Wednesday, February 26, 2025
Wednesday, February 26, 2025

ಆಕಾಶದಲ್ಲಿ ನಮ್ಮ ವಿಜ್ಞಾನಿಗಳ ಅದ್ಭುತ ಪ್ರಯೋಗಗಳು

ಆಕಾಶದಲ್ಲಿ ನಮ್ಮ ವಿಜ್ಞಾನಿಗಳ ಅದ್ಭುತ ಪ್ರಯೋಗಗಳು

Date:

ಮ್ಮ ದೇಶದ ಹೆಮ್ಮೆಯ ಚಂದ್ರಯಾನ 3 ರ ಉಡ್ಡಯನೆ, ಜುಲೈ 14ರಂದಾಗಿತ್ತು. ರಾಕೇಟಿನಿಂದ ಬೇಕಾದ ಎತ್ತರಕ್ಕೆ ಚಿಮ್ನಿದ ನಮ್ಮ ರೋವರ್ ಭೂಮಿಯಿಂದ ಸುಮಾರು 170 ಕಿಮೀ ಎತ್ತರದಲ್ಲಿ ದೀರ್ಘವೃತ್ತಾಕಾರದ 170 x 36 500 ಕಿಮೀ ಕಕ್ಷೆಯಲ್ಲಿ ಭೂ ಪ್ರದಕ್ಷಿಣೆ ಅಂದೇ ಆರಂಭಿಸಿತು. ಅದರ ಸುತ್ತುವಿಕೆಯ ಕಕ್ಷೆ ವೃದ್ಧಿಯನ್ನು ನಮ್ಮ ವಿಜ್ಞಾನಿಗಳು ಹೆಚ್ಚಿಸುತ್ತಾ ಹೋದರು. ಜುಲೈ 15 ರಂದು 173 x 41, 762 ಕಿಮೀಗೆ , ಜುಲೈ 17 ರಂದು 226 x 41, 603 ಕಿಮೀ, ಜುಲೈ 18 ರಂದು 228 x 51, 400 ಕಿಮೀ, ಜುಲೈ 20 ರಂದು 233 x 71, 351 ಕಿಮೀ, ಜುಲೈ 25 ರಂದು 236 x 1, 27, 603 ಕಿಮೀ ಗಳಿಗೆ ಏರಿಸುತ್ತಾ ಭೂ ಪ್ರದಕ್ಷಿಣೆ ಮಾಡಿಸಿದರು.

ನಂತರ ಆಗಸ್ಟ್ 1 ರಂದು 288 x 3, 69, 328 ಕಿಮೀ ಗೆ ದೂಡಿದ್ದರು. ಅಂದು ಸೂಪರ್ ಮೂನ್. ಆದಿನ ಚಂದ್ರ ಭೂಮಿಯಿಂದ 3, 57, 700 ಕಿಮೀ ದೂರದಲ್ಲಿತ್ತು. ಅದು ಭೂಮಿಗೆ ಸರಾಸರಿ ದೂರಕ್ಕಿಂತ ಸುಮಾರು 27 ಸಾವಿರ ಕಿಮೀ ಹತ್ತಿರ. ಇಲ್ಲಿಯವರೆಗೂ ಭೂ ಗುರುತ್ವದಲ್ಲೇ ತಿರುಗುತ್ತಿದ್ದ ನಮ್ಮ ರೋವರ್ ಆಗಸ್ಟ್ 1 ರಂದು ಈ ರೊವರ್ ನ್ನು ಚಂದ್ರನಲ್ಲಿಗೆ ಒಡ್ಡುವ ಪ್ರಕ್ರಿಯೆ ನಡೆಯಿತು. ಆಗಸ್ಟ್ 5ರಂದು ನಿನ್ನೆ ಚಂದ್ರ 3, 65, 945 ಕಿಮೀ ದೂರದಲ್ಲಿದ್ದಾಗ ಸಂಜೆ 7:30 ಕ್ಕೆ ನಮ್ಮ ರೋವರ್ ಚಂದ್ರನ ಸಮೀಪ ಬರುತ್ತಿತ್ತು. ಆಗ ಮತ್ತೊಂದು ಪ್ರಯೋಗ ಮಾಡಿ ಈ ರೋವರ್ ನ್ನು ಚಂದ್ರನ ಗುರುತ್ವ ಕಕ್ಷೆಗೆ ದೂಡಿದರು. ಈ ಸಾಹಸಮಯ ಪ್ರಯೋಗ ನಿನ್ನೆ ಸಂಜೆ ಮುಗಿಯಿತು. ಇಲ್ಲಿಂದ ಇನ್ನೂ ಕ್ಲಿಷ್ಟ ಕ್ರಿಯೆಗಳಿವೆ. ಇನ್ನು ಕೆಲ ದಿನಗಳು ಚಂದ್ರನ ಸುತ್ತ ದೀರ್ಘವೃತ್ತಾಕಾರದ ನಮ್ಮ ರೋವರ್ ನ ಪಥ. ಅದರ ಪೆರಿಜಿ (ದೂರದ ದೂರ) ವನ್ನು ಕಡಿಮೆ ಕಡಿಮೆ ಮಾಡುತ್ತಾ ರೋವರ್ ಚಂದ್ರನಿಗೆ ದೀರ್ಘವೃತ್ತ ಪ್ರದಕ್ಷಿಣೆಗಳನ್ನು ಮುಗಿಸಿ ಕೊನೆಗೆ ವೃತ್ತಾಕಾರದ ಪ್ರದಕ್ಷಿಣೆ ಬರಲಿದೆ.

