Tuesday, October 15, 2024
Tuesday, October 15, 2024

ಯಕ್ಷಗಾನ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ರತ್ನಾಕರ ಶೆಣೈಗೆ ಗೌರವ ಅಭಿನಂದನೆ

ಯಕ್ಷಗಾನ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದ ರತ್ನಾಕರ ಶೆಣೈಗೆ ಗೌರವ ಅಭಿನಂದನೆ

Date:

ಉಡುಪಿ, ಅ.15: ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ತೆಂಕಪೇಟೆ ಉಡುಪಿ ಶ್ರೀ ಶಾರದಾ ಮಹೋತ್ಸವ ಸಮಿತಿ ವತಿಯಿಂದ ನಡೆದ ನವರಾತ್ರಿಯ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಿವಪ್ರಭಾ ಯಕ್ಷ ವಿಶ್ವ ಬಳಗ ಶಿವಪುರ ಇಲ್ಲಿನ ವಿದ್ಯಾರ್ಥಿಗಳಿಂದ ಕೊಂಕಣಿ ಯಕ್ಷಗಾನ – ಶ್ರೀ ಕೃಷ್ಣ ಪುಷ್ಪ ವಿಲಾಸ ಜರಗಿತು. ಯಕ್ಷ ನಿರ್ದೇಶಕ ಮತ್ತು ಭಾಗವತಿಕೆಯಲ್ಲಿ ರತ್ನಾಕರ ಶೆಣೈ ಶಿವಪುರ, ಮದ್ದಲೆಯಲ್ಲಿ ಆನಂದ್ ಭಟ್ ಮತ್ತು ಪ್ರದೀಪ್ ಭಟ್, ಚೆಂಡೆಯಲ್ಲಿ ಗಣೇಶ್ ಶೆಣೈ ಮಾಸ್ಟರ್ ಸಂದೇಶ್ ಸಹಕರಿಸಿದರು.

ಯಕ್ಷಗಾನ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗೈದು ಅಂತರರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತರು ಯಕ್ಷ ಗುರುಗಳಾಗಿ ಉಚಿತವಾಗಿ ಯಕ್ಷಗಾನ ತರಬೇತಿ ನೀಡುವುದರ ಜೊತೆಗೆ 100ಕ್ಕೂ ಹೆಚ್ಚು ಕಡೆಗಳಲ್ಲಿ ಕನ್ನಡ, ಕೊಂಕಣಿ, ತುಳು ಭಾಷೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿ ಜನಮೆಚ್ಚುಗೆ ಪಡೆದು ಉಡುಪಿ ಜಿಲ್ಲೆಯ ವಿವಿಧ ಆಶ್ರಮಗಳಲ್ಲಿ ಉಚಿತ ಪ್ರದರ್ಶನ ನೀಡಿದ ರತ್ನಾಕರ ಶೆಣೈ ಶಿವಪು ಅವರನ್ನು ದೇವಳದ ವತಿಯಿಂದ ಸಮ್ಮಾನಿಸಲಾಯಿತು. ದೇವಳದ ಆಡಳಿತ ಮೊಕ್ತೇಸರ ಪಿ.ವಿ.ಶೆಣೈ, ಯುವಕ ಮಂಡಳಿಯ ಅಧ್ಯಕ್ಷರಾದ ನಿತೇಶ್ ಶೆಣೈ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಜಿಲ್ಲಾ ಸ್ಕೌಟ್ ಆಯುಕ್ತರಾಗಿ ಜನಾರ್ದನ್ ಕೊಡವೂರು ಆಯ್ಕೆ

ಉಡುಪಿ, ಅ.15: ಭಾರತ್ ಸ್ಕೌಟ್ ಆ್ಯಂಡ್ ಗೈಡ್ಸ್ ಉಡುಪಿ ಜಿಲ್ಲಾ ಮುಖ್ಯ...

ನೀರನ್ನು ಕುದಿಸಿ ಕುಡಿಯುವಂತೆ ಸೂಚನೆ

ಉಡುಪಿ, ಅ.15: ಉಡುಪಿ ನಗರಸಭಾ ವ್ಯಾಪ್ತಿಯ 35 ವಾರ್ಡ್‌ ಗಳಿಗೆ ಕುಡಿಯುವ...

ಅ.20 ರಂದು ಉದ್ಯೋಗ ಮೇಳ

ಉಡುಪಿ, ಅ.15: ಭಾರತ ಸರ್ಕಾರದ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಮಂತ್ರಾಲಯದ...

ಗಂಗೊಳ್ಳಿಯಲ್ಲಿ ಗಮನ ಸೆಳೆದ ಅಯೋಧ್ಯಾ ರಾಮ ಮಂದಿರ ಟ್ಯಾಬ್ಲೋ

ಕುಂದಾಪುರ, ಅ.15: ಗಂಗೊಳ್ಳಿಯ ಸಾರ್ವಜನಿಕ ಶ್ರೀ ಶಾರದೋತ್ಸವದ ಸುವರ್ಣ ಮಹೋತ್ಸವದ ಮೆರವಣಿಗೆಯಲ್ಲಿ...
error: Content is protected !!