಂಘದ ನಿಯೋಗವು ಕರ್ನಾಟಕ ರಾಜ್ಯದ ಕಾನೂನು...

ಕಾನೂನು ಹೋರಾಟದ ಬಗ್ಗೆ ತಜ್ಞರೊಂದಿಗೆ ಚರ್ಚೆ ಮಾಡಿ ತೀರ್ಮಾನ: ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಸೆ.24: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಎನ್‌ಎಸ್‌ಎಸ್ 218ರ ಹಾಗೂ ಪಿಸಿ...

ಕಾಪು: ನವದುರ್ಗಾ ಲೇಖನ ಯಜ್ಞದ ಸೇವಾ ಕಚೇರಿ ಉದ್ಘಾಟನೆ

ಕಾಪು, ಸೆ.24: ಜೀರ್ಣೋದ್ಧಾರಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ನಡೆಯಲಿರುವ...
error: Content is protected !!