ಆಗಸ್ಟ್ 17 ರಂದು ರೋವರ್ ನಿಂದ ಲ್ಯಾಂಡರ್ ಬೇರ್ಪಡಲಿದೆ. ನಂತರ ಲ್ಯಾಂಡರ್ ನ್ನು ಇಳಿಸುವ ಅತೀ ಕ್ಲಿಷ್ಟಕರ ಪ್ರಯೋಗ ಆಗಸ್ಟ್ 23 ರಂದು ಸಂಜೆ 5:30 ಕ್ಕೆ ಅಂತ ಇದೀಗ ನಿರ್ಧರಿಸಿದ್ದಾರೆ. ಚಂದ್ರನ ಮೇಲೆ ನಮ್ಮ ಲ್ಯಾಂಡರ್ ಇಳಿಸುವಕೆ ಈ ಎಲ್ಲಾ ಪ್ರಯೋಗಗಳು ಸಫಲವಾದರೆ ನಂತರ ಆ ಲ್ಯಾಂಡರ್ನಲ್ಲಿ ಅಡಗಿ ಕುಳಿತ ನಮ್ಮ ಮುದ್ದು ಪ್ರಜ್ಞಾನ ಮುಂದಿನ 14 ದಿನಗಳು ಚಂದ್ರನ ಮೇಲೆ ಓಡಾಡಿ ಪ್ರಯೋಗಗಳನ್ನು ಮಾಡಲಿದೆ.

ನಮ್ಮ ಇಸ್ರೋ ವಿಜ್ನಾನಿಗಳ ಈ ನಿರಂತರ ಕ್ಲಿಷ್ಟ ಪ್ರಯೋಗಗಳು ಸಫಲವಾಗಲೆಂದು ಶುಭ ಹಾರೈಸೋಣ.

-ಡಾ. ಎ. ಪಿ. ಭಟ್, ಉಡುಪಿ

 

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೊಂಬೆಳಕು ಕ್ರೀಡಾ ಹಾಗೂ ಸಾಂಸ್ಕೃತಿಕ ಉತ್ಸವದಲ್ಲಿ ಸಾಲಿಗ್ರಾಮ ಪ.ಪಂ.ಗೆ ನಾಲ್ಕು ಬಹುಮಾನ

ಉಡುಪಿ, ಫೆ.25: ಮಂಗಳೂರಿನ ಅಡ್ಯಾರು ಸಹ್ಯಾದ್ರಿ ಕ್ರೀಡಾಂಗಣದಲ್ಲಿ ನಡೆದ ಪಂಚಾಯತ್ ರಾಜ್...

ಆಸ್ತಿ ತೆರಿಗೆ ಪಾವತಿಗೆ ಸೂಚನೆ

ಉಡುಪಿ, ಫೆ.25: ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಕಟ್ಟಡ / ನಿವೇಶನಗಳನ್ನು...

ವೈದ್ಯಾಧಿಕಾರಿ ಹುದ್ದೆ: ಅರ್ಜಿ ಆಹ್ವಾನ

ಉಡುಪಿ, ಫೆ.25: ಆರೋಗ್ಯ ಇಲಾಖೆಯ ವತಿಯಿಂದ ಜಿಲ್ಲೆಯ ಕಾರ್ಕಳ ಸಾರ್ವಜನಿಕ ಆಸ್ಪತ್ರೆಯಲ್ಲಿ...

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಿಣ್ಣರು ಶ್ರೀಕೃಷ್ಣನ ಫ್ರೆಂಡ್ಸ್: ಪುತ್ತಿಗೆ ಶ್ರೀ

ಉಡುಪಿ, ಫೆ.25: ಶ್ರೀಕೃಷ್ಣನಿಗೆ ಮಕ್ಕಳು ಎಂದರೆ ಬಹಳ ಪ್ರೀತಿ.​ ಕೃಷ್ಣನು ತನ್ನ...
error: Content is protected !!