Sunday, February 23, 2025
Sunday, February 23, 2025

ಗ್ರಾಮೀಣ ವಿದ್ಯಾರ್ಥಿಗಳನ್ನು ನಲುಗಿಸಲಿರುವ ಇಂಜಿನಿಯರಿಂಗ್ ಸಿ.ಇ.ಟಿ. ಪರೀಕ್ಷೆ

ಗ್ರಾಮೀಣ ವಿದ್ಯಾರ್ಥಿಗಳನ್ನು ನಲುಗಿಸಲಿರುವ ಇಂಜಿನಿಯರಿಂಗ್ ಸಿ.ಇ.ಟಿ. ಪರೀಕ್ಷೆ

Date:

ಈ ಬಾರಿಯ ಇಂಜಿನಿಯರಿಂಗ್ ಕೋರ್ಸುಗಳ ಸೇರ್ಪಡೆಗೆ ಬೋರ್ಡ್ ಪರೀಕ್ಷೆ ಅಂಕವನ್ನು ಪರಿಗಣಿಸದೇ ಕೇವಲ ಸಿ.ಇ.ಟಿ. ಅಂಕಗಳ ಆರ್ಹತೆಯ ಮೇಲೆ ಇಂಜಿನಿಯರಿಂಗ್ ಸೀಟ್ ಹಂಚಬೇಕೆನ್ನುವ ನಿರ್ಣಯ ಬಹುಮುಖ್ಯವಾಗಿ ಗ್ರಾಮೀಣ ಅದರಲ್ಲೂ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಬಹುದೊಡ್ಡ ಅಘಾತಕಾರಿ ಸುದ್ದಿಯಾಗಿದೆ. ಈ ನಿರ್ಣಯ ಖಂಡಿತವಾಗಿಯೂ ಈ ವರ್ಗದ ವಿದ್ಯಾರ್ಥಿಗಳಿಗೆ ತೀರ ಅನ್ಯಾಯವಾಗುವ ಸಾಧ್ಯತೆ ನಿಚ್ಚಳವಾಗಿದೆ.

ಇದಕ್ಕೆ ಕಾರಣಗಳು ಹಲವು:
1. ಹಿಂದಿನ ಹಲವು ವರ್ಷಗಳ ಸಿ.ಇ.ಟಿ. ಫಲಿತಾಂಶದ ಆಧಾರದ ಅನುಭವದ ಮೇಲೆ ಹೇಳುವುದಿದ್ದರೆ ಬೋರ್ಡ್ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳಿಸಿದ ಗ್ರಾಮೀಣ ಕಾಲೇಜಿನ ವಿದ್ಯಾರ್ಥಿಗಳು ಸಿ.ಇ.ಟಿ.ಪರೀಕ್ಷೆಯಲ್ಲಿ ಹಿಂದೆ ಬಿದ್ದಿರುವ ಸಾಕಷ್ಟು ಉದಾಹರಣೆಗಳಿವೆ. ಇದಕ್ಕೂ ಹಲವು ಕಾರಣವೂ ಇದೆ.

2. ಬೋರ್ಡ್ ಪರೀಕ್ಷಾ ತಯಾರಿ ವಿಧಾನವೇ ಬೇರೆ ಸಿ.ಇ.ಟಿ. ಪರೀಕ್ಷಾ ತಯಾರಿ ವಿಧಾನವೇ ಬೇರೆ. ಸಿ.ಇ.ಟಿ. ಪರೀಕ್ಷೆಗೆ ತಯಾರು ಮಾಡುವ ಟ್ಯೂಷನ್ ಫ್ಯಾಕ್ಟರಿಗಳು ತೀರ ಗ್ರಾಮೀಣ ಪ್ರದೇಶದಲ್ಲಿ ಇಲ್ಲವೇ ಇಲ್ಲ. ಈ ವ್ಯವಸ್ಥೆ ಇರುವುದು ಕೂಡ ನಗರ ಪ್ರದೇಶಗಳಲ್ಲಿ. ಇಲ್ಲಿ ಟ್ಯೂಷನ್ ಪಡೆದುಕೊಳ್ಳುವುದು ಬಡ ವಿದ್ಯಾರ್ಥಿಗಳ ಪಾಲಿಗೆ ಅಸಾಧ್ಯವಾದ ದುಬಾರಿಯ ಮಾತು.

3. ಶಾಲಾ ಕಾಲೇಜುಗಳಲ್ಲಿ ಇಂತಹ ಟ್ಯೂಷನ್ ಕೊಡಬಾರದು ಅನ್ನುವ ನಿಯಮವೇ ಸರ್ಕಾರ ವಿಧಿಸಿರುವಾಗ ಇನ್ನೇನು ಬಂತು ಗ್ರಾಮೀಣ ವಿದ್ಯಾರ್ಥಿಗಳಿಗೆ ಸಿ.ಇ.ಟಿ.ಯ ಕನಸು.

4. ನಮ್ಮ ಶಿಕ್ಷಣದ ಮೀಸಲಾತಿ ಪರಿಸ್ಥಿತಿ ಎಲ್ಲಿಗೆ ಬಂದಿದೆ ಅಂದರೆ ನಗರ ಪ್ರದೇಶದ ಶ್ರೀಮಂತರ ಮಕ್ಕಳು ಗ್ರಾಮೀಣ ಪ್ರದೇಶದಲ್ಲಿರುವ ಉನ್ನತ ಗುಣಮಟ್ಟದ ಶಾಲಾ ಕಾಲೇಜುಗಳಲ್ಲಿ ಕಲಿತು ಗ್ರಾಮೀಣ ಮೀಸಲಾತಿ ಲಾಭ ಪಡೆದುಕೊಳ್ಳುವ ಅವಕಾಶ ಮಾಡಿಕೊಟ್ಟ ಶೈಕ್ಷಣಿಕ ಮೀಸಲಾತಿ ವ್ಯವಸ್ಥೆ !!. ಅದೇ ನಗರ ಪ್ರದೇಶಗಳಲ್ಲಿ ಓದುವ ಬಡ ವಿದ್ಯಾರ್ಥಿಗಳಿಗೆ ಈ ಮೀಸಲಾತಿ ಇಲ್ಲ. ಇದು ನಮ್ಮ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಪ್ರವೇಶಾತಿಯ ನಿಯಮ.

5. ಅಂತೂ ಈ ಬಾರಿಯ ಕೊರೊನಾ ಅನುಕಂಪದ ’ಪರೀಕ್ಷೆ ಇಲ್ಲದೆ ತೇರ್ಗಡೆ ವ್ಯವಸ್ಥೆ’ ಗ್ರಾಮೀಣ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚೆಲ್ಲಾಟವಾಡುವುದಂತೂ ಸತ್ಯ.

ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಿನ್ಸಿಪಲ್ ಸೆಕ್ರೆಟರಿ ಆಗಿ ಮಾಜಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇಮಕ

ನವದೆಹಲಿ, ಫೆ.22: ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಶಕ್ತಿಕಾಂತ ದಾಸ್...

ಕಾರ್ಕಳ ಜ್ಞಾನಸುಧಾ: ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಗಣಿತನಗರ, ಫೆ.22: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್(ರಿ.) ಇದರ ಆಡಳಿತಕ್ಕೆ ಒಳಪಟ್ಟ...

ಸುರಂಗದ ಛಾವಣಿ ಕುಸಿತ; ಸಿಲುಕಿದ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ

ಯು.ಬಿ.ಎನ್.ಡಿ., ಫೆ.22: ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್‌ಎಲ್‌ಬಿಸಿ)...
error: Content is protected !!