Sunday, February 23, 2025
Sunday, February 23, 2025

ಚುರುಕು ಸ್ವಭಾವದ ಚೋರೆ ಹಕ್ಕಿ (ಸ್ಪಾಟೆಡ್ ಡವ್)

ಚುರುಕು ಸ್ವಭಾವದ ಚೋರೆ ಹಕ್ಕಿ (ಸ್ಪಾಟೆಡ್ ಡವ್)

Date:

ಹಕ್ಕಿಯ ವಿಶೇಷತೆ ಏನೆಂದರೆ ಇದು ಆಕಾರದಲ್ಲಿ ಪಾರಿವಾಳವನ್ನೇ ಹೋಲುತ್ತದೆ. ಮೈನಾ ಹಕ್ಕಿಗಿಂತ ದೊಡ್ಡದಾಗಿರುವ ಚೋರೆ ಹಕ್ಕಿ/ ಹೊರಸಲು ಹಕ್ಕಿ ಪಾರಿವಾಳಕ್ಕಿಂತಲೂ ಗಾತ್ರದಲ್ಲಿ ಚಿಕ್ಕದಾಗಿದೆ. ಕೆಂಪು ಮಿಶ್ರಿತ ಕಂದು ಬಣ್ಣದ ರೆಕ್ಕೆ ಹೊಂದಿರುವ ಸ್ಪಾಟೆಡ್ ಡವ್ ಬೆನ್ನಿನ ಮೇಲೆ ಕಪ್ಪು ಚುಕ್ಕಿಗಳಿವೆ.

ಈ ಹಕ್ಕಿಯ ರೆಕ್ಕೆಗಳ ತುದಿಯಲ್ಲಿ ಬೂದಿ ಬಣ್ಣದ ಪಟ್ಟೆಗಳಿವೆ. ಸ್ಪಾಟೆಡ್ ಡವ್ ಹಕ್ಕಿಗಳಲ್ಲಿ ಒಂದು ವಿಶೇಷತೆಯೇನೆಂದರೆ, ಗಂಡು ಹೆಣ್ಣುಗಳಲ್ಲಿ ವ್ಯತ್ಯಾಸವಿರದಿರುವುದು. ಕಾಡಿನ ನಡುವೆ ಇರುವ ಮೈದಾನಗಳಲ್ಲಿ ಹೆಚ್ಚಾಗಿ ಜೋಡಿಗಳಲ್ಲಿ ಇಲ್ಲವೇ ಚಿಕ್ಕ ಗುಂಪುಗಳಲ್ಲಿ ಕಂಡುಬರುವ ಚೋರೆ ಹಕ್ಕಿಗಳು ಗದ್ದೆಗಳಲ್ಲಿಯೂ ಕಾಣಸಿಗುತ್ತವೆ.

ಚೋರೆ ಹಕ್ಕಿ (ಸ್ಪಾಟೆಡ್ ಡವ್) ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ಬರ್ಮಾ ಹಾಗೂ ಪಾಕಿಸ್ತಾನಗಳಲ್ಲಿ ಅಧಿಕವಾಗಿ ಕಾಣಸಿಗುತ್ತವೆ. ಧಾನ್ಯ, ಕಾಳುಗಳನ್ನೂ ತಿನ್ನುವ ಈ ಹಕ್ಕಿಗಳಿಗೆ ಸರಿಯಾಗಿ ರಕ್ಷಣೆ ಕೊಟ್ಟಲ್ಲಿ ಸಾಕಿದ ಹಕ್ಕಿಗಳಂತೆಯೇ ಮನೆಗಳ ಬಳಿ ಮೇಯುತ್ತವೆ.

ಮನೆಯಲ್ಲಿ ಅನಾವಶ್ಯಕವಾಗಿ ಹಕ್ಕಿಗಳನ್ನು ಬಂಧಿಸುವ ಬದಲು ಇಂತಹ ನೈಸರ್ಗಿಕ ಆನಂದವನ್ನು ಪಡೆಯಬಹುದು. ಹಲವು ಪಕ್ಷಿಪ್ರಿಯರ ಮನೆಯಂಗಳದಲ್ಲಿ ನಿರ್ಭೀತಿಯಿಂದ ಸ್ಪಾಟೆಡ್ ಡವ್ ಅತ್ತಿತ್ತ ಹೋಗುವುದನ್ನು ಕಾಣಬಹುದು.

ಬಹಳ ಚುರುಕು ಸ್ವಭಾವದ ಈ ಹಕ್ಕಿಗಳು ಬಹಳ ವೇಗವಾಗಿ ಹಾರುತ್ತವೆ. ಸ್ಪಾಟೆಡ್ ಡವ್ ಹಾರುವ ಶೈಲಿಯೇ ಅತ್ಯದ್ಭುತ. ಪಟಪಟ ರೆಕ್ಕೆ ಸದ್ದನ್ನು ಮಾಡುತ್ತ ಟೇಕ್ ಆಫ್ ಆಗುವ ಸಂದರ್ಭದಲ್ಲಿ ಹಾರುವ ವೇಗಕ್ಕೆ ಸಿಳ್ಳು ಹೊಡೆದಂತೆ ಸದ್ದಾಗುತ್ತದೆ.

ಮಧ್ಯಾಹ್ನದ ಹೊತ್ತಿಗೆ ಕೊಂಬೆಗಳ ಮೇಲಿನಿಂದ “ಕರ‍್ರೂರೂ” ಎಂದು ಕೂಗುವ ಸ್ಪಾಟೆಡ್ ಡವ್ ಕಡ್ಡಿಗಳನ್ನು ಬಳಸಿ ಮರಗಳ ಕವಲಿನಲ್ಲಿ ಅಸ್ತವ್ಯಸ್ತವಾಗಿ ಗೂಡನ್ನು ನಿರ್ಮಿಸುತ್ತವೆ.

-ಗಣೇಶ್ ಪ್ರಸಾದ್

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲದಲ್ಲಿ ಶಸ್ತ್ರಚಿಕಿತ್ಸಾ ಆಂಕೊಲಾಜಿ ರಾಷ್ಟ್ರೀಯ ಸಮ್ಮೇಳನ

ಮಣಿಪಾಲ, ಫೆ.22: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪ್ರತಿಷ್ಠಿತ ಡಾ....

ಪ್ರಧಾನಿ ನರೇಂದ್ರ ಮೋದಿ ಅವರ ಪ್ರಿನ್ಸಿಪಲ್ ಸೆಕ್ರೆಟರಿ ಆಗಿ ಮಾಜಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ನೇಮಕ

ನವದೆಹಲಿ, ಫೆ.22: ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾಜಿ ಗವರ್ನರ್ ಶಕ್ತಿಕಾಂತ ದಾಸ್...

ಕಾರ್ಕಳ ಜ್ಞಾನಸುಧಾ: ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ

ಗಣಿತನಗರ, ಫೆ.22: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್(ರಿ.) ಇದರ ಆಡಳಿತಕ್ಕೆ ಒಳಪಟ್ಟ...

ಸುರಂಗದ ಛಾವಣಿ ಕುಸಿತ; ಸಿಲುಕಿದ ಕಾರ್ಮಿಕರಿಗಾಗಿ ರಕ್ಷಣಾ ಕಾರ್ಯಾಚರಣೆ

ಯು.ಬಿ.ಎನ್.ಡಿ., ಫೆ.22: ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್‌ಎಲ್‌ಬಿಸಿ)...
error: Content is protected !!