Friday, October 18, 2024
Friday, October 18, 2024

ಅರ್ಜುನ

ಅರ್ಜುನ

Date:

ಸರಕಾರ ಕೊಡುವ ಹಣವನೆಲ್ಲ ನುಣ್ಣಗೆ ಬೊಳಿಸಿದರು

ಮತ್ತೆ ಇಂಬು ಹೊಡೆದು ನನ್ನನ್ನು ಕೆಳಗೆ ಬಿಳಿಸಿದರು

ಕಾಡುಮೇಡುಗಳ ಮದ್ಯೆ ನಾನು ಸ್ವತಂತ್ರ್ಯನಾಗಿದ್ದೆ

ಇವರು ಮೊಸದಿ ತೋಡಿದ ಖೆಡ್ಡಾಕ್ಕೆ ತಿಳಿಯದೆ ಬಿದ್ದೆ

ಇವರು ನನ್ನ ಕರೆಯುವ ಹೆಸರು ಅರ್ಜುನ

ನನ್ನ ಭಾವಿಗೆ ದೂಡಿ ಆಳ ನೋಡುವ ಇವರು ದುರ್ಜನ.

 

ಮಣಭಾರದ ಸರಪಳಿಯಿಂದ ಬಿಗಿದು ನನ್ನ ನಿಲ್ಲಿಸಿದರು

ಆಹಾರವು ಕೊಡದೆ ಹೊರಗಡೆ ಬಿಡದೆ ದಿನವು ದಣಿಸಿದರು

ಕೆಳಲೇಬೇಕಾಯಿತು ನನ್ನ ಉಸಿರ ಉಳಿಸಿಕೊಳ್ಳಲು ಇವರ ಮಾತು

ನನ್ನೊಳಗಿನ ಸ್ವಾಭಿಮಾನದ ಸಿಟ್ಟು ಸೆಡುವುಗಳನೆಲ್ಲ ಬದಿಗಿರಿಸಿ ಸೋತು

ಇವರು ನನ್ನ ಕರೆಯುವ ಹೆಸರು ಅರ್ಜುನ

ನನ್ನ ಭಾವಿಗೆ ದೂಡಿ ಆಳ ನೋಡುವ ಇವರು ದುರ್ಜನ.

 

ಆನೆಯೆಂಬುದನ್ನೆ ಮರೆತು ಅವರೊಂದಿಗೆ ಹೇಳಿದ್ದು ಕೇಳಿಕೊಂಡು ಹೋದೆ

ಜನಸ್ನೇಹಿ ಆನೆ ಎನ್ನುತ್ತ ದಿನ ದಿನವು ಎರುತ್ತಲೆ ಹೊಯಿತು ನನ್ನ ಮರ್ಯಾದೆ

ಒಂದಷ್ಟು ವರುಷ ದಸರದ ಅಂಬಾರಿಯನ್ನು ಹೊರಸಿ ಮೆರಿಸಿದರು

ಮತ್ತೆ ವರುಷವಾಯಿತು ಅಂಬಾರಿ ಹೊರಬಾರದೆಂದು

ಅವರೆ ಕಾನೂನು ಬರೆಸಿದರು

ಈ ಮನುಷ್ಯರು ನನ್ನ ಕರೆಯುವ ಹೆಸರು ಅರ್ಜುನ

ನನ್ನ ಭಾವಿಗೆ ದೂಡಿ ಆಳ ನೋಡುವ ಇವರು ದುರ್ಜನ.

 

ಎಲ್ಲಿ ನಮ್ಮವರು ಊರಿಗೆ ನುಗ್ಗಿದರು ನನ್ನನ್ನೆ ಮುಂದೆ ನಿಲ್ಲಿಸಿ ಅವರನ್ನು ಹಿಮ್ಮೆಟ್ಟಿಸುತ್ತಿದ್ದರು

ನಾ ಒಲ್ಲೆ ಎಂದಾಗ ಅಂಕುಶದಿ ನನಗೆ ಬಿಸಿಮುಟ್ಟಿಸುತ್ತಿದ್ದರು.

ನಾ ಜನಸ್ನೇಹಿ ಆಗಿರುವುದಕ್ಕೊ ಏನೋ ಸಿಟ್ಟಾದ ನಮ್ಮಲೊಬ್ಬ ಮದಗಜ

ನನ್ನ ಕೊಲ್ಲುವಾಗ ದೂರದಿಂದ ನೋಡುತಿದ್ದ ಮನುಜ

ನಾನು ಇವರ ಸ್ನೇಹಿತನಲ್ಲ ಬರೀ ಆನೆಯೆಂಬುದನ್ನು ನೆನಪಿಸಿದ್ದು ನಿಜ‌‌.

-ಪ್ರೇರಕ (ರವಿಕಿರಣ್ ಕೋಟ)

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಇತರರ ಭಾವದಲ್ಲಿ

ಸವಿಗೆ ಪಿಯುಸಿಯಲ್ಲಿ 85% ಮಾರ್ಕ್ಸ್ ಬಂದಿತ್ತು. ಅವಳಿಗೆ ಸಿಗಬೇಕಾದ ಅಂಕಕ್ಕಿಂತ 10%...

ಅ.27: ಸಾಂಪ್ರದಾಯಿಕ ಗೂಡುದೀಪ ಸ್ಪರ್ಧೆ, ಪ್ರದರ್ಶನ ಮತ್ತು ಮಾರಾಟ

ಉಡುಪಿ, ಅ.18: ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಉಡುಪಿ ಜಿಲ್ಲೆ, ಶಬರಿಮಲೆ...

ಕಬ್ಬದುಳುಮೆ: ಹಳೆಗನ್ನಡ ಕಾವ್ಯದೋದು ಕಮ್ಮಟ

ತೆಂಕನಿಡಿಯೂರು, ಅ.18: ನೆಲವನ್ನು ಉತ್ತು ಅದರೊಡಲಿಗೆ ಕಾಳು ಬಿತ್ತಿ ಬಾಳು ಕಟ್ಟಿಕೊಂಡ...

ಇಸ್ರೇಲ್ ದಾಳಿಗೆ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರ್ ಸಾವು

ಯು.ಬಿ.ಎನ್.ಡಿ., ಅ.18: ಹಮಾಸ್ ಮುಖ್ಯಸ್ಥ ಮತ್ತು ಕಳೆದ ವರ್ಷ ಅಕ್ಟೋಬರ್ 7...
error: Content is protected !!