Friday, September 20, 2024
Friday, September 20, 2024

ಸೇತುವೆಗಳಿಗೆ ತಂತಿಜಾಲದ ಬೇಲಿ ಅಳವಡಿಸಲು ಆಗ್ರಹ

ಸೇತುವೆಗಳಿಗೆ ತಂತಿಜಾಲದ ಬೇಲಿ ಅಳವಡಿಸಲು ಆಗ್ರಹ

Date:

ಉಡುಪಿ: ಉಡುಪಿ ಜಿಲ್ಲೆಯಿಂದ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೆಜಮಾಡಿಯಿಂದ ಬೈಂದೂರು ಶಿರೂರುವರೆಗೆ ಬರುವ ನದಿಗಳಿಗೆ ಕಟ್ಟಲಾಗಿರುವ ಹಲವಾರು ಸೇತುವೆಗಳಿವೆ. ಇಲ್ಲಿ ಕಸ ತ್ಯಾಜ್ಯ ಎಸೆಯಬಾರದು ಎನ್ನುವ ಸೂಚನೆ ಫಲಕಗಳನ್ನು ಅಲ್ಲಿಯ ಆಡಳಿತ ವ್ಯವಸ್ಥೆಗಳು ಅಳವಡಿಸಿದರೂ, ತಾಜ್ಯ ಎಸೆಯುವ ಕೃತ್ಯಗಳು ನಡೆಯುತ್ತಲೇ ಇರುತ್ತದೆ.

ಸಾರ್ವಜನಿಕರು ಮನೆಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯ, ಒಣ ತಾಜ್ಯಗಳನ್ನು ಚೀಲದಲ್ಲಿ ತಂದು ಎಸೆಯುತ್ತಿರುವುದು ಕಂಡು ಬರುತ್ತಿದೆ. ಸೇತುವೆ ಮೇಲಿನ ಸ್ಥಳದಲ್ಲಿ ಕಸ ತ್ಯಾಜ್ಯಗಳು ಚೆಲ್ಲಾ ಪಿಲ್ಲಿಯಾಗಿ ಬಿದ್ದಿರುತ್ತವೆ. ಮನೆಯಿಂದ ಕೆಲಸ ಕಾರ್ಯಗಳಿಗೆ ಬೈಕು ಕಾರಿನಲ್ಲಿ ತೆರಳುವ ಕೆಲವರಿಂದ ಬಹಳವಾಗಿ ತ್ಯಾಜ್ಯ ಎಸೆಯುವ ಕೃತ್ಯಗಳು ನಡೆಯುತ್ತಿರುತ್ತವೆ. ಇವರ ಕೃತ್ಯದಿಂದ ಜಲ ಮೂಲಗಳು ಮಾಲಿನ್ಯವುಗೊಳ್ಳುತ್ತಿದೆ. ಜಲಚರಗಳು ರಾಸಾಯನಿಕ, ವಿಷಹಾರ ಸೇವಿಸಬೇಕಾದ ಪರಿಸ್ಥಿತಿಯೂ ಎದುರಾಗಿದೆ. ಅಲ್ಲದೆ ಚುಚ್ಚು ಮದ್ದಿನ ಪರಿಕರಗಳು, ಕೋಳಿ ಅಂಗಡಿಯ ತ್ಯಾಜ್ಯಗಳನ್ನು ಎಸೆಯಲಾಗುತ್ತದೆ. ತಿನ್ನಲು ಬರುವ ಗಿಡುಗ ಬೀದಿನಾಯಿಗಳು ಅಪಘಾತಗೊಂಡು ಸಾವು ಕಾಣುತ್ತಿವೆ.

ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಅಥವ ಸಂಬಂಧಪಟ್ಟ ಇಲಾಖೆಗಳು, ಸೇತುವೆಗಳ ಎರಡು ದಿಕ್ಕಿನ ತಡೆಗೊಡೆಯ ಮೇಲೆ ತಂತಿಜಾಲದ ಬೇಲಿಯನ್ನು ಅಳವಡಿಸಿದರೆ, ನದಿ ಮಾಲಿನ್ಯವನ್ನು ತಡೆಯೊಡ್ಡಲು ಸಾಧ್ಯವಿದೆ. ಅಲ್ಲದೆ ನದಿಗಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಕೃತ್ಯಗಳು ನಡೆಯದಂತೆ ತಡೆಯೊಡ್ಡಲು ಸಹಕಾರವಾಗುತ್ತದೆ. ಈಗಾಗಲೇ ತಂತಿಬಲೆ ಬೇಲಿಯ ಅಳವಡಿಕೆ ಪ್ರಯೋಗ ಮಂಗಳೂರಿನಲ್ಲಿ ಯಶಸ್ವಿಯಾಗಿದೆ. ಹಾಗಾಗಿ ಸೇತುವೆಗಳಿಗೆ ತಂತಿಜಾಲದ ಬೇಲಿಯನ್ನು ಅಳವಡಿಸುವಂತೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪಿ.ಎಂಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕೆಹಳ್ಳಿ: ಡಿಜಿಟಲ್ ಗ್ರಂಥಾಲಯ, ಹ್ಯಾಪಿ ಇಂಗ್ಲೀಷ್ ಕ್ಲಾಸ್ ಉದ್ಘಾಟನೆ; ದಾನಿಗಳಿಗೆ ಸನ್ಮಾನ

ಉಡುಪಿ, ಸೆ.20: ಪಿ.ಎಂ.ಶ್ರೀ ಯೋಜನೆಯಡಿಯಲ್ಲಿ ಮಂಜೂರಾದ ಡಿಜಿಟಲ್ ಗ್ರಂಥಾಲಯ ಹಾಗೂ ಪಿ.ಎಂ.ಶ್ರೀ....

ಸನಾತನ ಧರ್ಮವನ್ನು ಅಪವಿತ್ರಗೊಳಿಸುವುದನ್ನು ಕೊನೆಗೊಳಿಸಲು ನಾವೆಲ್ಲರೂ ಒಗ್ಗೂಡಬೇಕು: ಪವನ್ ಕಲ್ಯಾಣ್

ತಿರುಪತಿ, ಸೆ.20: ತಿರುಪತಿ ಬಾಲಾಜಿ ಪ್ರಸಾದದಲ್ಲಿ ಬೆರೆತಿರುವ ಪ್ರಾಣಿಗಳ ಕೊಬ್ಬನ್ನು (ಮೀನಿನ...

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ- ತುಂತುರು ನೀರಾವರಿ ಘಟಕ: ಅರ್ಜಿ ಆಹ್ವಾನ

ಉಡುಪಿ, ಸೆ.20: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ...

ಕಾಲರಾ ರೋಗ ಹರಡದಂತೆ ಎಚ್ಚರ ವಹಿಸಿ

ಉಡುಪಿ, ಸೆ.20: ಜಿಲ್ಲೆಯಲ್ಲಿ ಕಾಲರಾ ಪ್ರಕರಣ ಕಂಡುಬಂದಿದ್ದು, ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕರು...
error: Content is protected !!